ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಯಶಸ್ವಿಯಾಗಿ ಜರುಗಿದ ಜನತಾ ದರ್ಶನ ಕಾರ್ಯಕ್ರಮ

ಹನೂರು:ಜಿಲ್ಲಾಧಿಕಾರಿ ಶಿಲ್ಪನಾಗ್ ಹಾಗೂ ಶಾಸಕ ಎಂ.ಆರ್.ಮಂಜುನಾಥ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ಜನತಾ ದರ್ಶನ ಕಾರ್ಯಕ್ರಮವು ಪಟ್ಟಣದಲ್ಲಿ ಯಶಸ್ವಿಯಾಗಿ ಜರುಗಿತು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಶಾಸಕರು ಹಾಗೂ ಜಿಲ್ಲಾಧಿಕಾರಿ ಅವರು ಜನರ ಅಹವಾಲು ಸ್ವೀಕರಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಜನತಾ ದರ್ಶನದಲ್ಲಿ ಬೂದುಬಾಳು ಶ್ರೀನಿವಾಸ್ ಎಂಬ ಅರ್ಜಿದಾರ ಮಾತನಾಡಿ,10 ವರ್ಷದಿಂದ ಖಾತೆ ಮಾಡಿಕೊಡಲು ಅಧಿಕಾರಿಗಳು ಮೀನಾಮೇಷ ಎಣಿಸುತ್ತಾರೆ ಆಗಾಗಿ ಖಾತೆ ಮಾಡಿಸಿಕೊಡಬೇಕೆಂದರು.ಈ ಬಗ್ಗೆ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು ಮೇಲ್ನೋಟಕ್ಕೆ ಖಾತೆ ಮಾಡಲು ಅರ್ಹತೆ ಇದ್ದು ಇನ್ನೂ 15 ದಿನದೊಳಗೆ ಸಮಸ್ಯೆ ಇತ್ಯಾರ್ಥ ಪಡಿಸಲು ಕ್ರಮವಹಿಸಬೇಕೆಂದು ತಹಸೀಲ್ದಾರ್ ಅವರಿಗೆ ಸೂಚಿಸಿದರು.
ಅರ್ಜಿದಾರ ಚಂಗಡಿ ಕರಿಯಪ್ಪ ಮಾತನಾಡಿ ಚಂಗಡಿ ಪುನರ್ವಸತಿ ಸೌಲಭ್ಯ ಕಲ್ಪಿಸಬೇಕು,ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟಬೇಕು,ವಿದ್ಯುತ್ ಸೌಕರ್ಯ,ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು ಇನ್ನಿತರೆ ವಿಷಯಗಳ ಬಗ್ಗೆ ಮನವಿ ಮಾಡಿದರು.ಈ ಬಗ್ಗೆ ಉತ್ತರಿಸಿದ ಜಿಲ್ಲಾಧಿಕಾರಿಗಳು ಚಂಗಡಿ ಪುನರ್ವಸತಿ ಸರ್ಕಾರದ ಹಂತದಲ್ಲಿ ಇದೆ ಎಂದು ಮಾಹಿತಿ ನೀಡಿದರು ಜನವನ ಸಾರಿಗೆ ವ್ಯವಸ್ಥೆ ಮತ್ತೆ ಪ್ರಾರಂಭಿಸಲಾಗಿದೆ ಎಂದರು. ಇದೇ ವಿಚಾರವಾಗಿ ಶಾಸಕ ಮಂಜುನಾಥ್ ಮಾತನಾಡಿ,ಚಂಗಡಿ ಪುನರ್ವಸತಿ ವಿಚಾರ ಸೇರಿದಂತೆ ಕಾಡಂಚಿನ ಗ್ರಾಮಗಳಿಗೆ ವಿದ್ಯುತ್ ಮತ್ತು ರಸ್ತೆ ಅನುಕೂಲಕ್ಕೆ ಮುಖ್ಯಮಂತ್ರಿಗಳು ಹಾಗೂ ಹಿರಿಯ ಅಧಿಕಾರಿಗಳು ಅನುಮೋದನೆ ನೀಡಿದ್ದಾರೆ.

ನಮ್ಮೊಡನೆ ಇದ್ದು ಅಭಿವೃದ್ಧಿಗೆ ಸಹಕರಿಸಿ:ಶಾಸಕ ಎಂ.ಆರ್.ಮಂಜುನಾಥ್ ರೈತ ಮುಖಂಡ ಚಂಗಡಿ ಕರಿಯಪ್ಪ ಅವರನ್ನು ಉದ್ದೇಶಿಸಿ ರೈತರು ವಿನಾ ಕಾರಣ ಪ್ರತಿಭಟನೆ ನಡೆಸಿ ಆರೋಪ ಮಾಡುವುದಕ್ಕೂ ಮುನ್ನ ರೈತ ಸಂಘಟನೆಯ ಒಬ್ಬರು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೋಡನೆ ಇದ್ದು ಕಾರ್ಯವೈಖರಿ ಅರಿತು ನಂತರ ನಿಮ್ಮ ಹೋರಾಟ ಮುಂದುವರೆಸಿ ಎಂದು ಚಾಟಿ ಬೀಸಿದ ಪ್ರಸಂಗ ಜರುಗಿತು.

ರೈತ ಮುಖಂಡ ಶಾಂತಕುಮಾರ್ ಮಾತನಾಡಿ 2019-20 ನೇ ಸಾಲಿನ ಬೋರ್ ವೆಲ್ ಸೌಕರ್ಯ ದೊರಕದೇ ಇರುವುದರ ಬಗ್ಗೆ ಪ್ರಸ್ತಾಪಿಸಿದರು.ಈ ಬಗ್ಗೆ ಜಿಲ್ಲಾಧಿಕಾರಿಗಳು ಸ್ಪಷ್ಟನೆ ನೀಡಿ ರಾಜ್ಯ ಮಟ್ಟದಲ್ಲಿ ಸಮಸ್ಯೆ ಇದ್ದು ಬಗೆಹರಿಯುವ ಹಂತದಲ್ಲಿದೆ ಎಂದರು.

ರೈತ ಮುಖಂಡ ಪ್ರಸಾದ್ ಮಣಿಗಾರ್ ಶಾಲಾ ಅವಧಿಗೆ ಬಸ್ ಸೌಕರ್ಯ ಇಲ್ಲದೇ ಇರುವ ಕಾರಣ ಶಿಕ್ಷಕರು ತಡವಾಗಿ ಬರುವುದು,ಬೇಗ ಹೊರಡುವುದು ಮಾಡುತ್ತಿದ್ದಾರೆ ಎಂದು ಆಪಾದಿಸಿದರು,ಇದಕ್ಕೆ ಶಾಸಕ ಮಂಜುನಾಥ್ ಮಾತನಾಡಿ,ಈ ವಿಚಾರವಾಗಿ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಇಲಾಖೆಯವರಿಗೆ ಅಗತ್ಯ ಕ್ರಮವಹಿಸಲು ಸೂಚಿಸಿದರು.ಈ ಬಗ್ಗೆ ಜಿಲ್ಲಾಧಿಕಾರಿ ಶಿಲ್ಪನಾಗ್ ಮಾತನಾಡಿ,ಶಿಕ್ಷಣ ಇಲಾಖೆ, ಸಾರಿಗೆ ಇಲಾಖೆ ಜಂಟಿಯಾಗಿ ಸಭೆ ನಡೆಸಿ ಸಮಸ್ಯೆ ಬಗೆಹರಿಸಲು ಶೀಘ್ರ ಕ್ರಮಕೈಗೊಳ್ಳಬೇಕೆಂದು ಸೂಚಿಸಿದರು.

ಕರ್ತವ್ಯದ ಜೊತೆಗೆ ಮಾನವೀಯತೆ ಮೆರೆದ ಡಿಸಿ: ಜನತಾ ದರ್ಶನದಲ್ಲಿ ಮಹಿಳೆಯೋರ್ವರು ಗೃಹಲಕ್ಷ್ಮಿ ಹಣ ಬಂದಿಲ್ಲ ಎಂದು ಅಳಲು ತೋಡಿಕೊಳ್ಳುತ್ತಿದ್ದಂತೆ ಸಿಡಿಪಿಒ ಅಧಿಕಾರಿಯನ್ನು ಕರೆಯಿಸಿಕೊಂಡ ಜಿಲ್ಲಾಧಿಕಾರಿಗಳು ಇವರಿಗೆ ಇಲ್ಲಿಯೇ ಅನುಕೂಲ ದೊರೆಯಲು ಕ್ರಮವಹಿಸಿ ಎಂದರು.ಮತ್ತೊರ್ವ ಮಹಿಳೆ ತ್ರಿಚಕ್ರ ವಾಹನ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಿದ ಹಿನ್ನಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಯವರನ್ನು ಕರೆಯಿಸಿ ಆದ್ಯತೆ ಮೇರೆಗೆ ಸೌಕರ್ಯವನ್ನು ಒದಗಿಸಿ ಎಂದು ಒತ್ತಾಯಿಸಿದರು.

ಆರ್.ಟಿ. ಐ. ಕಾರ್ಯಕರ್ತ ದಶರಥ್ ದೊಡ್ಡಾಣೆಗೆ ರಸ್ತೆ ಸೌಕರ್ಯ ಕಲ್ಪಿಸಿ ಹಾಗೂ ಇನ್ನಿತರೆ ಕಂದಾಯ ಅರಣ್ಯ ಸಮಸ್ಯೆಗೆ ಸಂಬಂಧಿಸಿದಂತೆ ಪ್ರಶ್ನಿಸಿದ ಹಿನ್ನೆಲೆಯಲ್ಲಿ ಶಾಸಕ ಮಂಜುನಾಥ್ ಮಾತನಾಡಿ,ರಸ್ತೆ ವಿದ್ಯುತ್ ಅಬಿವೃದ್ದಿಗೆ ಸರ್ಕಾರದಿಂದ ಅನುಮೋದನೆ ದೊರೆತಿದ್ದು ಕಾಲವಕಾಶ ಬೇಕು ಎಂದರು.

ಮಂಗಲ ಗ್ರಾಮದ ವಸಂತ ಗ್ರಾಮದಲ್ಲಿ ಮಹಿಳಾ ಆರೋಗ್ಯ ಕೇಂದ್ರಕ್ಕೆ ಕಟ್ಟಡ ನಿರ್ಮಾಣ ಮಾಡಬೇಕು, ಮಂಗಲ ಗ್ರಾಮದ ಮೂಲಕ ಹಾದು ಹೋಗುವ ಬೆಂಗಳೂರು ಮೈಸೂರು ಇನ್ನಿತರೆ ನಗರ ಪ್ರದೇಶಗಳಿಗೆ ತೆರಳುವ ಸರ್ಕಾರಿ ಬಸ್ ಗಳು ಬಸ್ ನಿಲ್ದಾಣದಲ್ಲಿ ನಿಲ್ಲದೆ ಹೋಗುತ್ತಿದ್ದು ವಿದ್ಯಾರ್ಥಿಗಳು,ರೇಷ್ಮೆ ಮಾರಾಟಗಾರರು ಇನ್ನಿತರರ ಅನುಕೂಲಕ್ಕೆ ಸ್ಟಾಪ್ ನೀಡಬೇಕು.ಎಟಿಎಂ ಕೇಂದ್ರ ತೆರೆಯಬೇಕೆಂದು ಮನವಿ ಮಾಡಿದರು 1976-77 ರಲ್ಲಿ ಸರ್ಕಾರ ಉಳುಮೆ ಮಾಡಲು ಭೂಮಿ ನೀಡಿರುವ ರೈತರಿಗೆ ಆರ್.ಟಿ.ಸಿ ನೀಡಬೇಕು.2000 ಈಚೆಗೆ ಆರ್.ಟಿ.ಸಿ ಬೇರೆಯವರ ಹೆಸರಿಗೆ ಅಕ್ರಮವಾಗಿ ಮಾಡಿಕೊಟ್ಟಿರುವದನ್ನು ರದ್ದು ಪಡಿಸಿ ವ್ಯವಸಾಯ ಹಾಗೂ ಅನುಭವ ಸ್ವಾಧಿನದಲ್ಲಿ ಇರುವವರಿಗೆ ಭೂಮಿ ದೊರೆಯುವಂತೆ ಮಾಡಬೇಕೆಂದು ಒತ್ತಾಯಿಸಿದರು.

ಅಧಿಕಾರಿಗಳ ಮೇಲೆ ತರಾಟೆ ಹಾಗೂ ಪ್ರಶ್ನೆಗೆ ಮಂಜುನಾಥ್ ತಮ್ಮ ದಾಟಿಯಲ್ಲಿಯೇ ಸಾಂತ್ವಾನ: ರೈತ ಮುಖಂಡರುಗಳು,ಆರ್.ಟಿ.ಐ.ಕಾರ್ಯಕರ್ತರು, ಜನಪ್ರತಿನಿಧಿಗಳು ಮುಖಂಡರುಗಳು ಅಧಿಕಾರಿಗಳನ್ನು ತರಾಟೆ ಹಾಗೂ ಪ್ರಶ್ನಿಸಿದ ವೇಳೆ ಶಾಸಕ ಮಂಜುನಾಥ್ ಮಧ್ಯೆ ಪ್ರವೇಶಿಸಿ ಕೆಲವರಿಗೆ ಕೆಲವು ಸಂದರ್ಭದಲ್ಲಿ ಗರಂ ಆಗಿ,ಕೆಲವರಿಗೆ ಆಯ್ತು ಅಣ್ಣ,ಆಯ್ತು ಯಜಮಾನರೇ ಎಂದು ತಮ್ಮ ಚಾಣಕ್ಯತನದಿಂದ ಸಮಾಧಾನ ಮಾಡಿದ ಘಟನೆ ಕಂಡು ಬಂದಿತು.

ತಹಸೀಲ್ದಾರ್ ಕಚೇರಿ ಮಾರಾಟ ಮಾಡಿದರು ಆಶ್ಚರ್ಯ ಪಡಬೇಕಾಗಿಲ್ಲ ಅಪ್ಪಾಜಿ:
ಆರ್.ಟಿ.ಐ.ಕಾರ್ಯಕರ್ತ ಅಪ್ಪಾಜಿ ಮಾತನಾಡಿ, ಕಂದಾಯ ಇಲಾಖೆಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು ಅವರ ಹಿಂದೆ ಹೋದರೆ ಕೆಲಸವಾಗುತ್ತದೆ. ಅಲ್ಲದೇ ಆರ್.ಐ.ವಿ.ಎ.ಗಳು ಖಾತೆ,ವಿವಿಧ ಪಿಂಚಣಿ ಅನುಕೂಲ ಪಡೆಯಲು ಲಂಚ ಪಡೆಯುತ್ತಾರೆ. ತಾಲೋಕಿನ ವಿವಿಧಡೆ ಜಮೀನುಗಳ ಅಕ್ರಮ ವಹಿವಾಟು ಅತಿ ಹೆಚ್ಚಾಗಿ ನಡೆಯುತ್ತಿದೆ ಆಗಾಗಿ ತನಿಖೆಗೆ ಒಳಪಡಿಸಬೇಕು ಚಾಮುಂಡೇಶ್ವರಿ ನ್ಯಾಯಬೆಲೆ ಅಂಗಡಿ ವಿರುದ್ಧ ಆಹಾರ ಇಲಾಖೆಯವರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು.

ಪಟ್ಟಣದ ಪ್ರಕಾಶ್ ಮಾತನಾಡಿ,ಹನೂರು ಪಟ್ಟಣ ಪಂಚಾಯಿತಿಯಲ್ಲಿ ಕೆಲವು ಅನಧಿಕೃತ ನೌಕರರು ಪೌರಕಾರ್ಮಿಕರ ಹೆಸರಲ್ಲಿ 3 ವರ್ಷಗಳಿಂದ ಸುಮಾರು 74 ಲಕ್ಷ ರೂ.ಗಳ ವೇತನ ಪಡೆದಿದ್ದಾರೆ ಈ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

ಇದೇ ರೀತಿ ಪಶು ಇಲಾಖೆ,ವಿದ್ಯುತ್ ಇಲಾಖೆ,ಕೃಷಿ ಇಲಾಖೆ,ತಾ.ಪಂ.ಅರಣ್ಯ ಇನ್ನಿತರೆ ಇಲಾಖೆಗಳಲ್ಲಿನ ಸಮಸ್ಯೆ ಹಾಗೂ ಪರಿಹಾರಕ್ಕೆ ಮನವಿ ಸಲ್ಲಿಸಿದರು.

ಬಳಿಕ ಶಾಸಕ ಎಂ.ಆರ್.ಮಂಜುನಾಥ್ ಮಾತನಾಡಿ, ಜನತಾ ದರ್ಶನ ಕಾರ್ಯಕ್ರಮ ಯಶಸ್ವಿಯಾಗಿದ್ದು 270ಕ್ಕೂ ಹೆಚ್ಚು ಅರ್ಜಿ ಬಂದಿದೆ.ಇದನ್ನು ಅಧಿಕಾರಿಗಳ ಮಟ್ಟದಲ್ಲಿ ಪರಿಹಾರ ಕಂಡುಕೊಳ್ಳಲು ನಾವು ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಈ ಕಾರ್ಯಕ್ರಮ ಉಪಯುಕ್ತವಾಗಿ ಮೆಚ್ಚುಗೆವಾಗಿದೆ. ಕ್ಷೇತ್ರದ ಸಮಸ್ಯೆ ಎಲ್ಲರಿಗೂ ಗೊತ್ತಿದೆ ಮುಖ್ಯವಾಗಿ ರಸ್ತೆ,ಮೂಲಕ ಸೌಕರ್ಯ ಸೇರಿದಂತೆ ಕಂದಾಯ ಇಲಾಖೆ ಜಮೀನು ಸಮಸ್ಯೆ,ವಿವಿಧ ಇಲಾಖೆಯ ಮಾಹಿತಿಯು ಸಹ ನನ್ನ ಗಮನಕ್ಕೆ ಬಂದಿದೆ.
ಪೂರ್ಣ ಪ್ರಮಾಣದಲ್ಲಿ ಬಗೆಹರಿಸಲು ಕಾಲಾವಕಾಶ ಬೇಕಿದೆ ಸಮಗ್ರವಾಗಿ ಅಧಿಕಾರಿಗಳ ಬಳಿ ವರದಿ ತರಿಸಿಕೊಂಡು ನಾವು ಸಹಿತ ಜಿಲ್ಲಾಡಳಿತ ಮಾತಾಡ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಿ
ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಮಹೇಶ್, ಮಲೆ ಮಹದೇಶ್ವರ ವನ್ಯಜೀವಿ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಸಂತೋಷಕುಮಾರ್, ತಹಶೀಲ್ದಾರ್ ಗುರುಪ್ರಸಾದ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು,ಸಾರ್ವಜನಿಕರು ಉಪಸ್ಥಿತರಿದ್ದರು.

ವರದಿ:ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ