ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಹಾಲಿನ ಡೇರಿಗಳು ಗ್ರಾಮೀಣ ರೈತರ ಪಾಲಿಗೆ ತಾಯಿಸಮಾನವಾಗಿವೆ:ಗೌರಮ್ಮ ಗೋನಾಳ್

ಕೊಪ್ಪಳ/ಕಾರಟಗಿ:ಶುಕ್ರವಾರ ಸಿದ್ದರಾಮಯ್ಯ ಸರಕಾರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘದ ರೈತರಿಗೆ ರೂ.3=00 ದರ ಹೆಚ್ಚು ಮಾಡುವುದರಿಂದ ತಾಲೂಕಿನ ಸಿಂಗನಾಳ ಗ್ರಾಮದ ಸಂಘದ ಅಧ್ಯಕ್ಷರಾದ ಗೌರಮ್ಮ ಗೋನಾಳ್ ರವರು ಸರಕಾರಕ್ಕೆ ಅಭಿನಂದನೆ ಸಲ್ಲಿಸುವ ಮೂಲಕ ವರದಿಗಾರರೊಂದಿಗೆ ಅವರು ಮಾತನಾಡಿದರು.
ಮಕ್ಕಳನ್ನು ತಾಯಿ ಹೇಗೆ ಪೋಷಿಸುತ್ತಾಳೋ ಹಾಗೇ ಹಾಲಿನ ಡೈರಿಗಳು ಕೂಡಾ ರೈತರನ್ನು ಪೋಷಿಸುತ್ತಿದ್ದು ರೈತರು ನೆಮ್ಮದಿಯಾಗಿ ಜೀವನ ಸಾಗಿಸಲು ಡೈರಿಗಳು ಪ್ರಮುಖ ಪಾತ್ರ ವಹಿಸುತ್ತಿವೆ ಎಂದರು ಹಳ್ಳಿಯಲ್ಲಿ ರೈತರಿಗೆ ಹೈನುಗಾರಿಕೆ ಬೆನ್ನೆಲುಬಾಗಿದೆ,ಸಣ್ಣ ಬಂಡವಾಳದಿಂದ ರೈತರು ಹೈನುಗಾರಿಕೆಯನ್ನು ಮಾಡುತ್ತಿದ್ದಾರೆ,ಸರಕಾರದ ಪ್ರೋತ್ಸಾಹ ಧನ ಲೀಟರಿಗೆ ಸರಕಾರದಿಂದ ಐದು ರೂಪಾಯಿ ಅವರ ಖಾತೆಗೆ ನೇರವಾಗಿ ಜಮಾ ಆಗುತ್ತಿದೆ,ಒಕ್ಕೂಟಗಳಿಂದ ಸರಕಾರಕ್ಕೆ ಐದು ರೂಪಾಯಿ ಹೆಚ್ಚಳ ಮಾಡುವಂತೆ ಸರಕಾರಕ್ಕೆ ಪ್ರಸ್ತಾವನೆ ಮಾಡಲಾಯಿತು,ಆದರೆ ರೈತರಿಗೆ ಈಗ ಮಾಡಿರುವ ದರ 3ರೂ ತೃಪ್ತಿ ತಂದಿದೆ. ಆದರೆ ಹಾಲಿನ ಗುಣಮಟ್ಟದೊಂದಿಗೆ ಹಾಲಿನ ದರ ನಿಗದಿಪಡಿಸಲಾಗಿದೆ ಖಾಸಗಿ ಡೈರಿಯಲ್ಲಿ ರೈತರಿಗೆ ಪ್ರೋತ್ಸಾಹ ಧನ ಸೇರಿಸಿ ನೇರವಾಗಿ ಹಣ ಜಮಾ ಆಗುತ್ತಿದ್ದು,ಖಾಸಗಿ ಡೈರಿಗೆ ಯಾವುದೇ ಸರ್ಕಾರದ ನಿಯಮ ಉಲ್ಲಂಘನೆ ಮಾಡಿ ಹಾಲು ಸಂಗ್ರಹಣೆ ಮಾಡುತ್ತಿದೆ,ಕಲಬೆರಿಕೆ ಹಾಲು ಸಂಗ್ರಾಮ ಮಾಡುತ್ತಿದ್ದು,ರಾಜ್ಯದಲ್ಲಿ ಖಾಸಗಿ ಡೈರಿಗಳು ಹೆಚ್ಚಾಗಲು ಕಾರಣ ಸರಕಾರದ ನಿರ್ಲಕ್ಷ, ಸರಕಾರಿ ಅಧಿಕಾರಗಳ ಕರ್ತವ್ಯವನ್ನು ದುರ್ಬಳಕೆ ಮಾಡಿಕೊಳ್ಳದಿದ್ದರೆ,ರೈತರು ಖಾಸಿಗೆ ಡೇರಿಗೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ ಹಾಲು ಉತ್ಪಾದಕರ ಸಂಘಗಳ ಸರಕಾರದ ನಿಯಮಡಿಯಲ್ಲಿ ಹಾಲನ್ನು ಸಂಗ್ರಹಿಸಿ, ಬೆಲೆ ಏರಿಕೆ ಸಮ್ಮತಿಯ ನಡುವೆ ಹಾಲಿನ ಗುಣಮಟ್ಟವನ್ನು ಕಾಯ್ದುಕೊಳ್ಳುವ ಮೂಲಕ ರೈತರಿಗೆ ಹೆಚ್ಚಿನ ದರ ಕೊಡಲು ಸರಕಾರ ನಿರ್ಧರಿಸಿದೆ, ಸರಕಾರವು ಇನ್ನು ಕೆಲವು ನಿಯಮಗಳನ್ನು ಬದಲಾವಣೆ ಮಾಡಬೇಕಾಗಿದೆ ಹಾಲಿನ ಗುಣಮಟ್ಟದೊಂದಿಗೆ ಸರಕಾರದ ಇಲಾಖೆಯ ಪಶುಸಂಗೋಪನೆ ಹಾಗೂ ಗ್ರಾಮ ಪಂಚಾಯಿತಿ ಸೇರಿದಂತೆ ಸರಕಾರದ ಕಚೇರಿಗಳಲ್ಲಿ ಸಹಕಾರ ಸಂಘದ ರೈತರಿಗೆ ನೇರವಾಗಿ ಹೈನುಗಾರಿಕೆಯ ಸೌಲಭ್ಯವನ್ನು ದೊರಕಿಸಿ ಕೊಡಬೇಕು,ಸಂಘದ ಸಿಬ್ಬಂದಿ ವರ್ಗದವರಿಗೆ ಸರಕಾರದಿಂದ ಗೌರವಧನ ಧನ ನೀಡಬೇಕೆಂದರು ಸಿಂಗನಾಳ ಹಾಲು ಉತ್ಪಾದಕರ ಮಹಿಳಾ ಸಂಘದ ಅಧ್ಯಕ್ಷರಾದ ಶ್ರೀ ಮತಿ ಗೌರಮ್ಮ ಗೋನಾಳ್ ವರದಿಗಾರರಿಗೆ ತಿಳಿಸಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ