ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಪತ್ರಕರ್ತ ವಿನೋದ್ ಗೆ ಪತ್ರಕರ್ತರ ಸಂಘದ ವತಿಯಿಂದ ಶ್ರದ್ದಾಂಜಲಿ

ಹನೂರು:ಪತ್ರಕರ್ತನಾದವನಿಗೆ ಕ್ರಿಯಾಶೀಲತೆ ಮತ್ತು ಧೈರ್ಯ ಮುಖ್ಯ ಅಂತಹ ಗುಣ ಯುವ ಪತ್ರಕರ್ತರಾದ ವಿನೋದ್ ರವರಲ್ಲಿ ಇತ್ತು ಅಲ್ಲದೆ ಅವರ ಸಾವು ನಮಗೆ ಅತೀವ ನೋವು ತಂದಿದೆ ಎಂದು ಹಿರಿಯ ವಕೀಲರಾದ ಎಸ್ ನಾಗರಾಜು ತಿಳಿಸಿದರು.ಹನೂರು ಪಟ್ಟಣದ ಕರ್ನಾಟಕ ಪತ್ರಕರ್ತರ ಸಂಘದ ಕಛೇರಿಯಲ್ಲಿ ಇತ್ತೀಚಿನ ದಿನದಲ್ಲಿ ಅಪಘಾತದಲ್ಲಿ ಮೃತರಾದ ವಿನೋದ್ ರವರ ಶ್ರಧ್ದಾಂಜಲಿ ಸಲ್ಲಿಸಿ ಮಾತನಾಡಿದ ವಕೀಲರು ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಪತ್ರಕರ್ತರ ಪಾತ್ರ ದೊಡ್ಡದಿದೆ ಇವರು ನಮ್ಮ ಭಾಗದ ಹಲವಾರು ವಿಷಯಗಳಲ್ಲಿ ಸೂಕ್ಷ್ಮತೆಯನ್ನು ಅರಿತು ವರದಿ ಮಾಡುತ್ತಿದ್ದರು ಅವರ ಅಗಲಿಕೆ ನಮಗೆ ತೀವ್ರ ನೋವು ತಂದಿದೆ ಆ ದೇವರು ಅವರ ಕುಟುಂಬಕ್ಕೆ ದುಃಖ ತಡೆದುಕೊಳ್ಳುವ ಶಕ್ತಿಯನ್ನು ನೀಡಲಿ ಎಂದು ತಿಳಿಸಿದರು.
ಇದೇ ಸಮಯದಲ್ಲಿ ಪಟ್ಟಣದ ವೆಂಕಟೇಗೌಡರು ಮಾತನಾಡಿ ನಮ್ಮ ಭಾಗದ ಯುವ ಪತ್ರಕರ್ತನನ್ನು ಕಳೆದುಕೊಂಡಿದ್ದು ನಮಗೆ ಅತೀವ ನೋವುಂಟು ಮಾಡಿದೆ ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಪತ್ರಕರ್ತರ ಪಾತ್ರ ದೊಡ್ಡದಿದೆ ಅಂತಹ ಕೆಲಸ ಅವರು ಮಾಡುತ್ತಿದ್ದರು.ಎಂದು ತಿಳಿಸಿದರು.
ರೈತ ಸಂಘದ ಅಧ್ಯಕ್ಷರಾದ ಚಂಗಡಿ ಕರಿಯಪ್ಪ ಮಾತನಾಡಿ ವಿನೋದ್ ಒಬ್ಬ ಪತ್ರಕರ್ತ ಮಾತ್ರವಲ್ಲದೆ ಹಿತೈಷಿಯಾಗಿದ್ದರು ಅವರ ವರದಿಗಾರಿಕೆಯು ನಮಗೆ ಮುಂದಿನ ಹೋರಾಟಗಳಿಗೆ ಸ್ಪೂರ್ತಿಯಾಗಿತ್ತು ಅವರ ನಿಧನದಿಂದ ನಮ್ಮ ರೈತ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ ಎನ್ನ ಬಹುದು ಎಂದರು .
ಕರ್ನಾಟಕ ಪತ್ರಕರ್ತರ ಸಂಘದ ಹನೂರು ಘಟಕದ ಅಧ್ಯಕ್ಷರಾದ ಬಂಗಾರಪ್ಪ ಮಾತನಾಡಿ ವಿನೋದ್ ರವರ ಸಾವು ನಮಗೆ ನುಂಗಲಾರದ ತುತ್ತಾಗಿದೆ ಅವರ ಪ್ರತಿಯೊಂದು ವರದಿಯು ನಮಗೆ ಮಾದರಿಯಾಗಿತ್ತು ಪ್ರತಿಯೊಂದು ಅಧಿಕಾರಿ ವರ್ಗ,ಸಂಘ ಸಂಸ್ಥೆಗಳ ಜೊತೆಯಲ್ಲಿ ಉತ್ತಮ ಒಡನಾಟ ಹೊಂದಿದ್ದರು ಭಗವಂತ ಅವರು ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದರು.
ಇದೇ ಸಮಯದಲ್ಲಿ ಹಿರಿಯ ಪತ್ರಕರ್ತ ಪುಟ್ಟಸ್ವಾಮಿ, ರೈತ ಸಂಘದ ಅಧ್ಯಕ್ಷರಾದ ಅಮ್ಜಾದ್ ಖಾನ್ ಪಟ್ಟಣ ಪಂಚಾಯತಿ ಸದಸ್ಯರುಗಳಾದ ಮಹೇಶ್ ನಾಯ್ಕ ಸಂಪತ್ತು ಕುಮಾರ್,ಪೋಲಿಸ್ ಅಧಿಕಾರಿಗಳಾದ ಪಿ ಎಸ್ ಐ ಅಶ್ವಥ್ ಹಾಗೂ ರಾಘವೇಂದ್ರ ಮುಖಂಡರುಗಳಾದ ನಟರಾಜೆಗೌಡರು, ಮಂಜೇಶ್,ದಾಸೆಗೌಡ,ಇಮ್ರಾನ್ ಖಾನ್ ಹಾಗೂ ಪತ್ರಕರ್ತರು ಸೇರಿದಂತೆ ಇತರರು ಹಾಜರಿದ್ದರು.

ವರದಿ:ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ