ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ತಾಲೂಕ ದಂಡಾಧಿಕಾರಿ ಸುರೇಂದ್ರ ಮೂರ್ತಿಗೆ ಮಾಹಿತಿ ಹಕ್ಕು ಆಯೋಗದಿಂದ 15000/- ರೂ ದಂಡ

ರಾಮನಗರ/ದಾಸರಹಳ್ಳಿ:ಕರ್ನಾಟಕ ಬಹುಜನ ಚಳವಳಿ ರಾಮನಗರ ಜಿಲ್ಲಾಧ್ಯಕ್ಷರು ಹಾಗೂ ಸಾಮಾಜಿಕ ಹೋರಾಟಗಾರರಾದ ಮಾಗಡಿ ತಾಲ್ಲೂಕಿನ ನರಸಾಪುರದ ಕಿರಣ್ ಕುಮಾರ್ ಅವರ ದೂರಿನ ಮೇರೆಗೆ ಕಾಲ ಅವಧಿಯೊಳಗೆ ಮಾಹಿತಿ ನೀಡಿದ ಮಾಗಡಿ ತಾಲೂಕ ದಂಡಾಧಿಕಾರಿ (ತಹಶೀಲ್ದಾರ್) ಹಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿ ಸುರೇಂದ್ರ ಮೂರ್ತಿ ಅವರಿಗೆ ರಾಜ್ಯ ಮಾಹಿತಿ ಹಕ್ಕು ಆಯೋಗದ ಮಾಹಿತಿ ಆಯುಕ್ತರಾದ ಕೆ.ಪಿ.ಮಂಜುನಾಥ ತೆರೆದ ನ್ಯಾಯಾಲಯದಲ್ಲಿ 15000 ರೂ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಅರ್ಜಿದಾರರು ಮಾಗಡಿ ತಾಲ್ಲೂಕ ಮಾಡಬಾಳ್ ಹೋಬಳಿ ಹಂಚಿಕುಪ್ಪೆ ಗ್ರಾಮದ ಸರ್ವೆ ನಂ.63/ಪಿ8 ರಲ್ಲಿ ಹೊಸೂರಯ್ಯ ಬಿನ್,ದೊಡ್ಡ ಮಲ್ಲಯ್ಯ ಎಂಬುವವರಿಗೆ 4 ಎಕರೆ,ಅ.ಓಠ. 28/77-78 ರಲ್ಲಿ ಮಂಜೂರಾಗಿದ್ದು ಇದರ ಬಗ್ಗೆ ಮಾಹಿತಿ ನೀಡುವಂತೆ ಸಾರ್ವಜನಿಕ ಮಾಹಿತಿ ಹಕ್ಕಿನ ಅಡಿಯಲ್ಲಿ ಅಧಿಕಾರಿಯಾದ ತಾಲೂಕ ದಂಡಾಧಿಕಾರಿ ಸುರೇಂದ್ರ ಮೂರ್ತಿಯವರಿಗೆ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೋರಿದ್ದರು.
ಆದರೆ ಇದಕ್ಕೆ ತಾಲೂಕ ದಂಡಾಧಿಕಾರಿ ಸಕಾಲಕ್ಕೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಅವಲೋಕಿಸಿದ ಆಯೋಗವು ವಿಚಾರಣೆಗೆ ಗೈರು ಹಾಜರಾಗಿದ್ದರು ಹಾಗೂ ಆಯೋಗದ ಬಗ್ಗೆ ಅಸಡ್ಡೆ ತೋರಿರುವುದನ್ನು ಮನಗಂಡ ಆಯೋಗ ಗಂಭೀರವಾಗಿ ಪರಿಗಣಿಸಿ ಮಾಹಿತಿ ಹಕ್ಕು ಆಯೋಗವು ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ತಾಲೂಕ ದಂಡಾಧಿಕಾರಿ ಸುರೇಂದ್ರ ಮೂರ್ತಿ ಅವರಿಗೆ ಆಯೋಗ 15000/- ರೂ ಗಳ ದಂಡ ವಿಧಿಸಿ ಆದೇಶ ನೀಡಿ ದಂಡದ ಮೊತ್ತವನ್ನು ದಂಡಾಧಿಕಾರಿಗಳ ಸಂಬಳದಿಂದ ಕಡಿತಗೊಳಿಸಿ ಸರ್ಕಾರದ ಲೆಕ್ಕ ಶೀರ್ಷಿಕೆ ಖಾತೆಗೆ ಜಮಾ ಮಾಡಿಸುವಲ್ಲಿ ಸೂಕ್ತ ಕ್ರಮವಹಿಸುವಂತೆ ರಾಮನಗರ ಜಿಲ್ಲಾ ಜಿಲ್ಲಾಧಿಕಾರಿಗಳಾದ ಡಾ||ಅವಿನಾಶ್ ಮೆನನ್ ರಾಜೇಂದ್ರನ್ ಅವರಿಗೆ ನಿರ್ದೇಶಿಸಿದೆ.
ವರದಿ ರಾಜಶೇಖರ ಮಾಲಿ ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ