ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಇಂಡಿಯಲ್ಲಿ ಎ.ಸಿ ಅವರಿಂದ ರೌಂಡ್ಸ

ಇಂಡಿ: ನೂತನವಾಗಿ ಅಧಿಕಾರ ಸ್ವೀಕರಿಸಿದ ಎಸಿ ಅಬೀದ್ ಗದ್ಯಾಳ
ಶುಕ್ರವಾರ ಬೆಳಿಗ್ಗೆ ೬ ಗಂಟೆಯಿಂದ ಪಟ್ಟಣದ ವಿವಿಧ
ವಾರ್ಡು,ಇಂದಿರಾ ಕ್ಯಾಂಟೀನು ಮತ್ತು ಘನ ತ್ಯಾಜ್ಯ
ವಿಲೇವಾರಿ ಘಟಕ ವೀಕ್ಷಿಸಿದರು.
ಬೆಳೆಗ್ಗೆ ವಾರ್ಡ ನಂ ೧ ಅಂಬೇಡ್ಕರ ನಗರಕ್ಕೆ ಭೇಟಿ
ನೀಡಿ ಅಲ್ಲಿ ಸ್ವಚ್ಛತೆಯ ಕುರಿತು ಪರಿಶೀಲಿಸಿದರು.
ನಂತರ ಹುಸೇನಬಾಷಾ ದರ್ಗಾ ಹತ್ತಿರ ಬಂದು ಅಲ್ಲಿ
ಮೊಹರಮ್ ನಡೆಯುವ ಸ್ಥಳದಲ್ಲಿ ಕುಡಿಯುವ ನೀರಿನ ವ್ಯವಸ್ಥೆ,
ಸ್ವಚ್ಛತೆ ವೀಕ್ಷಿಸಿದರು.ದರ್ಗಾ ಸಮಿತಿಯ
ಆರ್.ಕೆ.ಮಕಾನದಾರ,
ಮಹಿಬೂಬ ಮೌಲಾಸಾಬ
ಮಕಾನದಾರ,ತುಕಾರಾಮ ವಾಲಿಕಾರ,ಅದಿಲ್
ಮಕಾನದಾರ,ಕಮರಲಿ ಮಕಾನದಾರ,
ಸಿದ್ದು
ಐರೋಡಗಿ ಇವರ ಜೊತೆಗೆ ಮೊಹರಮ ಹಬ್ಬದ
ಕುರಿತು ಚರ್ಚಿಸಿದರು.
ನಂತರ ಬಸ್ ನಿಲ್ದಾಣ ಹತ್ತಿರದ ಇಂದಿರಾ ಕ್ಯಾಂಟೀನ್ ಭೇಟಿ
ನೀಡಿ ಅಲ್ಲಿ ವಿದ್ಯಾರ್ಥಿಗಳೊಂದಿಗೆ ಉಪಹಾರ ಸೇವಿಸಿದರು.
ಗುಣಮಟ್ಟ ಕುರಿತು ಕ್ಯಾಂಟಿನ ಗುತ್ತಿಗೆದಾರರ
ಜೊತೆ ಚರ್ಚಿಸಿದರು ಮತ್ತು ವಿದ್ಯಾರ್ಥಿಗಳ ಮತ್ತು
ಸಾರ್ವಜನಿಕರ ಜೊತೆ ಇಂದಿರಾ ಕ್ಯಾಂಟೀನ್ ದಲ್ಲಿ ನೀಡುವ
ಆಹಾರದ ಗುಣಮಟ್ಟ ಮತ್ತು ಸ್ವಚ್ಛತೆಯ
ಕುರಿತು ಚರ್ಚಿಸಿದರು.
ಪುರಸಭೆಯ ಘನ ತ್ಯಾಜ್ಯ ಘಟಕಕ್ಕೆ ಭೇಟಿ ನೀಡಿ
ಪರಿಕ್ಷೀಸಿದರು.
ಪುರಸಭೆಯ ಸೋಮು ನಾಯಕ,ಚಂದು
ಕಾಲೆಭಾಗ ಮತ್ತಿತರಿದ್ದರು.

ವರದಿ:ಅರವಿಂದ್ ಕಾಂಬಳೆ ಇಂಡಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ