ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಆಪತ್ಪಾಂಧವನಾಗಿ ಬಂದ ಅಖಿಲ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಯುವ ಘಟಕ ಅಧ್ಯಕ್ಷ ಅನ್ವರ್ ಪತ್ತೆಸಾಬ್ ಅವಟಿ

ವಿಜಯಪುರ ಜಿಲ್ಲೆಯ ತಾಳಿಕೋಟಿ ಪಟ್ಟಣದ ತಹಶೀಲ್ದಾರ್ ಕಚೇರಿಯ ಆವರಣದಲ್ಲಿ ವಿಶೇಷ ಚೇತನ ಮಹಿಳೆಯರಿಗೆ ಬರುವ ಪಿಂಚಣಿ ಹಣ ಜಮೆ ಆಗಿಲ್ಲವೆಂದು ಸಮಸ್ಯೆಯನ್ನು ತೆಗೆದುಕೊಂಡು ಬಂದಾಗ ತಹಸೀಲ್ದಾರ್ ಕಚೇರಿಯಲ್ಲಿ ಸಿಬ್ಬಂದಿ ವರ್ಗವು ಊಟಕ್ಕೆ ಹೋದವರು ಮೂರುವರೆ ನಾಲ್ಕು ಗಂಟೆ ಸಮಯ ಆದರೂ ಬಂದಿರುವುದಿಲ್ಲ ಅಲ್ಲಿರುವ ಕೆಲವು ಸಿಬ್ಬಂದಿಗಳಿಗೆ ಆ ತಾಯಂದಿರು ವಿಚಾರಣೆ ಮಾಡಿದಾಗ ಅನಕ್ಷರಸ್ಥರು ಆದಕಾರಣ ಅವರಿಗೆ ಸರಿಯಾಗಿ ಮಾಹಿತಿಯನ್ನು ತಿಳಿಸದೆ ಅವರಿಗೆ ಬೆದರಿಸಿ ಮಾತನಾಡಿದ್ದಾರೆ.
ಸರಿಸುಮಾರು ಎರಡರಿಂದ ಮೂರು ಗಂಟೆಗಳ ಕಾಲ ಉರಿಯುವ ಬಿಸಿಲಿನಲ್ಲಿ ಕುಳಿತು ಕಾಯುತ್ತಾ ಇದ್ದರೂ ಈ ಸಂದರ್ಭದಲ್ಲಿ ಸ್ಥಳಕ್ಕೆ ಧಾವಿಸಿ ಬಂದ ಅಖಿಲ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘದ ಜಿಲ್ಲಾ ಯುವ ಘಟಕ ಅಧ್ಯಕ್ಷರು ಅನ್ವರ್ ಪತ್ತೆಸಾಬ್ ಅವಟಿ ಇವರು ಬಂದು ಆ ತಾಯಂದಿರ ಸಮಸ್ಯೆಯನ್ನು ಕೇಳಿ ತಕ್ಷಣ ತಹಶಿಲ್ದಾರ ಅವರ ಗಮನಕ್ಕೆ ತಂದು ಅವರಿಗೆ ಕೆಲಸವನ್ನು ಮಾಡಿಕೊಡಲಾಯಿತು.ಈ ಸಂದರ್ಭದಲ್ಲಿ ಮಾನ್ಯ ತಹಶೀಲ್ದಾರ ಶ್ರೀಮತಿ ಕೀರ್ತಿ ಚಾಲಕ ಅವರು ನಮ್ಮ ಸಮಸ್ಯೆಯನ್ನು ಕೇಳಿದ ನಂತರ ತಕ್ಷಣ ಸಿಬ್ಬಂದಿಗಳಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡು ಬಂದಂತಹ ತಾಯಂದಿರ ಕೆಲಸವನ್ನು ಮಾಡಿ ಕೊಡುವಂತೆ ಆದೇಶ ನೀಡಿದರು.ಅದೇ ರೀತಿ ನಮ್ಮ ಸಮಸ್ಯೆಗೆ ಸ್ಪಂದಿಸಿ ಮತ್ತೊಮ್ಮೆ ಈ ರೀತಿ ಆಗದಂತೆ ನಾವು ಎಚ್ಚರಿಕೆ ವಹಿಸುತ್ತೇವೆ ಎಂದು ಭರವಸೆ ನೀಡಿ ನಮ್ಮ ಕೆಲಸವನ್ನು ಮಾಡಿಸಿ ಕಳಿಸಿದರು ಎಂದು ಕರುನಾಡ ಕಂದ ವರದಿಗಾರರಿಗೆ ತಿಳಿಸಿದರು.
ಈ ಕೆಲಸವನ್ನು ಅಖಿಲ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಯುವ ಘಟಕ ಅಧ್ಯಕ್ಷರು ಅನ್ವರ್ ಪತ್ತೆಸಾಬ್ ಅವಟಿ ಇವರು ಸ್ವತಃ ಮುಂದೆ ನಿಂತು ಮಾಡಿಸಿಕೊಟ್ಟಿದ್ದಕ್ಕೆ ತಾಯಂದಿರು ಗೌರವ ನೀಡಿ ಧನ್ಯವಾದಗಳನ್ನು ತಿಳಿಸಿದರು.

ವರದಿ-ಉಸ್ಮಾನ ಬಾಗವಾನ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ