ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮಕ್ಕಳಮನೆಯ ವಿದ್ಯಾಥಿ೯ಗಳಿಗೆ ಲಿಂಗದೀಕ್ಷೆ

ಮೈಸೂರು:ನಂಜನಗೂಡಿನಲ್ಲಿರುವ ಅನುರಾಗ್ ಟ್ರಸ್ಟ್ ಮಕ್ಕಳಮನೆಯ ವಿದ್ಯಾಥಿ೯ಗಳಿಗೆ ಲಿಂಗದೀಕ್ಷೆ ನೀಡಿ ಸಹಜ ಶಿವಯೋಗದ ಬಗ್ಗೆ ಅರಿವು ನೀಡಿದ ನರಸಿಂಹರಾಜಪುರ ಬಸವಕೇಂದ್ರದ ಪೂಜ್ಯ ಶ್ರೀ ಬಸವಯೋಗಿಪ್ರಭುಗಳು ಇಷ್ಠಲಿಂಗ ಜಾತಿಯ ಸಂಕೇತವಲ್ಲ ಅದು ಅರಿವು,ಆಚಾರ,ಅನುಭಾವದ ಸಂಕೇತ ಪ್ರತಿ ನಿತ್ಯದ ಜೀವನದಲ್ಲಿ ಬಸವಾದಿ ಶರಣರ ಬದುಕಿನ ಮಾಗ೯ವನ್ನು ಅಳವಡಿಸಿಕೊಂಡು ಬದುಕಬೇಕು ದೇವರನೊಲಿಸಲು ಹಾಲಿನಬೀಷೇಕ, ತುಪ್ಪ,ಮೊಸರು,ಗಂಜಲು,ಬಂಡಿ ಬಂಡಿ ಪತ್ರೆ ಹಾಕುವ,ಹರಕೆಗಳ ಅವಶ್ಯಕತೆಯಿಲ್ಲ ನಿಷ್ಕಲ್ಮಷ ಮನಸ್ಸಿನ ಭಕ್ತಿ ಸಾಕು ವಿದ್ಯಾಥಿ೯ಗಳು ಮೂಢನಂಬಿಕೆಯಿಂದ ದೂರವಿರಬೇಕು ವೈಜ್ಞಾನಿಕ ಚಿಂತನೆ ಮಾಡಬೇಕು.ಮದ್ಯಪಾನ,ಧೂಮಪಾನ, ತಂಬಾಕು,ಮಾದಕವಸ್ತು ಸೇವನೆ ಮಾಡಬಾರದು.ದ್ವೇಷ,ಅಸೂಯೆ,ದುರಾಸೆ, ದುನ೯ಡತೆ,ದುರಾಭ್ಯಾಸಗಳನ್ನು ಮೆಟ್ಟಿನಿಂತು ವಿಶ್ವಗುರು ಬಸವಣ್ಣನವರು ನೀಡಿದ ಲಿಂಗಾಚಾರ,ಶಿವಾಚಾರ,ಸದಾಚಾರ,ಭೃತ್ಯಾಚಾರ, ಗಣಾಚಾರವನ್ನು ಅಳವಡಿಸಿಕೊಂಡು ಬಸವಾದಿ ಶರಣರ ವಚನಗಳ ಮಾಗ೯ದಲ್ಲಿ ನಡೆಯಬೇಕು ಎಂದು ಹೇಳಿದರು ಅಧ್ಯಕ್ಷರಾದ ಸೋಮಶೇಖರ್ ಮಾತಾನಾಡಿ ದೇವರು ನಮ್ಮೊಳಗೆ ಇದ್ದಾನೆ.ಎಲ್ಲೂ ಸುತ್ತುವ ಅವಶ್ಯಕತೆ ಇಲ್ಲ ಕಾಯಕ ದಾಸೋಹ ಇಷ್ಠಲಿಂಗಯೋಗದ ಮುಖಾಂತರ ದೇವರನ್ನು ಅನುಭಾವಿಸಬಹುದು ವಿದ್ಯಾಥಿ೯ಗಳು ಶಿಸ್ತು ಸೇವೆ ರೂಢಿಸಿಕೊಂಡರೆ ಉಜ್ವಲ ವ್ಯಕ್ತಿಗಳಾಗಬಹುದು ಎಂದರು ಮಕ್ಕಳ ಮನೆಯ ವಿದ್ಯಾಥಿ೯ಗಳು ಉಪಸ್ಥಿತರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ