ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕವನದ ಶೀರ್ಷಿಕೆ:ಜೀವನದ ಸಂಪತ್ತು

ಏನೆಂದರೇನು ಏನಿಲ್ಲದಿದ್ದರೇನು ಇವರು
ಸಂಪತ್ತಿನ ಗುಣಗಾಣ ಮಾಡುವರು
ಸಾಲದ ಹೊರೆಹೊತ್ತು ನಡೆದವರು
ನೆಟ್ಟರು ಸಾಲದಮರ ಗುಣವಂತರು
ಸಾವಿನಲ್ಲಿ ಸೋತರೂ ಸಂಪತ್ತಿನ ಸಾಹುಕಾರರು//

ಕರಿಯದೆ ಬಂದು ಹೋಗುವುದು
ಸಂಪತ್ತಿನ ಗೋಡೆಯ ನೆರಳು ಇದು
ಕರುಣಿಸದೆ ಬಂದು ಹೋಗುವುದು
ಮುಖದ ಮೇಲಿನ ಮೊಡವೆ ತರ ಕಾಣುವದು
ಸುಖದ ಸಂಪತ್ತು ಇದ್ದವರಿಗೆ ಇದು//

ಖಾಲಿ ಜೀವನದ ಬಂಡಿಯಲ್ಲಿ
ಬಂಡಿಯ ಚಾಲಕನಾಗಿ ಸಾಗಬೇಕು ಇಲ್ಲಿ
ಜಾಗ್ರತೆಯಿಂದ ಮುನ್ನಡೆಸಬೇಕುಮನಸ್ಸು ಇಲ್ಲಿ
ಅವಾಗ ಮಾತ್ರ ದಡ ಸೇರುವುದು ಸತ್ಯದಲ್ಲಿ
ಮನುಷ್ಯ ಎಂಬ ಜೀವಿ ಜೀವನದಲ್ಲಿ //

ಯಾವಾಗಲೂ ನಗುಮುಖದ ಒಡೆಯ
ನಡೆದ ದಾರಿಯ ನೆರಳು ಹಿಂಬಾಲಿಸುವುದಯ್ಯ
ಹಿಯಾಳಿಸಬೇಡಿ ಹಿಗ್ಗಾಮುಗ್ಗ ತುಳಿಯಬೇಡಿರಯ್ಯ
ಹಿಗ್ಗಿನಿಂದ ಬರುವರು ಬಡವರು ಬಲ್ಲವರುಯ್ಯ
ಬಲಿಯಾಯಿತು ನೋಡು ಸಂಪತ್ತು ಬಲ್ಲವರಿಗೆ//

-ಮಹಾಂತೇಶ ಖೈನೂರ (ಯಾತನೂರ)

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ