ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಹದಲಿ ಗ್ರಾಮದಲ್ಲಿ ಶ್ರೀರಾಮ ದೀಪೋತ್ಸವ ಕಾರ್ಯಕ್ರಮ

ಗದಗ:ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ನಡೆದ ಶ್ರೀರಾಮ ಮಂದಿರ ಉದ್ಘಾಟನಾ ಸಮಾರಂಭ ಮತ್ತು ನೂತನ ಬಾಲ ಶ್ರೀರಾಮ ಮೂರ್ತಿ ಪ್ರಾಣಪ್ರತಿಷ್ಠಾಪನ ಕಾರ್ಯಕ್ರಮದ ಅಂಗವಾಗಿ ಗದಗ ಜಿಲ್ಲೆಯ ನರಗುಂದ ತಾಲೂಕಿನ ಹದಲಿ ಗ್ರಾಮದಲ್ಲಿ ಶ್ರೀರಾಮ ಭಕ್ತರಿಂದ ದೀಪೋತ್ಸವ ಕಾರ್ಯಕ್ರಮ ನೆರವೇರಿತು ಕಾರ್ಯಕ್ರಮದಲ್ಲಿ ಗ್ರಾಮದ ಯುವಕರು, ಹಿರಿಯರು,ಬಾಲಮಕ್ಕಳು ಭಾಗವಹಿಸಿದ್ದರು. ಶ್ರೀರಾಮ ಭಕ್ತಾದಿಗಳೆಲ್ಲರೂ ದೀಪವನ್ನು ಹಿಡಿದುಕೊಂಡು ಗ್ರಾಮದಲ್ಲಿ ರಂಗವಲ್ಲಿ ಹಾಕಿ ಸಿಂಗಾರಗೊಂಡಿದ್ದ ರಾಜಮಾರ್ಗದಲ್ಲಿ ಶೃಂಗಾರಗೊಂಡ ಶ್ರೀರಾಮರ ಭಾವಚಿತ್ರದೊಂದಿಗೆ, ಶ್ರೀರಾಮ,ಲಕ್ಷ್ಮಣ, ಸೀತಾ ಮಾತೆ ಮತ್ತು ಹನುಮಾನನ ವೇಷಭೂಷಣದಿಂದ ತಯಾರಾಗಿದ್ದ ಮಕ್ಕಳು ವಾಹನ ಮೂಲಕವಾಗಿ ಶ್ರೀರಾಮರ ಮತ್ತು ಶ್ರೀ ಹನುಮಾನನ ಘೋಷಣೆಗಳೊಂದಿಗೆ ರಾಜಬೀದಿಗಳಲ್ಲಿ ಸಾಗಿದರು. ಗ್ರಾಮದ ಶ್ರೀ ಹನುಮಾನ ಮಂದಿರದವರೆಗೆ ಶ್ರೀರಾಮರ ಮೆರವಣಿಗೆ ಮುಂದುವರೆದು ಶ್ರೀ ಹನುಮಾನ ಮಂದಿರದಲ್ಲಿ ಮೆರವಣಿಗೆಯನ್ನು ವಿಧಿ ವಿಧಾನಗಳಿಂದ ಕಾರ್ಯಕ್ರಮಕ್ಕೆ ಮಂಗಳಗೊಳಿಸಿದರು.

ವರದಿ-ನಾಗರಾಜ ಪ್ರಚಂಡಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ