ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡುವುದೇ ಶಿಕ್ಷಣದ ಧ್ಯೇಯವಾಗಲಿ-ಅಸ್ಲಂ ಶೇಖ್

ಬಸವನಬಾಗೇವಾಡಿ:ತಾಲೂಕಿನ ಯರನಾಳ ಗ್ರಾಮದಲ್ಲಿ ನಡೆಯುತ್ತಿರುವ ಬಸವನಬಾಗೇವಾಡಿಯ ಅಕ್ಕ ನಾಗಮ್ಮ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರ ರಾಷ್ಟ್ರೀಯ ಸೇವಾ ರೋಜನೆಯ ವಾರ್ಷಿಕ ವಿಶೇಷ ಶಿಬಿರದ ಉಪನ್ಯಾಸ ಕಾರ್ಯಕ್ರಮದಲ್ಲಿ “ಇಂದಿನ ಜಗತ್ತಿನಲ್ಲಿ ಶಿಕ್ಷಣದ ಮಹತ್ವ ಮತ್ತು ಸಂಸ್ಕೃತಿ” ಎಂಬ ವಿಷಯದ ಮೇಲೆ ಕರುನಾಡು ಸಾಹಿತ್ಯ ಪರಿಷತ್ತಿನ ವಿಜಯಪುರ ಜಿಲ್ಲಾಧ್ಯಕ್ಷ ಅಸ್ಲಂ ಶೇಖ್ ನರಸಲಗಿ ಉಪನ್ಯಾಸ ನೀಡಿದರು.ಶಿಕ್ಷಣವು ಸಾಮಾಜಿಕ ಪಿಡುಗಗಳ ವಿರುದ್ಧ ಹೋರಾಡುವುದನ್ನು ಕಲಿಸಬೇಕು,ಯಾವುದೇ ವ್ಯಕ್ತಿ ಓದಿ ಉನ್ನತ ಹುದ್ದೆ ಗಿಟ್ಟಿಸಿಕೊಂಡರೂ ಅವನು ಭ್ರಷ್ಟನಾದರೆ ಅವನು ಪಡೆದ ಶಿಕ್ಷಣ ವ್ಯರ್ಥ,ಒಬ್ಬ ಯಶಸ್ವಿ ವ್ಯಕ್ತಿಯಾಗಲು ಕಠಿಣ ಪರಿಶ್ರಮದ ಜೊತೆಗೆ ಉತ್ತಮ ಸಂಸ್ಕಾರವೂ ಅಗತ್ಯ,ಸಮಾಜ ಸುಧಾರಣೆ ಶಿಕ್ಷಣದಿಂದ ಮಾತ್ರ ಸಾಧ್ಯ ವಿಜ್ಞಾನಕ್ಕೆ ಹಾನಿಯಾಗದ ಅಥವಾ ಯಾರಿಗೂ ಮಾನಸಿಕವಾಗಿ,ಭೌತಿಕವಾಗಿ ಮತ್ತು ಆರ್ಥಿಕವಾಗಿ ತೊಂದರೆ ಕೊಡದ ಆಚರಣೆ ಮೌಢ್ಯವಲ್ಲ,ನಮ್ಮ ಸಂಸ್ಕೃತಿ,ಪರಂಪರೆ ಮುಂದುವರೆಯಬೇಕು ಆದರೆ ಒಬ್ಬರಿಗೆ ನೋವು ಕೊಡುವ ಆಚರಣೆ ನಿಲ್ಲಿಸಬೇಕು, ಯೋಗ,ಧ್ಯಾನ,ಪ್ರಾರ್ಥನೆಗಳನ್ನು ನಮ್ಮ ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದರು.
ಇದೇ ವಿಷಯದ ಕುರಿತು ಬಸನವನಬಾಗೇವಾಡಿಯ ಬಿ ಎಲ್ ಡಿ ಇ ಕಾಲೇಜಿನ ಉಪನ್ಯಾಸಕಿ ಅರ್ಚನಾ ದಂಡಾವತಿ ಮಾತನಾಡಿದರು ಒಬ್ಬ ವ್ಯಕ್ತಿ ಶಿಕ್ಷಣದಿಂದ ಮಾತ್ರ ಯಶಸ್ವಿಯಾಗಲು ಸಾಧ್ಯ,ಸಾಕ್ಷರತಾ ಪ್ರಮಾಣ ಹೆಚ್ಚಿಸಲು ಸರ್ಕಾರ ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ,ಸರ್ವ ಶಿಕ್ಷಣ ಅಭಿಯಾನ,ಮರಳಿ ಬಾ ಶಾಲೆಗೆ ಸಮುದಾಯದತ್ತ ಶಾಲೆ ಯೋಜನೆಗಳು ಶಿಕ್ಷಣ ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿವೆ, ಅನಕ್ಷರಸ್ಥ ಪಾಲಕರು ತಮ್ಮ ಮಕ್ಕಳು ಶಿಕ್ಷಿತರಾಗಬೇಕೆಂದು ಬಯಸುತ್ತಿದ್ದಾರೆ ಶಿಕ್ಷಣ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾಗಿ ಸಂಸ್ಕಾರವೂ ಬೇಕು ಎಂದರು.
ಶಿಬಿರಾಧ್ಯಕ್ಷ ಎಂ ಬಿ ವಗ್ಗರ ಮಾತನಾಡಿ ಉಪನ್ಯಾಸ ಹಾಗೂ ಗೀತಗಾಯನ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು ನಿಡಗುಂದಿಯ ಬಿ.ಎಂ.ಎಸ್ ಶಾಲೆಯ ಸಂಗೀತ ಶಿಕ್ಷಕ ಮಲ್ಲು ಗದ್ದಿ ವಚನ,ಜಾನಪದ ಹಾಗೂ ಭಾವಗೀತೆಗಳನ್ನು ಹಾಡಿ ಶಿಬಿರಾರ್ಥಿಗಳನ್ನು ರಂಜಿಸಿದರು.ಲಕ್ಷ್ಮಣ್ ಸುಭಾನಪ್ಪರ ಒಗಟು ಪ್ರಶ್ನೆಗಳನ್ನು ಕೇಳಿ ರಂಜಿಸಿದರು ಹಿರಿಯ ಉಪನ್ಯಾಸಕರಾದ ಜಿ.ಬಿ.ಹಿರೇಮಠ ಗುರುಗಳು,ಕರುನಾಡು ಸಾಹಿತ್ಯ ಪರಿಷತ್ತಿನ ಬಸವನಬಾಗೇವಾಡಿ ತಾಲೂಕಾ ಉಪಾಧ್ಯಕ್ಷೆ ಲಕ್ಷ್ಮೀ ಕಳ್ಳಿಗುಡ್ಡ ಉಪಸ್ಥಿತರಿದ್ದರು. ಶಿಬಿರಾರ್ಥಿಗಳು ಉಪನ್ಯಾಸಕರಿಗೆ ಅತಿಥಿಗಳಿಗೆ ಸನ್ಮಾಸಿದರು ಯರನಾಳ ಗ್ರಾಮದ ನಾಗರಿಕರು, ವಿದ್ಯಾರ್ಥಿಗಳು ಹಾಜರಿದ್ದರು.ಶಿಬಿರಾರ್ಥಿಗಳಾದ ಬೋರಮ್ಮ ಬಾಗೇವಾಡಿ ನಿರೂಪಿಸಿದರು.ರಜನಿ ಬೆಲ್ಲದ ಸ್ವಾಗತಿಸಿದರು.ಪವಿತ್ರಾ ಛಲವಾದಿ ವಂದಿಸಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ