ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಯಡ್ರಾಮಿ ಪಟ್ಟಣದಲ್ಲಿ 50ರ ಕನ್ನಡ ಜ್ಯೋತಿ ರಥಯಾತ್ರೆ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಗಣ್ಯ ಮಾನ್ಯರು

ಕಲಬುರಗಿ:ಯಡ್ರಾಮಿ ಪಟ್ಟಣದಲ್ಲಿ ಕರ್ನಾಟಕ 50ರ ಸಂಭ್ರಮ ರಥಯಾತ್ರೆಗೆ ಯಡ್ರಾಮಿ ತಾಲೂಕಿನ ಸಾರ್ವಜನಿಕರು ಸ್ಥಳೀಯರು ಹಾಗೂ ರಾಜಕೀಯ ಮುಖಂಡರು ಅಧಿಕಾರಿಗಳು ಕನ್ನಡಪರ
ಸಂಘಟನೆಗಳು ಅದ್ದೂರಿಯಾಗಿ ಕನ್ನಡಾಂಬೆ ತಾಯಿ ಭುವನೇಶ್ವರಿ ಕರ್ನಾಟಕ 50 ರ ಸಂಭ್ರಮ ರಥಯಾತ್ರೆ ಅದ್ದೂರಿಯಾಗಿ ಬರಮಾಡಿಕೊಂಡು ಸ್ವಾಗತ ಕೋರಿದರು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಸರ್ದಾರ್ ಶರಣಗೌಡ ವೃತ್ತದವರೆಗೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ
ಕನ್ನಡಾಂಬೆ ಬಾವುಟ ಕೈಯಲ್ಲಿ ಹಿಡಿದುಕೊಂಡು ಕನ್ನಡ ಗೀತೆಯ ನೃತ್ಯ ಮಾಡುವ ಮೂಲಕ ಡೊಳ್ಳು ಕುಣಿತ ಯಡ್ರಾಮಿ ಸುತ್ತಮುತ್ತಲಿನ ಹಳ್ಳಿಯಿಂದ ಆಗಮಿಸಿದ
ಯುವಕರು ರೈತರು ಯಡ್ರಾಮಿ ಪಟ್ಟಣದ ಸ್ಥಳೀಯರು ಉತ್ಸಾಹದಿಂದ ವಿಜೃಂಭಣೆಯಿಂದ ಸರ್ದಾರ್ ಶರಣಗೌಡ ವೃತ್ತದ ವರೆಗೆ ಕರ್ನಾಟಕ 50 ರ ಸಂಭ್ರಮ ರಥಯಾತ್ರೆಗೆ ಮೆರಗು ತಂದು ಕೊಟ್ಟರು ಮತ್ತು
ರಥ ಯಾತ್ರೆಯ ಭವ್ಯವಾದ ಉತ್ಸವವು ನೋಡುಗರ ಕಣ್ಮನ ಸೆಳೆದು ಮನಸೂರೆಗೊಂಡವು
ಈ ಸಂದರ್ಭದಲ್ಲಿ ಯಡ್ರಾಮಿ ತಹಶೀಲ್ದಾರ ನಾಗನಾಥ ಸೇಡಂ ಪಟ್ಟಣ ಪಂಚಾಯತಿ ಮುಖ್ಯಧಿಕಾರಿ ಸಂತೋಷ್ ಕುಮಾರ್ ರೆಡ್ಡಿ ಹಾಗೂ ಪಶು ವೈದ್ಯಕೀಯ ಅಧಿಕಾರಿ ಡಾ.ಪ್ರಭು ಕಲ್ಲೂರ್ ಹಾಗೂ ಶಿರಸ್ತೆದಾರರಾದ ಮಾಲಿಂಗಯ್ಯ ನಾಗೇಂದ್ರ ಪಾಟೀಲ್,ಕಂದಾಯ ನಿರೀಕ್ಷಕ ಈರಣ್ಣ,ರಾಜಕೀಯ ಮುಖಂಡರಾದ ಚಂದ್ರು ಪುರಾಣಿಕ್,ಗುರಣ್ಣ ಕಾಚಾಪುರ್ ಹಾಗೂ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಅಧ್ಯಕ್ಷರು,ಉಪಾಧ್ಯಕ್ಷರು,ಸದಸ್ಯರು ಯಡ್ರಾಮಿ ತಾಲೂಕಿನ ಸುತ್ತಮುತ್ತ ಹಳ್ಳಿಯ ರೈತರು ಸ್ಥಳೀಯರು ಭಾಗವಹಿಸಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ