ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ರಾಜು ಗುರು ಸ್ವಾಮೀಜಿ ಅವರಿಂದ ಜೀವ್ನಾ ಅಂದ್ರೆ ಇಷ್ಟೇನಾ…?ಚಿತ್ರತಂಡಕ್ಕೆ ಗೌರವ ಸನ್ಮಾನ

ಕಲಬುರಗಿ/ನಾಲವಾರ:ಸಮೀಪದ ಕೊಲ್ಲೂರು ಗ್ರಾಮದ ಯುವಕ ಶ್ರೀ ರಾಜೇಂದ್ರ ಕೊಲ್ಲೂರು ರವರ ಕಿರುಚಿತ್ರ ಈಗ ದೊಡ್ಡ ಮಟ್ಟದಲ್ಲಿ ಹೆಸರು ಮಾಡುತ್ತಿದೆ ಸಾವಿರಾರು ಜನರು ಇಷ್ಟ ಪಡುತ್ತಿದ್ದಾರೆ,ಈಗಿನ ಯುವಕರಿಗೆ ಒಳ್ಳೆಯ ಸಂದೇಶ ನೀಡುವ ಚಿತ್ರ ಇದಾಗಿದ್ದು ಇತ್ತಿಚೆಗೆ ಈ ಚಿತ್ರ ತಂಡಕ್ಕೆ ಸಾಲು ಸಾಲು ಸನ್ಮಾನಗಳಾಗುತ್ತಿವೆ, ರಾಜೇಂದ್ರ ಕೊಲ್ಲೂರು ಪ್ರೊಡಕ್ಷನ್ ನಲ್ಲಿ ನಿರ್ಮಾಣವಾದ ಮೊಟ್ಟ ಮೊದಲ ಸಾಮಾಜಿಕ ಸಂದೇಶವುಳ್ಳ ಕಿರುಚಿತ್ರ ಜೀವ್ನಾ ಅಂದ್ರೆ ಇಷ್ಟೇನಾ…?ಈ ಚಿತ್ರ ಭರ್ಜರಿಯಾಗಿ ಜನರು ಅಪ್ಪಿಕೊಂಡು ಯಶಸ್ವಿಯಾಗಿಸುತ್ತಿರುವ ಹಾಗೂ ಗ್ರಾಮೀಣ ಭಾಗದ ಯುವಕರ ಈ ಪ್ರಯತ್ನಕ್ಕೆ ಶುಭಹಾರೈಸುವ ಹಿನ್ನೆಲೆಯಲ್ಲಿ ಇಡೀ ಚಿತ್ರತಂಡಕ್ಕೆ ಶ್ರೀ ಶ್ರೀ ಶ್ರೀ ಪ್ರಥಮ ಜಗದ್ಗುರು ಭವಾನ ವೇದವ್ಯಾಸ ಸಂಸ್ಥಾನ ಬ್ರಹ್ಮರ್ಷಿ ಪೀಠ ಹುರಸಗುಂಡಗಿ,ಸನ್ನತಿ ಬ್ರಿಡ್ಜ್ ನ ಪೀಠಾದಿಪತಿಗಾದ ಶ್ರೀ ಶ್ರೀ ಬ್ರಹ್ಮರ್ಷಿ ರಾಜು ಗುರು ಸ್ವಾಮಿಗಳಿಂದ ಗೌರವ ಸನ್ಮಾನ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು ನಮ್ಮ ಭಾಗದ ಯುವಕರು ಇದೇ ರೀತಿ ಇನ್ನೂ ಉತ್ತಮ ಸಾಮಾಜಿಕ ಸಂದೇಶಗಳನ್ನು ಜನರಿಗೆ ಯಶಸ್ವಿಯಾಗಿ ತಲುಪಿಸಿ ನಮ್ಮ ಮಠ ಹಾಗೂ ನಾವು ಸದಾ ನಿಮ್ಮ ಜೊತೆ ಇರ್ತೀವಿ ಎಂದು ಸ್ವಾಮೀಜಿಯವರು ಇಡೀ ಚಿತ್ರತಂಡಕ್ಕೆ ಹಿತ ನುಡಿಗಳನ್ನು ಹೇಳುತ್ತಾ ಇಡೀ ಚಿತ್ರ ತಂಡಕ್ಕೆ ಶುಭಾಶಯ ಹೇಳಿ ಆಶೀರ್ವಾದಿಸಿದರು,ಈ ಸಂದರ್ಭದಲ್ಲಿ ಚಿತ್ರದ ನಾಯಕ ನಟ ಶ್ರೀ ರಾಜೇಂದ್ರ ಕೊಲ್ಲೂರು,ಸಹ ನಟರು ಹಾಗೂ ಗೆಳೆಯರ ಪಾತ್ರಧಾರಿಗಳಾದ ಶ್ರೀ ದೇವಣ್ಣ ಚಿಗರಿ ಇಬ್ರಾಹಿಂಪೂರ,ವಿಜಯ ಅರಕೇರ,ಲಕ್ಷ್ಮಣ ನಾಲವಾರ,ಚಂದಾಸ್ ಸನ್ನತಿ ಹಾಗೂ ಅನೇಕ ಭಕ್ತಾಧಿಗಳು ಇದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ