ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮಹಾತ್ಮ ಗಾಂಧೀಜಿ

ದೇಶದ ಭದ್ರತೆಯ ಬುನಾದಿಯ ಹಿಂಸೆಯನ್ನು
ತೊರೆದು ಅಹಿಂಸೆಯ ಮಾರ್ಗ ತೋರಿಸಿದರು
ನಾಡಿನ ಏಳಿಗೆಗಾಗಿ ಸತತ ಸ್ವತಂತ್ರದ ಚಳುವಳಿಯ
ಸತ್ಯದ ಹೋರಾಟಕ್ಕೆ ಸರಳ ಸಜ್ಜನಿಕೆಯ ಶ್ರೀಮಂತರು
ಕಾನೂನಿನ ಮೂಲಕ ಇಡೀ ದೇಶ ಗೆದ್ದರು ತಾತ//

ಹಗಲಿರಳು ಎನ್ನದೆ ತಮ್ಮ ಪ್ರಾಣದ ಹಂಗುತೊರೆದು ದುಡಿದರು ದೇಶದಲ್ಲಿನ ಶತ್ರುಗಳಿಗೆ ಮಣ್ಣುತಿನಿಸಿದರು
ಸತತ ಶತ್ರುಗಳಿಗೆ ಸಿಂಹಸ್ವಪ್ನವಾಗಿ ಕಾಡಿದ ರಾಷ್ಟ್ರಪಿತರು
ತಮ್ಮಗೆ ಬಾಪುಜಿ ಎನ್ನುವ ಹೆಸರಿನ ದೇಶ ಪ್ರೇಮಿಯಾದರು ಶಾಂತಿ ಸಮಾಧಾನದ ತ್ಯಾಗದವರು ಖಾದಿಭಂಡಾರಿ ತಾತ//

ಕೆಂಪು ಕೋತಿಗಳ ಮನಸು ಗೆದ್ದು
ಶಾಂತಿ ಸಮಾಧಾನದ ಅಜ್ಜನಾದರೂ
ಮುದ್ದು ಕಂದಮ್ಮಗಳಿಗೆ ಪ್ರೀತಿಯ ತಾತನಾಗಿದ್ದರು ಯುವಕರಿಗೆ ಶಾಂತಿಯ ಸಮಾಧಾನದ ದೂತರು
ಒಂದಲ್ಲ ಎರಡು ಕಪಾಳ ಮೋಕ್ಷ ಕಂಡವರು ತಾತ//

ಕೋಟಿ ಕೋಟಿ ಕಣ್ಣೀರು ವರಿಸಿದ
ದೇಶದ ಧೀಮಂತ ನಾಯಕರು
ಮೈಯಲ್ಲಿ ಶಾಂತಿಯರಕ್ಷಣಾ ಸಂಕೇತವಾದ
ಬಿಳಿಯಬಟ್ಟೆ ತೊಟ್ಟು ಕೈಯಲ್ಲಿ ಕೋಲೊಂದು
ಹಿಡಿದು ನಡೆದರು ಉಪ್ಪಿನ ಸತ್ಯಾಗ್ರಾದ ರೂವಾರಿ ತಾತರು//

ಗಂಟಾಗೋಷವಾಗಿ ಜಯಕಾರದೊಂದಿಗೆ
ಮಾಡು ಇಲ್ಲವೇ ಮಡಿ ಎನ್ನುವ ಸಂದೇಶಗೆ
ಭಾರತ ಮಾತೆಯಗೆ ಜಯವಾಗಲಿ ಎಂದು ಬಯಸಿದವರು ದೇಶ ತೊರೆದು ನಡೆಯಿರಿ ಎನ್ನುತ್ತಾ ಹಿಡಿದರು ಕೋಲು
ಹಳ್ಳಿಯೂ ದಿಲ್ಲಿಯಾಗಿ ಕನಸು ಕಂಡರು ತಾತರು//

-ಮಹಾಂತೇಶ ಖೈನೂರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ