ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸಿರುಗುಪ್ಪಾದಲ್ಲಿ ಈದ್ ಮಿಲಾದ್ ಆಚರಣೆ

ಬಳ್ಳಾರಿ/ಸಿರುಗುಪ್ಪಾ:ಬೃಹತ್ ಸಂಖ್ಯೆಯಲ್ಲಿ ಈದ್ ಮಿಲಾದ್ ಉನ್ ನಬಿ ಜೂಲುಸ್ ಮಾನವ ಕುಲ ಉದ್ಧಾರಕರು ಪ್ರವಾದಿ ಮೊಹಮ್ಮದ್ “ಸೊ” ಸೈಯದ್ ಹಸನ್ ಬಸರಿ ಖಾದ್ರಿ ಬಗ್ದಾದಿ.

ಸಹನೆ ಶಾಂತಿ ಸೌಹಾರ್ದ ಅಲ್ಲಾಹನ ಪ್ರೀತಿಯ ಸಾಕಾರ ಪ್ರವಾದಿ ಮೊಹಮ್ಮದ್ ಸೊಲ್ಲಲ್ಲಾಹು ಅಲೈಹಿವ ಸಲ್ಲಂ ಅವರು ಎಂದು ಮುಕುಂದ ಗಡ್ಡೆ ಸೈಯದ್ ಖಾದರ್ ಬಾಷಾ ಖಾದ್ರಿ ಬಗ್ದಾದಿ ದರ್ಗಾದ ಸಜ್ಜಾದ ನಶೀನ್ ಸೈಯದ್ ಹಸನ್ ಬಸ್ರಿ ಖಾದ್ರಿ ಸಾಹೇಬ್ ಬಗ್ದಾದಿ ಅವರು ಹೇಳಿದರು ನಗರದ ಜಾಮಿಯಾ ಮಸೀದಿ ಹತ್ತಿರದಿಂದ ಜಶ್ನೆ ಈದ್ ಮಿಲಾದ್ ಉನ್ ನಬಿ “ಸೊ “ಪ್ರವಾದಿಯವರ ಜನ್ಮದಿನದ ಖುರಾನ್ ಫಾತೆಹ ಓದಿಕೆ ಬೃಹತ್ ಸಂಖ್ಯೆಯ ಜೂಲುಸ್ ಮೆರವಣಿಗೆ ವಿವಿಧತೆಯಲ್ಲಿ ಏಕತೆಯ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ ಈದ್ ಮಿಲಾದ್ ಉನ್ ನಬಿ ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ ಅಲ್ಲಾಹನ ರಸೂಲರು ಜಗದ್ಗುರುಗಳು ಗುರು ಹಿರಿಯರ ಗುಣ ಆದರ್ಶ ತತ್ವಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ಪಾಲಿಸಬೇಕು ಎಂದು ಕರೆ ನೀಡಿದರು ಖತೀಬ್ ಅಬುಲ್ ಹಸನ್ ಬಿನ್ ಜಾಕಿರ್ ಹುಸೇನ್ ಸಾಹಬ್, ಜಹೀರುದ್ದೀನ್ ಬಾಬು, ತಾಲೂಕ ಮಿಲಾದ್ ಕಮಿಟಿ ಸ್ಥಾಪಕ ಅಧ್ಯಕ್ಷರು ಹಾಜಿ ಅಬ್ದುಲ್ ನಬಿ ಚಿಸ್ತಿ ನಿಜಾಮಿ, ಹಾಜಿ ಮೊಹಮ್ಮದ್ ಹಮೀದ್ ಫಾರೂಕಿ, ಡಾ ಮೊಹಮ್ಮದ್ ಅಲಿ, ಟಿಪ್ಪು ಸುಲ್ತಾನ್ ಸಂಘದ ಅಧ್ಯಕ್ಷ ಇಬ್ರಾಹಿಂಪುರ್ ಹಮೀದ್ ಸಾಬ್, ಎನ್ ಎಸ್ ಸಲೀಂ, ಈದ್ಗಾ ಮತ್ತು ಖಬರ ಸ್ಥಾನ್ ಕಮಿಟಿ ಅಧ್ಯಕ್ಷ ಹಂಡಿ ಹಾಶಿಮ್, ಸೌದಾಗರ್ ಮಸೀದಿಯ ಗೌರವ ಅಧ್ಯಕ್ಷ ಹಂಡಿ ಹಾಜಿ ಹುಸೇನ್ ಸಾಬ್, ಅಧ್ಯಕ್ಷ ಮಕ್ಕಂದರ್ ಮಹಬೂಬ್ ಬಾಷಾ, ಹಾಫೀಜ್ ರಾದಾ ಜಿ ಲುಕ್ಮಾನ್ ಸಾಹೇಬ್, ಮೌಲಾನ ಅಬ್ದುಲ್ ಸಮ್ಮದ್, ಮೊಹಮ್ಮದ್ ಶರೀಫ್, ನೂರುಲ್ ಹಖ್, ಅಡ್ವಕೇಟ್ ಎಸ್ ಅಮೀರ್, ನಗರ ಸಭೆ ಸ್ಥಾಯಿ ಸಮಿತಿ ಅಧ್ಯಕ್ಷರು ಮೀರಾ ಹುಸೇನ್, ಕಾಂಗ್ರೆಸ್ ಮುಖಂಡ ಮೋದಿನ್ ,ಮುಲ್ಲಾ ದಾದಾ ಖಲಂದರ್,ಎಂ ನಜೀರ್, ಕಮಾಲ್ ಬಾಷಾ, ಮುಲ್ಲಾ ಕಲೀಮ್ ಉಲ್ಲಾ, ಎಸ್ ಖಾದರ್,ಎ ಗೌಸೇ ರಬ್ಬಾನಿ, ಹಾಜಿ ಡಬಲ್ ಬಾಂಡ್ ಟಿ ಜಿ ಅಬ್ದುಲ್ ಗನಿ, ಜಿ ಮೊಹಮ್ಮದ್ ಜಿಕ್ರಿಯಾ ವಿವಿಧ ಯುವ ಸಂಘಟನೆಗಳ ಪದಾಧಿಕಾರಿಗಳು ಸಾವಿರಾರು ಜನ ಸೇರಿದಂತೆ ಎಲ್ಲಾ ಮಸೀದಿಗಳ ಮೊಹಲ್ಲಾಗಳಿಂದ ಶ್ರದ್ಧೆಯಿಂದ ನುಡಿಮುತ್ತುಗಳ ಅಲ್ಲಾಹನ ಸ್ಮರಣೆ ಪೈಗಂಬರರ ಘೋಷಣೆಯ ಮೂಲಕ ಸಂಜೆ ವಲ್ಲೂರು ಮಸೀದಿಯಲ್ಲಿ ಕುರಾನ್ ಸಲಾತೊ ಸಲಾಂ ಫಾತೇಹದೊಂದಿಗೆ ಪ್ರಸಾದ ವಿತರಿಸಲಾಯಿತು .
ವರದಿ:ಎಂ ಇಬ್ರಾಹಿಂ ಖಲೀಲ್ ತೆಕ್ಕಲಕೋಟೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ