ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ವಿಶಾಲ್ ಅಸೋಸಿಯೇಷನ್ ಲಾಡಾಗೇರಿ ವತಿಯಿಂದ ಅದ್ದೂರಿ ದಸರಾ ಆಚರಣೆ

ಬೀದರ್:ಕೇಂದ್ರ ಸಚಿವರಾದ ಶ್ರೀ ಭಗವಂತ ಖುಬಾ, ರಾಜ್ಯ ಸಚಿವರಾದ ಶ್ರೀ ರಹೀಂ ಖಾನ್,ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಶ್ರೀ ಶೈಲೆಂದರ್ ಬೆಲ್ದಾಳೆ, ನಗರಸಭೆ ಅಧ್ಯಕ್ಷರಾದ ಶ್ರೀ ಎಮ್ ಡಿ ಗೌಸ್, ಉಪಾಧ್ಯಕ್ಷರಾದ ಶ್ರೀಮತಿ ಲಕ್ಷ್ಮಿಬಾಯಿ ಹಂಗರಗಿ,ಮಾಜಿ ಸೈನಿಕರಿಗೆ ಹಾಗೂ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.ಇದೇ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಶ್ರೀ ಭಗವಂತ ಖುಬಾ ಅವರು ಮಾತನಾಡಿ ಸಮಸ್ತ ಜನರಿಗೆ ದಸರಾ ಹಬ್ಬದ ಶುಭಾಶಯಗಳು ತಿಳಿಸಿದರು ವಿಶಾಲ್ ಅಸೋಸಿಯೇಷನ್ ನ ಎಲ್ಲಾ ಸದಸ್ಯರಿಗೆ ಧನ್ಯವಾದಗಳು ಸಲ್ಲಿಸಿದರು ಸಚಿವರಾದ ಶ್ರೀ ರಹೀಂ ಖಾನ್ ಅವರು ಕೂಡಾ ದಸರಾ ಹಬ್ಬದ ಶುಭಾಶಯಗಳು ತಿಳಿಸಿದರು ಪ್ರತಿ ವರ್ಷದಂತೆ ವಿಶಾಲ್ ಅಸೋಸಿಯೇಷನ್ ಲಾಡಾಗೇರಿಯ ಎಲ್ಲಾ ಸದಸ್ಯರು ನಮ್ಮನ್ನು ಕರೆದು ಸನ್ಮಾನಿಸುತಿದ್ದಾರೆ ನಿಜವಾಗಿಯೂ ಅವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು ಸಲ್ಲಿಸುತ್ತೇನೆ ಎಂದರು ಅದೇ ರೀತಿಯಾಗಿ ಶ್ರೀ ಶೈಲೆಂದರ್ ಬೆಲ್ದಾಳೆರವರು ಮಾತನಾಡಿ ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಇದೇ ಮೊದಲ ಬಾರಿಗೆ ಶಾಸಕನಾಗಿ ಚುನಾಯಿತನಾಗಿದ್ದೇನೆ ಎಂದು ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳನ್ನು ತಿಳಿಸಿದರು ವಿಶಾಲ್ ಅಸೋಸಿಯೇಷನ್ ಕೇವಲ ಒಂದು ಸಂಘ ಅಲ್ಲ ಅದು ನಿಜವಾಗಿಯೂ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದೆ ಇಂತಹ ಸಂಘಟನೆಗಳು ಸಮಾಜಕ್ಕೆ ಬಹುಮುಖ್ಯವಾಗಿ ಬೇಕಾಗಿವೆ ಇನ್ನೂ ಸಮಾಜದಲ್ಲಿ ಒಳ್ಳೆಯ ಕಾರ್ಯಗಳು ಮಾಡಲಿ ಎಂದು ನಾನು ಆಶಿಸುತ್ತೇನೆ ಎಂದರು ವಿಶಾಲ್ ಅಸೋಸಿಯೇಷನ್ ಸದಸ್ಯರುಗಳಾದ ಶ್ರೀ ಚಂದು,ಶ್ರೀ ರವಿ,ಶ್ರೀ ಧನರಾಜ್,ಶ್ರೀ ರಾಜ ದುಗಣಿ,ಶ್ರೀ ನಾಗರಾಜ್,ಶ್ರೀ ಸತೀಶ್ ಶ್ರೀ ರಾಜು ದಾನ,ಶ್ರೀ ಸತ್ಯ ಪ್ರಕಾಶ್,ಶ್ರೀ ಅಮರ್,ಶ್ರೀ ಉಮೇಶ್ ಶ್ರೀ ನೆಲ್ಸನ್,ಶ್ರೀ ವೀರು,ಶ್ರೀ ವಿಶಾಲ್,ಶ್ರೀ ಭೀಮು,ಶ್ರೀ ಶಿವಾನಂದ್,ಶ್ರೀ ಅಮರ್ ಉಪಸ್ಥಿತರಿದ್ದರು.
ವರದಿ-ಮಹಾನ್ ಕೋಟೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ