ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ನಮ್ಮ ರಾಜ್ಯದ ಸ್ಪೀಕರ್ ಹೇಳಿಕೆಗೆ ನನ್ನ ಧಿಕ್ಕಾರ…

ಪ್ರಸ್ತುತ ನಮ್ಮ ರಾಜ್ಯದ ಸ್ಪೀಕರ್ ಆಗಿರುವ ಯು.ಟಿ.ಖಾದರ್ ರವರು ಕಳೆದ ವಾರ ನಮ್ಮ ರಾಜ್ಯದ ವಿದ್ಯಾರ್ಥಿಗಳನ್ನ ಶೌಚಾಲಯ ಸ್ವಚ್ಛಗೊಳಿಸುವುದು ತಪ್ಪಲ್ಲ ಎಂದು ಹೇಳಿಕೆಯನ್ನು ಕೊಟ್ಟಿದ್ದಾರೆ ಇಂತಹ ಹೇಳಿಕೆ ವಿದ್ಯಾರ್ಥಿಗಳಿಗೆ ಅಪಮಾನ ಮಾಡುವಂತಿದೆ,ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಹಾಗೂ ಮಕ್ಕಳೆಂದರೆ ದೇಶದ ಭವಿಷ್ಯವೆಂದರ್ಥ ಆದರೆ ಇಂತಹ ಕೆಟ್ಟ
ಮನಸ್ಥಿತಿಯನ್ನ ಹೊಂದಿರುವ ವ್ಯಕ್ತಿಯನ್ನು ಸ್ಪೀಕರ್ ಆಗಿ ನೇಮಕವಾಗಿರುವುದು ನಮ್ಮ ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನವೇ ಸರಿ,ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳೆಂದರೆ ಯಾಕಿಷ್ಟು ಕೀಳು ಮನೋಭಾವನೆ ಎಂಬ ಪ್ರಶ್ನೆ ಉದ್ಭವಿಸುತ್ತದೆ, ನಮ್ಮ ಮಕ್ಕಳನ್ನ ಕೇವಲ ಶೌಚಾಲಯ ಸ್ವಚ್ಛಗಳಿಸುವುದಕ್ಕೆ ಸೀಮಿತಗೊಳಿಸುವುದು ಎಷ್ಟು ಸರಿ,ಇವರು ಒಬ್ಬ ಉನ್ನತ ಸ್ಥಾನದಲ್ಲಿ ಇದ್ದು ರಾಜ್ಯದ ಸ್ಪೀಕರ್ ಆಗಿರುವ ನೀವು ಇಂತಹ ಹೇಳಿಕೆಯನ್ನು ಸಮರ್ತಿಸಿಕೊಳ್ಳುವುದು ಎಷ್ಟು ಸರಿ,ಇನ್ನೂ ಸಹ ನಮ್ಮ ರಾಜ್ಯದ ಎಷ್ಟೋ ಶಾಲೆಗಳಲ್ಲಿ ಸರ್ಕಾರಿ ಸೌಲಭ್ಯಗಳು ನೇರವಾಗಿ ವಿದ್ಯಾರ್ಥಿಗಳಿಗೆ ಸಿಗುತ್ತಿಲ್ಲ, ನಾವು ನೋಡಬಹುದು ಇನ್ನು ಎಷ್ಟೋ ಗ್ರಾಮೀಣ ಭಾಗದಲ್ಲಿರುವ ಶಾಲೆಗಳಲ್ಲಿ ಶೌಚಾಲಯದ ವ್ಯವಸ್ಥೆಯೇ ಇರುವುದಿಲ್ಲ,ಫ್ಯಾನ್ ಹಾಗೂ ಊಟದ ವ್ಯವಸ್ಥೆ ಮತ್ತು ಕಲಿಕಾ ಪದ್ಧತಿಯೇ ಸರಿಯಾಗಿಲ್ಲ, ರಾಜ್ಯದ ಅನೇಕ ಕಡೆ ಎಷ್ಟು ಸಾರ್ವಜನಿಕ ಶಾಲೆಗಳಿಗೆ ಸರಿಯಾದ ಬಣ್ಣ ವ್ಯವಸ್ಥೆ ಹಾಗೂ ಉತ್ತಮ ಕಟ್ಟಡ ವ್ಯವಸ್ಥೆಗೆ ಸರಿಯಾಗಿಲ್ಲ,ಇಂತಹದನ್ನ ಅಭಿವೃದ್ಧಿ ಮಾಡಬೇಕಾದ ಸ್ಪೀಕರ್ ಅವರು ಇಂತಹ ಕೆಟ್ಟ ಮನಸ್ಥಿತಿಯಿಂದ ವಿದ್ಯಾರ್ಥಿಗಳನ್ನು ಕುರಿತು ಈ ರೀತಿ ಮಾತನಾಡಿರುವುದು ವಿದ್ಯಾರ್ಥಿಗಳ ಜೀವನ ಸ್ವಾತಂತ್ರ್ಯ ಮತ್ತು ವಿದ್ಯಾಭ್ಯಾಸ ಸ್ವಾತಂತ್ರ್ಯಕ್ಕೆ ಧಕ್ಕೆಯಾದಂತಹ ಹೇಳಿಕೆ ಇದಾಗಿರುತ್ತದೆ ಇವರ ಇಂತಹ ಹೇಳಿಕೆಗೆ ನನ್ನ ಧಿಕ್ಕಾರವಿರಲಿ…

-ಕಾರ್ತಿಕ್ ಜಿ.ಎನ್ ವಕೀಲರು,ಗುಂಡ್ಲುಪೇಟೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ