ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಲೇಖನಿ ಪುಸ್ತಕಗಳೊಂದಿಗೆ ದಾರ್ಶನಿಕರ ಪ್ರತಿಮೆ ಇಟ್ಟು ಆಯುಧ ಪೂಜೆ ಆಚರಿಸಿದ ಕ.ವಿ.ವಿ ವಿದ್ಯಾರ್ಥಿಗಳು

ಧಾರವಾಡ:ಇಡೀ ನಾಡಿನಾದ್ಯಂತ ಆಚರಣೆಯಲ್ಲಿರುವ ಹಾಗೂ ವಿಶ್ವವಿಖ್ಯಾತ ದಸರಾ ಹಬ್ಬ ಹಾಗೂ ಆಯುಧ ಪೂಜೆಯನ್ನು ರಾಜ್ಯದಲ್ಲಿ ಆಚರಿಸುತ್ತಿರುವಂತೆ ಇಲ್ಲೊಂದು ವಿದ್ಯಾರ್ಥಿಗಳ ಸಮೂಹ ಸೇರಿ ವಿಭಿನ್ನ ಮತ್ತು ವಿಶೇಷವಾಗಿ ಆಯುಧ ಪೂಜೆಯನ್ನು ಕವಿವಿ ಆವರಣದಲ್ಲಿರುವ ಶಾಲ್ಮಲಾ ವಿದ್ಯಾರ್ಥಿ ನಿಲಯದಲ್ಲಿ ಆಚರಿಸಲಾಯಿತು.
ಮುಖ್ಯವಾಗಿ ಪ್ರತಿಯೊಬ್ಬರ ಬದುಕನ್ನು ಕಟ್ಟಿಕೊಡುವಂತಹ ಹಾಗೂ ಜ್ಞಾನದ ಸಂಕೇತವಾಗಿರುವ ಲೇಖನಿ ಮತ್ತು ಪುಸ್ತಕಗಳೊಂದಿಗೆ ಬುದ್ಧ ಬಸವ ಅಂಬೇಡ್ಕರ್ ಮುಂತಾದ ದಾರ್ಶನಿಕರ ಪ್ರತಿಮೆಗಳನ್ನಿಟ್ಟು ಕರ್ನಾಟಕ ವಿಶ್ವವಿದ್ಯಾಲಯದ ಶಾಲ್ಮಲಾ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಾದ ನಾಗರಾಜ್ ಮಾದರ, ಮಂಜುನಾಥ ಮಾದರ,ರವಿಚಂದ್ರ ಮರಕುಂಬಿ, ಚರಣ್ ಕಾಳೆ,ಮುತ್ತು ದೊಡ್ಡಮನಿ,ದಿಲೀಪ್ ಯಾದವ್,ಹನುಮಂತ ಕರ್ಲವಾಡ್,ರಮೇಶ್ ಮತ್ತು ಅಮರೇಶ್ ಭಾಗಿಯಾಗಿದ್ದರು ಹಾಗೂ ಈ ರೀತಿ ವಿಭಿನ್ನವಾಗಿ ಆಚರಿಸಲು ನಿಲಯಪಾಲಕರಾದ ಡಾ.ಎನ್.ಎಸ್.ಮುಗದೂರ್ ಹಾಗೂ ಸಿಬ್ಬಂಧಿಗಳು ಉತ್ಸಾಹ ತೋರಿದ್ದಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ