ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಬಸರಿ ಮರಕ್ಕೆ ಮರುಜೀವ ನೀಡಲು ಮುಂದಾದ ವನಸಿರಿ ಫೌಂಡೇಶನ್

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಮುದ್ದಾಪುರ ಕ್ರಾಸ್ ನ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಚರಂಡಿ ನಿರ್ಮಾಣ ಕಾರ್ಯಕ್ಕೆ ಅಡ್ಡಲಾಗಿದೆ ಎಂದು ಕಿತ್ತು ಹಾಕಲಾಗಿದ್ದ ಬಸರಿ ಮರವನ್ನು ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಅಮರೇಗೌಡ ಮಲ್ಲಾಪುರ ಅವರ ನೇತೃತ್ವದಲ್ಲಿ ಹಾರಾಪೂರ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ವನಸಿರಿ ಫೌಂಡೇಶನ್ ಹಾಗೂ ಗ್ರಾಮ ಪಂಚಾಯತಿ ಸದಸ್ಯರು,SDMC ಸದಸ್ಯರು,ಶಿಕ್ಷಕರು ಹಾಗೂ ಗ್ರಾಮಸ್ಥರ ಸಹಕಾರದಿಂದ ಬಸಿರು ಮರಕ್ಕೆ ಮರುಜೀವ ನೀಡಿ ಪರಿಸರ ಸಂರಕ್ಷಣೆ ಮಾಡಲು ಮುಂದಾದರು.
ಸಿಂಧನೂರು ಮಸ್ಕಿ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಚರಂಡಿ ವ್ಯವಸ್ಥೆ ನಿರ್ಮಿಸಲಾಗುತ್ತಿದ್ದು ಈ ಚರಂಡಿ ನಿರ್ಮಾಣದ ಕಾರ್ಯಕ್ಕೆ ಅಡ್ಡಲಾಗಿ ಒಂದು ಬೃಹತ್ ಬಸರಿ ಮರಹೊಂದ ಹೆಮ್ಮರವಾಗಿ ಬೆಳೆದು ನಿಂತಿತ್ತು ಈ ಮರವನ್ನು ರಾತ್ರೋರಾತ್ರಿ ಕಿತ್ತು ಹಾಕಿದ್ದರು ಬೆಳಗ್ಗೆ ಅದನ್ನು ನೋಡಿದ ಸ್ಥಳೀಯರು ನಮ್ಮ ವನಸಿರಿ ಫೌಂಡೇಶನ್ ಗೆ ಪೋನ್ ಮೂಲಕ ಕರೆ ಮಾಡಿ ಮರುಜೀವ ಕೊಡಲು ಮನವಿ ಮಾಡಿದಾಗ ತಕ್ಷಣ ವನಸಿರಿ ಫೌಂಡೇಶನ್ ತಂಡ ಸ್ಥಳಕ್ಕೆ ಧಾವಿಸಿ ವೀಕ್ಷಣೆ ಮಾಡಿ ಇದಕ್ಕೆ ಮತ್ತೆ ಮರುಜೀವ ಕೊಡಬಹುದು ಎಂದು ತಿಳಿದು, ಹಾರಾಪೂರ ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾದ ಶರಣಪ್ಪ ಅವರನ್ನು ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಫೌಂಡೇಶನ್ ಅದ್ಯಕ್ಷರಾದ ಅಮರೇಗೌಡ ಮಲ್ಲಾಪುರ ಅವರು ಪೋನ್ ಮುಖಾಂತರ ಬಸರಿ ಮರಕ್ಕೆ ಮರುಜೀವ ನೀಡಲು ಸ್ಥಳಾವಕಾಶ ಕೋರಿದಾಗ ಅಲ್ಲಿನ ಸ್ಥಳೀಯ ಗ್ರಾಮ ಪಂಚಾಯತಿ, ಸದಸ್ಯರು,SDMCಸದಸ್ಯರು ಹಾಗೂ ಶಿಕ್ಷಕರು ಚರ್ಚಿಸಿ ಸ್ಥಳಾವಕಾಶ ನೀಡಿದರು ನಂತರ ಜೇಸಿಬಿ ಮೂಲಕ ತಗ್ಗು ತೋಡಲಾಯಿತು.ಮುದ್ದಾಪೂರ ಕ್ರಾಸ್ ನಿಂದ ಹಾರಾಪೂರ ಸರಕಾರಿ ಪ್ರೌಢ ಶಾಲೆಯ ಆವರಣದವರೆಗೆ ಟ್ರಾಕ್ಟರ್ ಮೂಲಕ ಬಸರಿ ಮರವನ್ನು ಸ್ಥಳೀಯರ ಸಹಕಾರದಿಂದ ತಂದು ಮರಕ್ಕೆ ಸಗಣಿ ಸವರಿ ನೆಡಲಾಯಿತು ವನಸಿರಿ ಫೌಂಡೇಶನ್ ತಂಡ ಮೊತ್ತೊಂದು ಬಸರಿ ಮರಕ್ಕೆ ಮರುಜೀವ ಕೊಡಲು ಮುಂದಾಗಿರುವುದನ್ನು ಕಂಡ ಸಾರ್ವಜನಿಕರು ಹಾಗೂ ಶಾಲೆಯ ಮುಖ್ಯ ಗುರುಗಳಾದ ಶರಣಪ್ಪ ಅವರು ಈ ಮರ ಮುಂದೊಂದು ದಿನ ವನಸಿರಿ ಸಮೃದ್ಧವಾಗಿ ಮಕ್ಕಳಿಗೆ,ಸಾರ್ವಜನಿಕರಿಗೆ ಮಾದರಿಯಾಗಲಿದೆ ಎಂದು ವನಸಿರಿ ಫೌಂಡೇಶನ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಫೌಂಡೇಶನ್ ಅಧ್ಯಕ್ಷರಾದ ಅಮರೇಗೌಡ ಮಲ್ಲಾಪುರ,ಶಾಲೆಯ ಮುಖ್ಯೋಪಾಧ್ಯಾಯರಾದ ಶರಣಪ್ಪ,ಟ್ರಾಕ್ಟರ್ ಸೌಲಭ್ಯ ನೀಡಿದ ವೆಂಕನಗೌಡ,ಗ್ರಾಮ ಪಂಚಾಯತಿ ಸದಸ್ಯರಾದ ಚಿದಾನಂದಪ್ಪ,SDMC ಸದಸ್ಯರಾದ ಸಿದ್ದಪ್ಪ,ಹೊನ್ನಪ್ಪ,ಮುದಿಯಪ್ಪ ಹೊಸಹಳ್ಳಿ ಕ್ಯಾಂಪ್,ಚನ್ನಪ್ಪ ಕೆ.ಹೊಸಹಳ್ಳಿ.ಊರಿನ ಹಿರಿಯರು ಯುವಕರು ಉಪಸ್ಥಿತರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ