ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ

ಚೇಳ್ಯಾರು ಮಂಗಳೂರು ಆಗಸ್ಟ್ 11 :ಚೇಳ್ಯಾರು ಗ್ರಾಮಪಂಚಾಯತ್ ನ ಮುಂದಿನ ಎರಡೂ ವರೆ ವರ್ಷಗಳ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ರ ಆಯ್ಕೆ ಇವತ್ತು ನೆರವೇರಿತು ಅಧ್ಯಕ್ಷ ಸ್ಥಾನಕ್ಕೆ ಶ್ರೀ ಜಯಾನಂದ ಚೇಳ್ಯಾರು ಹಾಗೂ ಶ್ರೀಮತಿ ರೇಖಾ ಚೇಳ್ಯಾರು ಉಪಾಧ್ಯಕ್ಷರಾಗಿ ನೇಮಕಗೊಂಡರು ಶ್ರೀ ಜಯಾನಂದರಿಗೆ ಇದು ಎರಡನೇ ಬಾರಿ ಒಲಿದ ಅದೃಷ್ಟ,ಹಿಂದೆ 2014 ರಿಂದ 2019 ರವರೆಗೆ ಪೂರ್ಣಾವಧಿಯ ಅಧ್ಯಕ್ಷರಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದರು ತನ್ನ ಯುವ ವಯಸ್ಸಿನಲ್ಲೇ ಗ್ರಾಮದ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿದ್ದು ರಾಜಕೀಯದಲ್ಲಿ ಅವರದೇ ಆದ ಚಾತುರ್ಯ ಹೊಂದಿದ್ದು ಶಾಸಕ,ರಾಜ್ಯ ಸರಕಾರದ ಮಂತ್ರಿಗಳು ಮತ್ತು ಸಂಸದರೊಂದಿಗೆ ಸತತ ಸಂಪರ್ಕದಲ್ಲಿದ್ದು ಜನ ಸೇವೆ ಮತ್ತು ಗ್ರಾಮದ ಸೇವೆಗಾಗಿ ತನ್ನನ್ನು ಸದಾ ಮುಡಿಪಾಗಿಟ್ಟುಕೊಂಡಿದ್ದು, ಹಂತ ಹಂತ ವಾಗಿ ರಾಜಕೀಯ ಏಳಿಗೆಯನ್ನು ಸಾಧಿಸುವ ಕಲೆಯನ್ನು ಮೈಗೂಡಿಸಿಕೊಂಡಿರುವುದು ಎಲ್ಲರನ್ನು ಬೆರಗುಗೊಳಿಸಿದೆ .
ನಿಕಟಪೂರ್ವ ಅಧ್ಯಕ್ಷೆ ಶ್ರೀಮತಿ ಯಶೋಧಾ, ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ,ಬಿ ಜೆ ಪಿ ಪಕ್ಷದ ಎಲ್ಲಾ ಪಂಚಾಯತ್ ಸದಸ್ಯರು,ಮಂಡಲ ಅಧ್ಯಕ್ಷ ಶ್ರೀ ಈಶ್ವರ ಕಟೀಲ್,ಶಕ್ತಿ ಕೇಂದ್ರದ ಅಧ್ಯಕ್ಷ ಶ್ರೀ ಪುಷ್ಪರಾಜ ಕುಲಾಲ್,ಬಿ ಜೆ ಪಿ ಮುಖಂಡ ದಿವಾಕರ ಸಾಮಾನಿ, ಮಾಜಿ ತಾಲೂಕ ಪಂಚಾಯತ್ ಸದಸ್ಯೆ ಶ್ರೀಮತಿ ವಜ್ರಾಕ್ಷಿ ಪಿ ಶೆಟ್ಟಿ,ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ನಿತ್ಯಾನಂದ ಹಾಗೂ ಪಂಚಾಯತ್ ಸಿಬಂದಿ ವರ್ಗ ಉಪಸ್ಥಿತರಿದ್ದರು.
ವರದಿ:ಚಂದ್ರಶೇಖರ ಹೆಬ್ಬಾರ್ ಕೊಲ್ಯ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ