ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಭತ್ತ ಮತ್ತು ಹತ್ತಿ ಬೆಳೆದ ರೈತರು ಎಚ್ಚರ ಮೋಸ ಮಾಡುವವರು ಇದ್ದಾರೆ ಜಾಗೃತದಿಂದ ಇರಿ:ಜನಸ್ನೇಹಿ ದಯಾನಂದ.ಬಿ.ಜಮಾದಾರ್

ಸುರಪುರ:ಯಾದಗಿರಿ ಜಿಲ್ಲೆಯ ಸುರಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ದೇವಾಪುರ,ಕಕ್ಕೇರಾ ಹೊರವಲಯದ ರೈತರು ಬೆಳೆದ ಭತ್ತದ ಗದ್ದೆಗಳಿಗೆ ಹತ್ತಿಯ ಹೊಲಗಳಿಗೆ ಭೇಟಿ ನೀಡಿ ಭತ್ತ ಮತ್ತು ಹತ್ತಿ ಖರಿದಿಸಲು ಬಂದಂತ ಮಾಲೀಕರಾಗಲಿ ಹಾಗೂ ದಲ್ಲಾಳಿಗಳ ಮಾತಿಗೆ ಮರಳಾಗಿ ನೀವು ಬೆಳೆದಂತೆ ಭತ್ತವನ್ನು ಉದ್ರಿ ನೀಡಬಾರದು.
ಅಪರಿಚಿತ ವ್ಯಕ್ತಿಗೆ ಯಾವುದೇ ಕಾರಣಕ್ಕೂ ನೀವು ಬೆಳೆದಂತ ಭತ್ತ ಮತ್ತು ಹತ್ತಿಯನ್ನು ಮಾರಾಟ ಮಾಡದಂತೆ ಸುರಪುರ ಪೋಲಿಸ್ ಠಾಣೆಯ ದಕ್ಷ ಅಧಿಕಾರಿ ಜನಸ್ನೇಹಿ ದಯಾನಂದ.ಬಿ‌.ಜಮಾದಾರ್ ಅವರು ತಾಲೂಕಿನ ರೈತರ ಜಮೀನುಗಳಿಗೆ ಭೇಟಿ ನೀಡಿ ಮೋಸ ಹೋಗದಂತೆ ರೈತರಿಗೆ ಜಾಗೃತಿ ಮೂಡಿಸಿದರು.
ಭತ್ತ ಬೆಳೆದಂತ ರೈತರನ್ನು ಉದ್ದೇಶಿಸಿ ಮಾತನಾಡುತ್ತಾ ಈ ಹಿಂದೆ ಭತ್ತ ಮತ್ತು ಹತ್ತಿ ಬೆಳೆಯನ್ನು ಬೆಳೆದಂತ ಹಲವಾರು ರೈತರು ಅಪರಿಚಿತ ವ್ಯಕ್ತಿಗಳಿಗೆ ಭತ್ತ,ಹತ್ತಿ ಕೊಟ್ಟು ಮೊಸ ಹೋದಂತ ಸಾಕಷ್ಟು ಉದಾಹರಣೆಗಳು ಇವೆ ಎಂದು ಹೇಳಿದರು.
ಯಾದಗಿರಿ ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಸಾಕಷ್ಟು ನಡೆದ ನೈಜ್ಯ ಘಟನೆಗಳು ತಾವುಗಳು ಪತ್ರಿಕೆ ಮಾಧ್ಯಮಗಳಲ್ಲಿ ಬಹಳಷ್ಟು ನೋಡರಬಹುದು ಎಂದರು ಆದ ಕಾರಣ ತಮಗೆ ಪರಿಚಯ ಇರದಂತ ವ್ಯಕ್ತಿಗಳಿಗೆ ಭತ್ತ ಮತ್ತು ಹತ್ತಿ ಬೆಳೆಯನ್ನು ಕೊಟ್ಟು ಮೋಸ ಹೋಗಬೇಡಿ ಮತ್ತು ಚೆಕ್ ಕೊಡುತ್ತೇವೆ ಎಂದು ಹೇಳಿದಾಗ ನಮಗೆ ಚೆಕ್ ಬೇಡಾ ಅಂತಾ ಹೇಳಿ ಎಂದು ದಕ್ಷ ಅಧಿಕಾರಿ ದಯಾನಂದ.ಬಿ.ಜಮಾದಾರ್ ಅವರು ರೈತರಿಗೆ ಉತ್ತಮ ಸಲಹೆಗಳು ನೀಡಿ ರೈತರಲ್ಲಿ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಕಕ್ಕೇರ ಗ್ರಾಮದ ರೈತರು ಹಾಗೂ ದೇವಾಪುರ ಗ್ರಾಮದ ರೈತರು ಉಪಸ್ಥಿತರಿದ್ದರು.

ವರದಿ:ರಾಜಶೇಖರ ಮಾಲಿ ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ