ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಜೋಡಿ ಬಸವ ದೇವಸ್ಥಾನ ಅನಾವರಣ ಕಾರ್ಯಕ್ರಮ

ಶಹಾಪುರ:ಧಾರ್ಮಿಕತೆಗೆ ಒಳಗಾಗಿ ಪೂಜೆ, ಪುನಸ್ಕಾರಗಳಲ್ಲಿ ತೊಡಗಿದಾಗ ಮಾತ್ರ ಮೋಕ್ಷ ದೊರಕಿ ಬದುಕಿಗೆ ನೆಮ್ಮದಿ ದೊರಕಲು ಸಾಧ್ಯ ಎಂದು ಫಕೀರೇಶ್ವರ ಮಠದ ಪರಮಪೂಜ್ಯ ಗುರುಪಾದ ಮಹಾಸ್ವಾಮಿಗಳು ಹೇಳಿದರು.ತಾಲೂಕಿನ ಸಗರ ಗ್ರಾಮದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ದಿ.ಅಚ್ಚಪ್ಪಗೌಡ ಹಾಗೂ ಶಂಕ್ರಮ್ಮ ಗೌಡ್ತಿ ಸುಭೇದಾರ ಸ್ಮರಣಾರ್ಥವಾಗಿ ಜೀರ್ಣೋದ್ಧಾರಗೊಂಡ ಜೋಡಬಸವ ದೇವಸ್ಥಾನ ಅನಾವರಣ ಕಾರ್ಯಕ್ರಮದ ಧರ್ಮ ಸಭೆಯನ್ನು ಉದ್ದೇಶಿಸಿ ಮಾತನಾಡಿ,ಇಂತಹ ಧಾರ್ಮಿಕ ಸಭೆ ಸಮಾರಂಭಗಳಲ್ಲಿ ಯುವ ಜನರು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸಿದರು.ವೇದಿಕೆ ಮೇಲೆ ಉಪಸ್ಥಿತರಿರುವ ಶಹಾಪುರ ಏಕದಂಡಿಗಿ ಮಠದ ಅಜೇಂದ್ರ ಮಹಾಸ್ವಾಮಿಗಳು ಮಾತನಾಡಿ, ಧಾರ್ಮಿಕತೆ ಎಂದರೆ ಕೇವಲ,ಭಾವ ಭಕ್ತಿಗೆ ಸಂಬಂಧಿಸಿದ ವಿಷಯವಲ್ಲ,ಅದು ನಮ್ಮ ವ್ಯಕ್ತಿತ್ವವನ್ನು ಬಿಂಬಿಸುವ ನಡತೆಯಲ್ಲಿರುತ್ತದೆ, ಅಂತಹ ಸಂಪ್ರದಾಯ ಮತ್ತು ಸುಸಂಸ್ಕೃತ ಮನೆತನವೆಂದರೆ ಅದು ಸುಬೇದಾರರ ಮನೆತನವೆಂದು ಬಣ್ಣಿಸಿದರು ಇಂತಹ ಧಾರ್ಮಿಕ ಕಾರ್ಯಗಳು ಹೆಚ್ಚು ಹಮ್ಮಿಕೊಳ್ಳುವುದರಿಂದ ಈ ಜಗದ ಸಂಪತ್ತು,ಸುಖ,ಶಾಂತಿ,ನೆಮ್ಮದಿ ಸಮೃದ್ಧಿಯಾಗಿ ಬೆಳಗಲಿದೆ ಎಂದು ನುಡಿದರು.ಈ ಸಂದರ್ಭದಲ್ಲಿ ಜೀರ್ಣೋದ್ಧಾರ ದಾಸೋಹಿಗಳಾದ ನಾಗನಗೌಡ ಸುಬೇದಾರ ದಂಪತಿಗಳಿಗೆ ವಿಶೇಷವಾಗಿ ಸನ್ಮಾನಿಸಿ ಸತ್ಕರಿಸಲಾಯಿತು.
ಸಮಾರಂಭದ ವೇದಿಕೆ ಮೇಲೆ ಸಗರ ಒಕ್ಕಲಗರ ಹಿರೇಮಠದ ಪರಮಪೂಜ್ಯ ಮರಳು ಮಾಹಾಂತ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸಿದ್ದರು, ಸುರುಪುರ ನಿಷ್ಟಿ ಕಡ್ಲೆಪ್ಪನವರ ಮಠದ ಪ್ರಭುಲಿಂಗ ಮಹಾ ಸ್ವಾಮಿಗಳು,ನಾಗಠಾಣ ಹಿರೇಮಠದ ಪೂಜ್ಯರಾದ ಸೋಮೇಶ್ವರ ಶಿವಾಚಾರ್ಯರು, ಅಕ್ಕಮಹಾದೇವಿ ಮಠದ ಮಾತೋಶ್ರೀ ಶರಣಮ್ಮ ತಾಯಿ ಅವರು ಉಪಸ್ಥಿತರಿದ್ದರು,ಈ ಸಂದರ್ಭದಲ್ಲಿ ಗ್ರಾಮದ ಹಿರಿಯ ಮುಖಂಡರು ಹಾಗು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಸನಗೌಡ ಮಾಲಿಪಾಟೀಲ್,ಶರಣಗೌಡ ಸುಬೇದಾರ, ಡಾ.ಚಂದ್ರಶೇಖರ ಸುಬೇದಾರ,ಸಿದ್ದಲಿಂಗಣ್ಣಗೌಡ ಸುಬೇದಾರ,ಸುಭಾಷಗೌಡ ಸುಬೇದಾರ,ಹಿರಿಯ ಸಾಹಿತಿ ಲಿಂಗಣ್ಣ ಪಡಶೆಟ್ಟಿ,ಶರಬಣ್ಣ ರಸ್ತಾಪುರ ಇತರರು ಹಾಜರಿದ್ದರು ಅಮರಯ್ಯ ಸ್ವಾಮಿ ಜಾಲಿಬೆಂಚಿ ನಿರೂಪಿಸಿದರು,ಶ್ರೀಕಾಂತಗೌಡ ಸುಬೇದಾರ ಸ್ವಾಗತಿಸಿ ವಂದಿಸಿದರು.
ವರದಿ:ರಾಜಶೇಖರ ಮಾಲಿ ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ