ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ರಸ್ತೆ ಸುರಕ್ಷಾ ಸಪ್ತಾಹಕ್ಕೆ ಸಿ ಪಿ ಐ ಶ್ರೀಶೈಲ ಕುಮಾರ್ ಚಾಲನೆ:ಸಂಚಾರಿ ಪೊಲೀಸರೊಂದಿಗೆ ಮೆಕಾನಿಕ್ ಗಳು ಜಾಥಾದಾಲ್ಲಿ ಭಾಗಿ

ಭದ್ರಾವತಿ:ರಸ್ತೆ ಸುರಕ್ಷಾ ಸಪ್ತಾಹದ ಅಂಗವಾಗಿ ಉಪವಿಭಾಗದ ಪೋಲೀಸ್ ಹಾಗೂ ದ್ವಿಚಕ್ರ ವಾಹನ ಮೆಕ್ಯಾನಿಕ್ ಸಂಘದ ಸಹಯೋಗದೊಂದಿಗೆ ಅಂಡರ್ ಬ್ರಿಡ್ಜ್ ನಿಂದ ರಂಗಪ್ಪ ವ್ರತ್ತದವರೆಗೆ “ಹೆಲ್ಮೆಟ್ ಧರಿಸಿ, ಜೀವ ಉಳಿಸಿ” ಎಂಬ ಘೋಷದೊಂದಿಗೆ ಬೈಕ್ ಜಾಥಾ ಹಮ್ಮಿಕೊಳ್ಳಲಾಯಿತು.
ನಗರ ವೃತ್ತ ನಿರೀಕ್ಷಕ ಶ್ರೀಶೈಲಕುಮಾರ್ ಬೈಕ್ ಜಾಥಾಗೆ ಹಸಿರು ನಿಶಾನೆ ತೋರಿದರು.ಸಂಚಾರಿ ಠಾಣೆಯ ಠಾಣಾಧಿಕಾರಿ ಶಾಂತಲಾ ರವರ ನೇತೃತ್ವದಲ್ಲಿ ಹಳೇನಗರ ಠಾಣೆಯ ಕಾನೂನು ಸುವ್ಯವಸ್ಥೆ ಮತ್ತು ಅಪರಾಧ ವಿಭಾಗದ ಠಾಣಾಧಿಕಾರಿಗಳು,ಸಂಚಾರಿ ಹಾಗೂ ಹಳೇನಗರ ಠಾಣೆಯ ಸಹಾಯಕ ಠಾಣಾಧಿಕಾರಿಗಳು ಹಾಗೂ ಸಿಬ್ಬಂದಿಗಳ ಜೊತೆಗೆ ಅಂಡರ್ ಬ್ರಿಡ್ಜ್ ನಿಂದ ಬಿ ಹೆಚ್ ರಸ್ತೆಯ ಹಾಲಪ್ಪ ವೃತ್ತ,ಮಾಧಾವಾಚಾರ್ ವೃತ್ತದ ಮೂಲಕ ಸಿ ಎನ್ ರಸ್ತೆ ರಂಗಪ್ಪ ವೃತ್ತದವರೆಗೆ ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನದಲ್ಲಿ ಜಾಥಾ ನಡೆಸಿದರು.
ಸಿ ಪಿ ಐ ಶ್ರೀಶೈಲ ಕುಮಾರ್ ರವರು ಧರಿಸಿದ್ದ ಹೆಲ್ಮೆಟ್ ನಲ್ಲಿ “ನಿನಗಲ್ಲದಿದ್ದರೂ ನಿನ್ನ ಕುಟುಂಬಕ್ಕಾಗಿ ಹೆಲ್ಮೆಟ್ ಧರಿಸು” ಎಂಬ ವಾಕ್ಯ ಜಾಗೃತಿ ಜಾಥಾದ ಉದ್ದೇಶವನ್ನು ತಿಳಿಸಿದೆ.

ವರದಿ:ಕೆ ಆರ್ ಶಂಕರ್ ಭದ್ರಾವತಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ