ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕನ್ನಡ ಎನ್ನುವುದು ಒಂದು ಭಾಷೆಯಲ್ಲ ಅದೊಂದು ಭಾವೈಕ್ಯದ ಸಂಕೇತ:ಮೂಲಗೆ

ಔರಾದ: ತಾಲೂಕಿನ ಮಾನೂರ(ಕೆ) ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ “ಸಾಹಿತ್ಯ ಸೊಬಗು” ಕಾರ್ಯಕ್ರಮದ ವಿಶೇಷ ಉಪನ್ಯಾದಲ್ಲಿ ಮಾತನಾಡಿದ ಸಾಹಿತಿಗಳಾದ ಜಗನ್ನಾಥ ಮೂಲಗೆಯವರು ಗಡಿ ಭಾಗದಲ್ಲಿನ ಮುದ್ದು ಮಕ್ಕಳ ಮನಸ್ಸಿನಲ್ಲಿ ಕನ್ನಡ ಪ್ರೇಮ ಬೆಳೆಸುವುದು ಅನಿವಾರ್ಯ, ಭಾಷೆ ಉಳಿದರೆ ನಮ್ಮ ನಾಡ ನುಡಿ ಸಂಸ್ಕೃತಿಗೆ ಉಳಿಗಾಲವಿದೆ, ಕನ್ನಡ ಎನ್ನುವುದು ಭಾಷೆವಲ್ಲ ಭಾವೈಕ್ಯದ ಸಂಕೇತ ಸಂಬಂಧಗಳು ಬೆಸೆಯುವುದು, ಬದುಕನ್ನು ಕಟ್ಟಿ ಕೊಡುವುದು, ಭಾಷೆ ಉಳಿಸಿ ಬೆಳೆಸುವುದು ಚಿಕ್ಕ ವಯಸ್ಸಿನಿಂದಲೇ ಶುರುವಾಗಬೇಕು ಎಂದು ಅಭಿಪ್ರಾಯಪಟ್ಟರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ ಶಾಲಿವಾನ ಉದಗಿರೆ ಕಾರ್ಯಕ್ರಮವು ಉದ್ಘಾಟಿಸಿ ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ಹಾಗೆ ಗಡಿ ಭಾಗದ ಮಕ್ಕಳ ಮನಸ್ಸಿನಲ್ಲಿ ಕನ್ನಡ ಪ್ರೇಮವನ್ನು ಹುಟ್ಟಿಸುವ ಕಾರ್ಯಕ್ರಮವೇ ಸಾಹಿತ್ಯ ಸೊಬಗು ಮೂರು ರಾಜ್ಯಗಳ ಗಡಿ ಭಾಗದಲ್ಲಿ ಈ ಕಾರ್ಯಕ್ರಮ ಆಯೋಜಿಸಿದು ಅತಿ ಸಂತೋಷ ನೀಡಿವೆ ಎಂದು ಉದ್ಘಾಟನೆಯ ನುಡಿ ನುಡಿದರು.
ಈ ಸಂದರ್ಭದಲ್ಲಿ ದೇವಿದಾಸ ಮಡಿವಾಳ ಮುಖ್ಯ ಶಿಕ್ಷಕರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಎಂ ಡಿ ನೈಮೋದಿನ,ಝರೆಪ್ಪ ಬಿರಾದರ, ಜ್ಞಾನೇಶ್ವರ ವಾಡಿಕಾರ, ಮಧುಕರ ಸುವರ್ಣಕಾರ, ಉದಯಕುಮಾರ ಬಡಚ್ಚಿ , ಸಂಜೀವಕುಮಾರ, ಮತ್ತು ಶಾಲಾ ಮುದ್ದು ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ:ಅಮರ ಮುಕ್ತೆದಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ