ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಪಟ್ಟಣದ ಮುಖ್ಯ ರಸ್ತೆಗಳೇ ಬಿಡಾಡಿ ದನಗಳ ನಿತ್ಯ ವಾಸಸ್ಥಳ

ಬಿಡಾಡಿ ದನಗಳನ್ನು ಗೋ ಶಾಲೆಗೆ ಕಳುಹಿಸುವುದು ಯಾವಾಗ ?

ಕೊಟ್ಟೂರು:ಅಭಿವೃದ್ಧಿ ಹೊಂದುತ್ತಿರುವ ಕೊಟ್ಟೂರು ಪಟ್ಟಣದಲ್ಲಿ ವಾಹನಗಳ ದಟ್ಟಣೆ ಈಗಾಗಲೇ ಹೆಚ್ಚಿದ್ದು ವಾಹನ ಸವಾರರೇ ರಸ್ತೆಯಲ್ಲಿ ಮುಂದೆ ಹೋಗಬೇಕಾದರೆ ಖಾಲಿ ಸ್ಥಳ ಹುಡುಕುವಂತಹ ಪರಿಸ್ಥಿತಿ ವಾಹನ ಸವಾರರಿಗೆ ಇದೆ ಇಂಥಹ ಸಂದರ್ಭದಲ್ಲಿ ಕೊಟ್ಟೂರು ಪಟ್ಟಣದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಿದ್ದು,ಬಿಡಾಡಿ ದನಗಳು ರಸ್ತೆ ಮದ್ಯದಲ್ಲಿ ಮಲಗುವುದು,ಒಂದಕ್ಕೊಂದು ಬಡಿದಾಡುವುದು,ರಸ್ತೆ ಮದ್ಯೆಯೇ ನಿಲ್ಲುವುದು ಹೀಗೆ ವಾಹನ ಸವಾರರಿಗೆ ತೊಂದರೆ ಕೊಡುತ್ತವೆ, ಭಾರೀ ವಾಹನಗಳ ಸವಾರರು ಧ್ವನಿವರ್ಧಕಗಳಿಂದ ಶಬ್ಧ ಮಾಡಿದರೂ ದನಗಳು ಮಾತ್ರ ಕ್ಯಾರೆ ಅನ್ನುತ್ತಿಲ್ಲ,ಈ ತೊಂದರೆ ಕೊಟ್ಟೂರು ಪಟ್ಟಣದ ಮುಖ್ಯರಸ್ತೆಗಳಲ್ಲಿ ಹೆಚ್ಚಾಗಿ ಕಂಡು ಬಂದಿದ್ದರೂ ಸಂಬಂಧ ಪಟ್ಟವರು ಸಂಬಂಧವಿಲ್ಲದಂತೆ ಓಡಾಡುತ್ತಿರುವುದು ವಿಪರ್ಯಾಸವೇ ಸರಿ,ಬಿಡಾಡಿ ದನಗಳು ವಾಹನಗಳಿಗೆ ದಾರಿಬಿಡದೆ ಮದವೇರಿದ ಆನೆಗಳಂತೆ ನಿಂತಿರುತ್ತವೆ ಜೊತೆಗೆ ಗುರುದೇವ ಶಾಲಾ ಅವರಣದ ಹತ್ತಿರ ಇವುಗಳು ಹೆಚ್ಚಾನುಹೆಚ್ಚು ಇರುವುದರಿಂದ ಶಾಲೆ ಬಿಟ್ಟನಂತರ ಮಕ್ಕಳು ಮನೆಗೆ ಹೋಗಲು ಭಯಪಡುವಂತಾಗಿದೆ ಬಿಡಾಡಿ ದನಗಳ ಸುದ್ದಿ ಬಂದಾಗ ಮಾತ್ರ ಕೆಲವರಿಗೆ ಗೋ ಶಾಲೆ ನೆನಪಿಗೆ ಬರುತ್ತದೆ ಇನ್ನೂ ಸ್ಥಳಿಯ ಸಂಸ್ಥೆ ಕೂಡ ಇತ್ತ ಗಮನಹರಿಸಿಲ್ಲ ಇದನ್ನೆಲ್ಲಾ ಕಂಡ ಸಾರ್ವಜನಿಕರು ಮತ್ತು ಮಕ್ಕಳ ಪೋಷಕರು ಜಾನುವಾರುಗಳಿಗೆ ಮತ್ತು ಅದಕ್ಕೆ ಸಂಬಂಧ ಪಟ್ಟವರಿಗೆ ಮಕ್ಕಳ ಮೇಲೆ ಬಿಡಾಡಿ ದನಗಳ ಹಾವಳಿ ಆಗುವ ಮುನ್ನ ಎಚ್ಚರ ವಹಿಸಿ ಮುಂದಾಗುವ ಅಪಾಯಗಳನ್ನು ತಡೆಯಬೇಕು, ಆದಷ್ಟು ಬೇಗ ದನಗಳನ್ನು ಗೋ ಶಾಲೆಗೆ ಕಳಿಸುವ ವ್ಯವಸ್ಥೆ ಮಾಡಿದರೆ ಒಳಿತು ಎಂಬುದು ಸಾರ್ವಜನಿಕರ ಅಭಿಪ್ರಾಯ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ