ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

“ಅತ್ತೆ-ಸೊಸೆ ತಾಯಿ ಮಗಳಂತೆ ಇರುವ ಮನೆಯೇ ಸ್ವರ್ಗ”

ವಿಜಯಪುರ-ಮಹಿಳೆಯರಿಗೆ ವರದಕ್ಷಿಣೆ ಅತಿಯಾದ ದುಡಿಮೆ ಕಿರುಕುಳ ಮಾನಸಿಕ ಹಿಂಸೆ ಕೌಟುಂಬಿಕ ದೌರ್ಜನ್ಯ ಹೆಚ್ಚಾಗುತ್ತಿದ್ದು ಮನೆಯಲ್ಲಿ ಅತ್ತೆ-ಸೊಸೆ ಪರಸ್ಪರ ಅರ್ಥ ಮಾಡಿಕೊಂಡು ತಾಯಿ-ಮಗಳಂತೆ ಜೀವನ ಸಾಗಿಸಿದರೆ ಆ ಮನೆ ಸ್ವರ್ಗದಂತಾಗುತ್ತದೆ ಎಂದು ನ್ಯಾಯವಾದಿ ದಾನೇಶ ಅವಟಿ ನುಡಿದರು.
ನಗರದ ರೈಲು ನಿಲ್ದಾಣ ಹಿಂದೆ ಭಾರತ ನಗರದ ಅನೌಪಚಾರಿಕ ಶಿಕ್ಷಣ ಸಂಸ್ಥೆಯ ಸ್ಲಂ ಅಭಿವೃದ್ದಿ ಸಮಿತಿ ಮಹಿಳಾ ಒಕ್ಕೂಟದ ಸದಸ್ಯರಿಗೆ ಕಾನೂನು ಅರಿವು ಕಾರ್ಯಕ್ರಮ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಅವರು ಎಲ್ಲಿ ಮಹಿಳೆ ಸಂತೋಷದಿಂದ ಇರುತ್ತಾಳೆ ಆ ಮನೆಯಲ್ಲಿ ದೇವತೆಗಳು ನೆಲೆಸಿರುತ್ತಾರೆ ಎಂಬ ಮಾತು ಹಿಂದಿನ ಕಾಲದಿಂದಲೂ ಜನಜನಿತವಾಗಿದೆ.ಅತಿ ಕಠಿಣ ಕಾನೂನು ಕ್ರಮವಿದ್ದರೂ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಹೆಚ್ಚಾಗುತ್ತಿದ್ದು ಜನತೆಗೆ ಕಾನೂನಿನ ಭಯ ಇಲ್ಲವಾಗಿದೆ.ನಿತ್ಯ ಮಹಿಳೆಯರ ಹಕ್ಕುಗಳ ಉಲ್ಲಂಘನೆ ಎಲ್ಲೆಂದರಲ್ಲಿ ನಡೆದಿದೆ.ಕಾರಣ ಮಹಿಳೆಯರು ಸಂಘಟಿತರಾಗಿ ಕಾನೂನುಗಳನ್ನು ಅರಿತುಕೊಂಡು ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಉದ್ದಿಮೆದಾರ ಪಂಡಿತ ಖಂಡಾರೆ ಮಹಿಳೆಯರು ತಾವು ಅಬಲರು ಶಕ್ತಿಹೀನರು ಎಂಬ ಕೀಳರಿಮೆ ಬಿಟ್ಟು ಹೊರ ಬಂದು.ತಮ್ಮ ಹಕ್ಕುಗಳನ್ನು ಅರಿತುಕೊಳ್ಳಬೇಕು.ಶಿಕ್ಷಣ ವಂತರಾಗಬೇಕು. ಅವರ ಹಕ್ಕುಗಳ ಉಲ್ಲಂಘನೆ ಒಂದೇ ಕಡೆ ಒಂದೇ ರೀತಿ ಆಗುತ್ತದೆ ಎಂದು ಭಾವಿಸಲಾಗದು ಅವರಿಗೆ ಗರ್ಭದಲ್ಲಿ ಇರುವಾಗಿನಿಂದ ಗೋರಿಗೆ ಹೋಗುವವರೆಗೆ ನಡದೆ ಇರುತ್ತದೆ ಮನೆ ಒಳಗೆ ಹೊರಗೆ ಕೆಲಸದ ಸ್ಥಳದಲ್ಲಿ ಹೀಗೆ ಎಲ್ಲೆಂದರಲ್ಲಿ ಹಲವು ಹತ್ತು ರೀತಿ ನಡೆಯುತ್ತಿದೆ ಕಾರಣ ಮಹಿಳೆಯರು ಶಿಕ್ಷಣ ಸಂಘಟನೆ ಹೋರಾಟಕ್ಕೆ ಸಿದ್ಧರಿರಬೇಕು ಎಂದರು.
ಕಾರ್ಯಕ್ರಮದಲ್ಲಿ ಖತಿಜಾ ಹೆಬ್ಬಾಳ,ಫಾತೀಮಾ ಶೇಖ ಮುಂತಾದವರಿದ್ದರು.
ರಾಮಕೃಷ್ಣ ಘೋಡಕೆ ಪ್ರಾರ್ಥಿಸಿದರು ನಂದಿನಿ ಆಲಮೇಲಕರ ಸಂವಿಧಾನದ ಪೂರ್ವ ಪೀಠಿಕೆಯ ಪ್ರತಿಜ್ಞಾ ವಿಧಿ ಬೋಧಿಸಿದರು.
ಸಿ ಎನ್ ಎಫ್ ಈ ಸಂಸ್ಥೆಯ ಕಾಮಿನಿ ಕಸಬೇ ಕಾರ್ಯಕ್ರಮ ಆಯೋಜಿಸಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಮೀನಾಕ್ಷಿ ಕಾಲೆಭಾಗ ನಿರೂಪಿಸಿದರು,ಆರ್ಯನ್ ಆಲಮೆಲಕರ ವಂದಿಸಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ