ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ದೇವಸ್ಥಾನದ ಹಣ ಕೊಳ್ಳೆ ಹೊಡೆದವರ‌ ವಿರುದ್ಧ ಗ್ರಾಮಸ್ಥರಿಂದ ದಂಡಾಧಿಕಾರಿಗಳಿಗೆ ಮನವಿ

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ವ್ಯಾಪ್ತಿಯ ಯಕ್ತಾಪೂರ ಗ್ರಾಮದ ಶ್ರೀ ಗುತ್ತಿ ಬಸವೇಶ್ವರ ದೇವಸ್ಥಾನವು ಮುಜರಾಯಿ ಇಲಾಖೆಗೆ ಸಂಬಂಧಪಟ್ಟಿರುತ್ತದೆ ಆದರೂ‌ ದೇವಸ್ಥಾನದ ಗರ್ಭಗುಡಿಯ ಸುತ್ತ ಮುತ್ತಲಿನ ಹಳೇ ಕಟ್ಟದ ಮೇಲ್ಚಾವಣಿಯು ಶಿಥಿಲಾವಸ್ಥೆಯಲ್ಲಿದೆ.
ಸ್ಥಾನಿಕ ಸ್ಥಳ ತನಿಖೆ ಕೈಗೊಂಡು ಸರದಿ ಮೇಲ್ಚಾವಣಿಯನ್ನು ತೆರವುಗೊಳಿಸಲು ಸ್ಪಷ್ಟವಾದ ವರದಿ ಸಲ್ಲಿಸಲು ಕೋರಲಾಗಿದೆ ಎಂದು ತಾಲೂಕ ದಂಡಾಧಿಕಾರಿಗಳಿಗೆ ಮನವಿ ನೀಡಿದ್ದಾರೆ ಎಂದು ಯಕ್ತಾಪೂರದ ಮುಖಂಡರ ಹೇಳಿಕೆಯಾಗಿದೆ
ಆದರೆ ಕೆಲವು ಪ್ರಭಾವಿ ಮುಖಂಡರು ಮಾನ್ಯ ತಾಲೂಕ ದಂಡಾಧಿಕಾರಿಗಳ ದಾರಿ ತಪ್ಪಿಸಿ ಕಾನೂನು ವಿರುದ್ಧವಾಗಿ ದೇಣಿಗೆ ರಶೀದಿಗಳನ್ನು ಮಾನ್ಯ ದಂಡಾಧಿಕಾರಿಗಳಿಗೆ ಗೊತ್ತಿರದ ಹಾಗೆ ಸೃಷ್ಟಿ ಮಾಡಿಕೊಂಡು ಕೆಲವು ದೇಣಿಗೆ ರಸೀದಿ ಮುಖಾಂತರ ಹಣವನ್ನು ಕೊಳ್ಳೆ ಹೊಡೆದಿದ್ದಾರೆಂದು ಮಾನ್ಯ ತಹಸಿಲ್ದಾರರಿಗೆ ದೂರು ಸಲ್ಲಿಕೆಯಾಗಿದೆ.
ಕಾನೂನು ವಿರುದ್ಧವಾಗಿ ದೇಣಿಗೆ ಎತ್ತಿರುವ ಮುಖಂಡರ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಿರುವುದು ಯಾವ ನ್ಯಾಯ ಮತ್ತೆ ಕಾನೂನು ರೀತಿಯಲ್ಲಿ ಅವರಿಗೆ ಶಿಕ್ಷೆ ಆಗಬೇಕು ಮತ್ತು ಅವರು ಕೊಳ್ಳೆ ಹೊಡೆದ ಹಣವನ್ನು ಮಾನ್ಯ ದಂಡಾಧಿಕಾರಿಗಳಿಗೆ ಮರುಪಾವತಿಸಿ ಅವರಿಗೆ ಶಿಕ್ಷೆ ವಿಧಿಸಬೇಕೆಂದು ಊರಿನ ಮುಖಂಡರಾದ ನಿಂಗಪ್ಪ, ಪರಶುರಾಮ ಇವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವರದಿ ರಾಜಶೇಖರ ಮಾಲಿ ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ