ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮಹಿಳೆ ಸಾವಿಗೆ ಬಿಡಿಎ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಸಾಮಾಜಿಕ ಹೋರಾಟಗಾರ ಸುಭಾಷ್ ಆರೋಪ

ಬೆಂಗಳೂರು

ಕೆಆರ್ ಪುರ:ಬಹುಮಹಡಿ ಕಟ್ಟಡದ ಫ್ಲಾಟ್ ನ ಮುಂಬಾಗ ಸ್ವಚ್ವಗೊಳಿಸುವಾಗ ಆಯ ತಪ್ಪಿ 5 ನೇ ಮಹಡಿಯಿಂದ ಕೆಳಗೆ ಬಿದ್ದು ಧಾರುಣವಾಗಿ ಸಾವನ್ನಪ್ಪಿರುವ ಘಟನೆ ದೊಡ್ಡಬನಹಳ್ಳಿಯಲ್ಲಿ ನಡೆದಿದೆ.
ಖುಷ್ಬೂ ಆಶಿಶ್ ತ್ರೀವೇದಿ (31) ಸಾವನ್ನಪ್ಪಿದ ಗೃಹಿಣಿ,ಗುಜರಾತ್ ಮೂಲದ ಆಶೀಶ್ ದಂಪತಿಗಳು ಬೆಂಗಳೂರು ಪೂರ್ವ ತಾಲ್ಲೂಕಿನ ದೊಡ್ಡಬನಹಳ್ಳಿಯಲ್ಲಿ ಬಿಡಿಎ ನಿರ್ಮಾಣ ಮಾಡಿರುವ 18 ಅಂತಸ್ತಿನ ವಿಂದ್ಯಗಿರಿ ಬಹುಮಹಡಿ ಕಟ್ಟಡದಲ್ಲಿ 5 ನೇ ಅಂತಸ್ತಿನಲ್ಲಿ ಸ್ವಂತ ಫ್ಲಾಟ್ ಖರೀದಿಸಿ ವಾಸವಿದ್ದ ಇವರಿಗೆ ಇತ್ತೀಚೆಗಷ್ಟೆ ವಿವಾಹವಾಗಿತ್ತು,ಗುರುವಾರ ಫ್ಲಾಟ್ ನ ಮುಂಭಾಗದಲ್ಲಿಡಲಾಗಿದ್ದ ಶೂ ಭಾಕ್ಸ್ ಮೇಲೆ ನಿಂತು ಸ್ವಚ್ವಗೊಳಿಸುವಾಗ ಆಯ ತಪ್ಪಿ ಕೆಳಗೆ ಬಿದ್ದಿದ್ದು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಜೀವ ಉಳಿಯಲಿಲ್ಲ,ಕಾಡುಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ತನಿಖೆ ಕೈಗೊಂಡೊದ್ದಾರೆ.
(ಸರ್ಕಾರದ ಅಂಗ ಸಂಸ್ಥೆ ಬಿಡಿಎ ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಬೆಂಗಳೂರಿನಲ್ಲಿ ಸೂರು ಕಲ್ಪಿಸುವ ಸದುದ್ದೇಶದಿಂದ ಆರಂಭವಾಗಿದ್ದು ಇತ್ತೀಚೆಗೆ ಈ ಸಂಸ್ಥೆ ಖಾಸಗಿ ಕಟ್ಟಡ ನಿರ್ಮಾಣ ಸಂಸ್ಥೆಗಳಂತೆ ವ್ಯವಹರಿಸುತ್ತಿರದ್ದು ಬಡವರ ಪ್ರಾಣಕ್ಕೆ ರಕ್ಷಣೆ ಇಲ್ಲದಂತಾಗಿದೆ,ಫೈರ್ ಸೇಫ್ಟಿ ಇಲ್ಲ, ತುರ್ತು ರಕ್ಷಣೆ ಸಲಕರಣಗಳಿಲ್ಲ,ಲಿಫ್ಟ್ ಗಳು ಸರಿ ಇಲ್ಲ,ಇದಕ್ಕಿಂತ ಪ್ರಮುಖವಾಗಿ ಅಪಾರ್ಟ್ಮೆಂಟ್ ನಲ್ಲಿ ಅಳವಡಿಸಿದ ಸೋಲಾರ್ ವಾಟರ್ ಹೀಟರ್ ಗಳು ಕಳೆದ 2 ವರ್ಷಗಳಾದರೂ ಇನ್ನೂ ಕೆಲಸ ಪ್ರಾರಂಭಿಸಿಲ್ಲ,ಈ ರೀತಿಯಲ್ಲಿ ಅನೇಕ ಸಮಸ್ಯೆಗಳಿದ್ದು ಬಿಡಿಎ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಖುಷ್ಬೂ ಎಂಬ ಮಹಿಳೆ ಸಾವನ್ನಪ್ಪಿದ್ದಾರೆಂದು ಸಾಮಾಜಿಕ ಹೋರಾಟಗಾರ ಸುಭಾಷ್ ಆರೋಪಿಸಿದ್ದಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ