ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದ ನಿರೀಕ್ಷಕರಾದ ಮಠಪತಿ ಹಾಗೂ ಚಲವಾದಿ ಅವರನ್ನು ಅಮಾನತ್ತುಗೊಳಿಸಲು ಕರವೇ ಒತ್ತಾಯ

ಕಲಬುರಗಿ:ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಬಡಾವಣೆಯಲ್ಲಿ ಈಗಾಗಲೇ ಸರಕಾರದಿಂದ ಐಎಸ್ಐ ಅನುಮತಿಯನ್ನು ಪಡೆದ 16 ಘಟಕಗಳು ಶುದ್ಧವಾದ ಕುಡಿಯುವ ನೀರು ಪುರೈಕೆ ಮಾಡುತ್ತಿದ್ದು,ಆದರೆ ಸರಕಾರದ ಅನುಮತಿ ಇಲ್ಲದೇ 21 ಘಟಕಗಳು ನವೀಕರಿಸದೇ ಇರುವ ಘಟಕಗಳು ಹಾಗೂ ಅನಧಿಕೃತ ಕುಡಿಯುವ ನೀರಿನ ಘಟಕದ ವಾಹನ ಮೂಲಕ ಸಾಗಣೆ ಮಾಡುತ್ತಿರುವ ಘಟಕಗಳು ಎಂದು ಕರವೇ ಕಾವಲುಪಡೆ ಜಿಲ್ಲಾಧ್ಯಕ್ಷ ಮಂಜುನಾಥ ಎಸ್ ನಾಲವರಕರ್ ನೇತೃತ್ವದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಯಿತು.ನಂತರ ಅಪರ ಜಿಲ್ಲಾಧಿಕಾರಿಗಳು ಒಟ್ಟು 63 ಕುಡಿಯುವ ನೀರಿನ ಘಟಕಗಳು ಅನಧಿಕೃತವಾಗಿ ನೀರು ಪುರೈಕೆ ಮಾಡುತ್ತಿರುವ ಘಟಕದ ವಿರೋಧ ಆಹಾರ ಸುರಕ್ಷತಾ ಗುಣಮಟ್ಟದ ಪ್ರಾಧಿಕಾರದ ಕಾಯ್ದೆ 2011ರ ಸೆಕ್ಷನ್ 58ರ ಅಡಿ ಪ್ರತಿವಾದಿಗಳ ವಿರುದ್ಧ ಪಿರ್ಯಾದುದಾರರು ದಾಖಲು ಮಾಡಿ ಈ ನ್ಯಾಯಲಯಕ್ಕೆ ಸಲ್ಲಿಸಿದ್ದಾರೆ,ಸದರಿ ಪ್ರಕರಣಗಳ ವಿರುದ್ಧ ವಿಚಾರಣೆಗಾಗಿ ಪ್ರತಿವಾದಿಗಳಿಗೆ ನೋಟಿಸ್ ನೀಡಿ ವಿಚಾರಣೆಯನ್ನು ದಿನಾಂಕ 20-5-2023 ರಂದು ಪ್ರತಿವಾದಿಗಳ ಸಮಕ್ಷಮದಲ್ಲಿ ಮಾನ್ಯ ಅಪರ ಜಿಲ್ಲಾಧಿಕಾರಿಗಳು ಹಾಗೂ ನ್ಯಾಯನಿರ್ಣಯ ಅಧಿಕಾರಿಗಳು ಅಂತಿಮ ತೀರ್ಮಾನವನ್ನು ಹೊರಡಿಸಿದ್ದಾರೆ ತೀರ್ಮಾನದಲ್ಲಿ ಹೊರಡಿಸಿದಂತೆ ರೂ,50,000/-ದಂಡವನ್ನು ವಿಧಿಸಲಾಗುತ್ತದೆ ದಂಡದ ಮೊತ್ತವನ್ನು ಪಾವತಿ ಮಾಡಲುವ 15 ದಿನಗಳ ಕಾಲವಕಾಶ ನೀಡಿರುತ್ತಾರೆ ಆದರೆ ಆಹಾರ ಸುರಕ್ಷತಾ ಗುಣಮಟ್ಟ ಕಾಯ್ದೆ ಸೆಕ್ಷಸ್ 96 ರ ಅಡಿ ಕಾನೂನುಕ್ರಮ ಕ್ಕೆಗೊಳ್ಳಲು ಸೂಚಿಸಿರುತ್ತಾರೆ ಆದರೆ ಆಹಾರ ಸುರಕ್ಷತಾ ಗುಣಮಟ್ಟದ ಪ್ರಾಧಿಕಾರದ ನಿರೀಕ್ಷಕರಾದ ಪರಮೇಶ್ವರ ಮಠಪತಿ ಹಾಗೂ ಕಿರಣ ಚಲವಾದಿ ರವರು ಸರಕಾರಕ್ಕೆ ಮೋಸ ಮಾಡಿ,ಸುಮಾರು 30,000/-ಹಣವನ್ನು ಪಡೆದು ಚಾರಿಟೇಬಲ್ ಟ್ರಸ್ಟ್ ಮಾಡುವ ಮೂಲಕ ಕಲಬುರಗಿ ನಗರದ ಸಾರ್ವಜನಿಕರಿಗೆ ಶುದ್ಧವಾದ ಕುಡಿಯುವ ನೀರು ಪೂರೈಕೆ ಮಾಡದೇ,ಇರುವ ಘಟಕಗಳ ಮಾಲೀಕರಿಗೆ ಸಹಾಯ ಮಾಡುತ್ತಿರುವ ಈ ಅಧಿಕಾರಿಗಳನ್ನು ಕೂಡಲೇ ಅಮಾನತ್ತುಗೊಳಿಸಲು ಕಲಬುರಗಿ ಜಿಲ್ಲಾಧಿಕಾರಿಗಳಿಗೆ ಕರವೇ,ಕಾವಲುಪಡೆ ನಿಯೋಗ ಮನವಿ ಮಾಡಲಾಯಿತು,ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಮಂಜುನಾಥ ನಾಲವಾರಕರ್,ಜಿಲ್ಲಾ ಕಾರ್ಯಾಧ್ಯಕ್ಷರಾದ ಪ್ರಹ್ಲಾದ ಹಡಿಗಿಲಕರ್,ಜಿಲ್ಲಾ ಗೌರವಧ್ಯಕ್ಷರಾದ ರವಿ,ವಾಲಿ,ಸೇರಿದಂತೆ ಇನ್ನಿತರರು ಹಾಜರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ