ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಅಮ್ಮ

ಗರ್ಭದ ಅರಮನೆಯಲ್ಲಿ ಬೆಚ್ಚಗಿನ ಕಾಳಜಿಯಿಂದ ತನ್ನ ಉಸಿರಿನ ಜೊತೆ ಜಗವ ಪರಿಚಯಿಸಿದ ನಿಸ್ವಾರ್ಥಿ ಅಮ್ಮ||
ಮಮತೆಯ ಅಮೃತ ಉಣಿಸಿ
ಇರುಳಿನ ಅಕ್ಕರೆಯ ಜೋಗುಳ ಹಾಡಿ ಪ್ರೀತಿಯ ಮೊದಲ ಕೈ ತುತ್ತು ನೀಡಿ ಅದ್ಭುತ ಬದುಕು ಭಿಕ್ಷೆ ನೀಡಿದ ತ್ಯಾಗಮಯಿ ಅಮ್ಮ||
ಬದುಕಿನ ಪ್ರತಿ ಹೆಜ್ಜೆಗೆ ಜೋಪಾನವಾಗಿ ಕೈ ಹಿಡಿದು ಜ್ಞಾನದ ದೀವಿಗೆಯಾದ ಗುರು ಅಮ್ಮ
ತಪ್ಪಿದ ಹೆಜ್ಜೆಗೆ ಸಹನೆಯಿಂದ ಸರಿಯಾದ ಹಾದಿ ತೋರಿಸಿದ ಕರುಣೆಯ ಕಣಜ ಅಮ್ಮ||
ಕುರುಡಾದ ಕಣ್ಣಿಗೆ ಬಣ್ಣ ಬಣ್ಣದ ಕನಸ ಕಟ್ಟಿಕೊಟ್ಟ ಕಾಣುವ ದೈವ ಅಮ್ಮ
ಅಕ್ಕರೆಯ ಆಸರೆಯಲ್ಲಿ ಧೈರ್ಯ ತುಂಬಿ ಬದುಕಿಗೊಂದು ಅರ್ಥ ಕೊಟ್ಟ ದೇವತೆ ಅಮ್ಮ||
ಅಮ್ಮ ಎಂದರೆ ಪೂಜ್ಯನೀಯ ಭಾವ ಜಗತ್ತಿನಲ್ಲಿ ಎಂದಿಗೂ ಬದಲಾಗದ ಪ್ರೀತಿ ಅಮ್ಮನ ಪ್ರೀತಿಗೆ ಯಾವುದು ಸಮವಲ್ಲ ಅಮ್ಮ ನಿಜ ದೈವ||
ನಮ್ಮನ್ನ ಸಹಿಸಿ,ಮುದ್ದಿಸಿ,ಮನ್ನಿಸಿ,ಹರಸಿ,ತಿದ್ದಿ, ಕ್ಷಮಿಸಿ ಪ್ರೀತಿಯ ಧಾರೆ ಎರೆದ ಕರುಣಾಮಯಿ ಅಮ್ಮ||

ಲೇಖಕಿ-ಮಾನಸ.ಎಂ.ಸೊರಬ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ