ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಯರದೊಡ್ಡಿ ಗ್ರಾಮದಲ್ಲಿ ವಾಲ್ಮೀಕಿ ಜಯಂತಿ ಆಚರಣೆ

ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಯರದೊಡ್ಡಿ ಗ್ರಾಮದಲ್ಲಿ ವಾಲ್ಮೀಕಿ ಜಯಂತಿ ಆಚರಣೆ ಮಾಡಲಾಯಿತು ಈ ಸಂದರ್ಭದಲ್ಲಿ ಮಸ್ಕಿ ತಾಲೂಕು ವಾಲ್ಮೀಕಿ ಸಂಘದ ಅಧ್ಯಕ್ಷ ಮೌನೇಶ್ ಮಾತನಾಡಿ ವಾಲ್ಮೀಕಿ ಸಮಾಜ ಕೇವಲ ಜಯಂತಿ ಆಚರಣೆಗೆ ಸೀಮಿತವಾಗದೆ ಶಿಕ್ಷಣ ಪಡೆದು ಸಂಘಟಿತರಾಗಿ ಹೋರಾಡುವ ಮೂಲಕ ಸಮಾಜಕ್ಕೆ ನ್ಯಾಯ ದೊರಕಿಸುವ ಕೆಲಸವಾಗಬೇಕು ಮಹಾನ್ ಕಾವ್ಯ ರಾಮಾಯಣ ರಚಿಸುವ ಮೂಲಕ ರಾಮ ಲಕ್ಷ್ಮಣ ಸೀತೆಯನ್ನು ಗುರುತಿಸಿದ ವಾಲ್ಮೀಕಿ ಇಂದು ಒಂದೇ ಸಮಾಜಕ್ಕೆ ಸೀಮಿತರಾಗಿದ್ದಾರೆ ಅವರ ಆದರ್ಶ ಆರ್ಥಿಕತೆ ಮಹಾನ್ ಚೇತನ ಸಾಹಿತ್ಯ ಎಲ್ಲಾ ಗುಣವನ್ನು ನಾವು ಅಳವಡಿಸಿಕೊಂಡು ಸಮಾಜದಲ್ಲಿ ಮುಖ್ಯ ವಾಹಿನಿಗೆ ಬರಬೇಕೆಂದು ಹೇಳಿದರು ಪತ್ರಕರ್ತ ದೇವಪ್ಪ ರಾಠೋಡ್, ಮಾತನಾಡಿ ವಾಲ್ಮೀಕಿ ಹಿಂದೂ ಗ್ರಂಥ ರಾಮಾಯಣ ಬರೆಯುವ ಮೂಲಕ ಇಂದು ರಾಷ್ಟ್ರವಾದ ಭಾರತಕ್ಕೆ ಒಂದು ಮೌಲ್ಯಯುತ ಗ್ರಂಥವನ್ನು ನೀಡಿದ್ದಾರೆ ಎಂದರು ಹಾಗೆಯೆ ಗ್ರಾಮ ಪಂಚಾಯಿತಿ ಸದಸ್ಯ ಮಾನ್ಸಿಂಗ್ ರಾಠೋಡ್ ಮಾತನಾಡಿದರು ಜಯಂತಿ ಅಂಗವಾಗಿ ಮಹಾಋಷಿ ವಾಲ್ಮೀಕಿಯ ಭಾವಚಿತ್ರವನ್ನು ತೆರೆದ ವಾಹನದಲ್ಲಿ ಪ್ರತಿಷ್ಠಾಪಿಸಿ ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಿದರು ಮೆರವಣಿಗೆಯಲ್ಲಿ ಮಹಿಳೆಯರಿಂದ ತುಂಬಾ ಕಳಸ ಧ್ವಜಾರೋಹಣ ರಾರಾಜಿಸಿದವು ಕಾರ್ಯಕ್ರಮದ ವೇದಿಕೆಯಲ್ಲಿ ಶಂಭುಲಿಂಗಪ್ಪ ವಿಟ್ಲಾಪೂರ,ಛತ್ರಪ್ಪ ಹಿರೇಕೂರ,ಕನಕಪ್ಪ ತಲೆಖಾನ್,ಬಸವರಾಜ ಕೊಳಬಾಳ್,ದುರ್ಗೇಶ್ ನಂದಿಹಾಳ,ಶಿಕ್ಷಕ ಬಸವರಾಜ್ ಘೋಷ್,ಪರಸಪ್ಪ,ಹನುಮೇಶ್ ನಾಯಕ್,ಪರಸಪ್ಪ,ದೇವಪ್ಪ,ನಾಗಪ್ಪ,ಮಾರುತಿ ಬುದ್ದಿನ್ನಿ,ನಾಗಪ್ಪ ಕಡಗೂರು,ಇನ್ನಿತರ ಗಣ್ಯರು ಭಾಗಿಯಾಗಿದ್ದರು

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ