ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

25 ನೇ ದಿನದ ಬಸವಮಾಸದ ಸತ್ಸಂಗ ಕಾರ್ಯಕ್ರಮ

ಮೈಸೂರು:25 ನೇ ದಿನದ ಬಸವಮಾಸದ ಸತ್ಸಂಗ ಕಾರ್ಯಕ್ರಮದಲ್ಲಿ ಅಷ್ಠಾವರಣಗಳಲ್ಲೊಂದಾದ ಜಂಗಮ ಎಂಬ ವಿಚಾರವಾಗಿ ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರದ ಬಸವಕೇಂದ್ರದ ಚರಜಂಗಮ ಪರಮಪೂಜ್ಯ ಶ್ರೀ ಶ್ರೀ ಬಸವಯೋಗಿಪ್ರಭುಗಳು ನಂಜನಗೂಡಿನ ಪ.ಗು ಹಳಕಟ್ಟಿನಗರದ ವೈಕೆಎಲ್ ಸ್ವಾಮಿ ಲೇ ಔಟಿನಲ್ಲಿ ಅನುಭಾವ ನೀಡಿದರು.ಜಂಗಮವೆಂದರೆ ಅದು ಅರಿವು,ಆಚಾರದ,ಅನುಭಾವವುಳ್ಳ ಶಿವಚೈತನ್ಯ,ಅದು ಯಾರಲ್ಲಿರುತ್ತದೆಯೋ ಅವರು ಕೂಡಾ ಜಂಗಮ ಸ್ವರೂಪಿಗಳೆಂದರು.ಒಟ್ಟಾರೆ ಜಂಗಮವೆನ್ನುವುದು ನಾಮ,ಸೀಮೆ,ಕುಲ,ಗೋತ್ರ ಎಲ್ಲವನ್ನೂ ಮೀರಿದ ಘನತರವಾದ ವಸ್ತುವೇ ಆಗಿದೆ ಅದರ ದರ್ಶಿತರೆಲ್ಲರೂ ಜಂಗಮರು. ಭಕ್ತರ ಉದ್ಧಾರ ಮಾಡುವುದು ಜಂಗಮದ ಕೆಲಸವಾಗಿದೆ ಎಂದರು. ಇನ್ನು ಹತ್ತು ಹಲವು ಉದಾಹರಣೆಗಳೊಂದಿಗೆ ತಿಳಿಸಿದರು.ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಶೂನ್ಯಪೀಠದಮಹಾ ಜಂಗಮರಾದ ಅಲ್ಲಮಪ್ರಭುದೇವರು,ಚೆನ್ನಬಸವಣ್ಣನವರು, ಸಿದ್ದರಾಮೇಶ್ವರರು,ಮಲೆಯ ಮಹದೇಶ್ವರರು,
ತೋಂಟದ ಸಿದ್ದಲಿಂಗೇಶ್ವರರು,ಸುತ್ತೂರಿನ ಘನಲಿಂಗದೇವರು,ದೇವನೂರು ಗುರುಮಲ್ಲೇಶ್ವರರು ಇನ್ನೂ ಅನೇಕರು ಮಹಾಜಂಗಮರಾದಿಯಾಗಿ ಭಕ್ತರಲ್ಲಿಗೆ ತಂಗಾಳಿಯಂತೆ ಸುಳಿದು ಕಷ್ಟಗಳನ್ನು ಕಳೆದು ಅಜ್ಞಾನಕಳೆದು ಸುಜ್ಞಾನ ನೀಡಿ ಜಂಗಮತ್ವ ಎಂದರೆ ಏನು ಎಂಬುದನ್ನು ಅರಿವು ಆಚಾರದ ಮೂಲಕ ಜಗತ್ತಿಗೆ ತೋರಿದ್ದಾರೆ ಆದ್ದರಿಂದ ಈ ಕಾರ್ಯಕ್ರಮವು ಬಹಳ ಮಹತ್ವದಾಗಿದೆ ಎಂದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ