ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕಳಪೆ ಕಾಮಗಾರಿ-ಸಾರ್ವಜನಿಕರ ಆಕ್ರೋಶ

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕು ಕೋಗಳಿ ಗ್ರಾಮದಲ್ಲಿ ಸಮುದಾಯ ಭವನ ಕಳಪೆ ಕಾಮಗಾರಿ ವಿರುದ್ಧ ಸಾರ್ವಜನಿಕರು ಆಕ್ರೋಶ
ವ್ಯಕ್ತವಾಗಿದೆ.
ಕನ್ನಡದ ಪ್ರಪ್ರಥಮ ಗದ್ಯ ಕವಿ ಶಿವಕೋಟ್ಯಾಚಾರ್ಯರ ನೆನಪಿಗೋಸ್ಕರ ಸುವರ್ಣ ಗ್ರಾಮದ ಯೋಜನೆಯಲ್ಲಿ ಕೋಟಿ ಕೋಟಿ ಅನುದಾನ ಬಂದಿತ್ತು ಅದರಲ್ಲಿ ಈ ಸಮುದಾಯ ಭವನವನ್ನು ನಿರ್ಮಾಣವಾಗಿತ್ತು ಆದರೆ ಈ ಹತ್ತು ವರ್ಷದಲ್ಲಿ ಈ ಭವನವು ತುಂಬಾ ದುರಸ್ತಿತಿಗೊಂಡಿದೆ ಇದಕ್ಕೆ ಯಾವ ಒಂದು ಅಧಿಕಾರಿಯೂ ತಿರುಗಿ ನೋಡಿದ್ದಿಲ್ಲ ಆದರೆ ಈಗ ಅನೇಕ ಬಾರಿ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸುವುದರ ಮೂಲಕ ಈಗ ಇದರ ದುರಸ್ಥಿತಿ ಮತ್ತು ಬಣ್ಣ ಹಚ್ಚಲು 1,99,000 ವೆಚ್ಚದಲ್ಲಿ ಕಾಮಗಾರಿ ಪ್ರಾರಂಭವಾಗಿದೆ ಆದರೆ ಇಲ್ಲಿ ಕೇವಲ ಬಣ್ಣ ಹಚ್ಚುವ ಕೆಲಸ ಮಾಡುತ್ತಾರೆ ಇಲ್ಲಿನ ಕಿಟಕಿ ಬಾಗಿಲು ಮತ್ತು ಸೀಳು ಬಿಟ್ಟಿರುವ ಗೋಡೆ ಒಡೆದು ಹೋಗಿರುವ ಕಡಪ ಆಗುವ ವಿದ್ಯುತ್ ವ್ಯವಸ್ಥೆ ಅಸ್ತವ್ಯಸ್ತವಾಗಿದೆ ಇದ್ಯಾವುದೂ ಮಾಡದೆ ಕೇವಲ ಬಣ್ಣವನ್ನು ಹಚ್ಚಿ ಬಿಲ್ಲು ಪಡೆದು ಹೊಂಟಿದ್ದಾರೆ ಇಲ್ಲಿನ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಇದರ ಬಗ್ಗೆ ಗಮನ ಹರಿಸಿ ಸಾರ್ವಜನಿಕರ ಹಣ ದುರುಪಯೋಗ ಆಗದಂತೆ ನೋಡಿಕೊಳ್ಳಬೇಕು ಇಲ್ಲಿ ಶಿವಕೋಟ್ಯಾಚಾರ್ಯರ ಸವಿನೆನಪಿಗಾಗಿ ಸಾಮೂಹಿಕ ಮದುವೆ ಇತರೆ ಯಾವುದೇ ಮದುವೆ ಕಾರ್ಯಕ್ರಮ ಆದರೆ ಇಲ್ಲೇ ನಡೆಸುತ್ತೇವೆ ಆದ ಕಾರಣ ಶ್ರೀ ಶಿವಕೋಟ್ಯಾಚಾರ್ಯರ ಸಭಾಭವನಕ್ಕೆ ಸುತ್ತ ಮುತ್ತಲು ದನಗಳು ಕಟ್ಟುವುದು ಕಟ್ಟಿಗೆ ಹಾಕುವುದು ಹಾಗೂ ಇಲ್ಲಿನ ನೀರಿನ ತೊಟ್ಟಿ ಇದ್ದು ಅದರ ಮುಚ್ಚಳ ದುರಸ್ಥಿಯಲ್ಲಿದೆ ಇಂತಹ ಸಮಸ್ಯೆಗಳು ತುಂಬಾನೇ ಇವೆ ಆದ ಕಾರಣ ಇಲ್ಲಿನ ಅಧಿಕಾರಿಗಳು ಎಚ್ಚರವಹಿಸಿ ಕಾಮಗಾರಿ ಮಾಡಿಕೊಳ್ಳಬೇಕೆಂದು ಸಮುದಾಯ ಭವನದ ಕಾಮಗಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
15ನೇ ಹಣಕಾಸಿನಲ್ಲಿ 1,99,000 ವೆಚ್ಚದ ಕಾಮಗಾರಿಯನ್ನು ಕೇವಲ ಕಳಪೆ ಬಣ್ಣ ಹಚ್ಚಿ ಬಿಲ್ಲು ಬಿಡಿಸಲು ಹೊರಟಿದ್ದಾರೆ ಈ ಕಾಮಗಾರಿ ಬಗ್ಗೆ ಪ್ರಶ್ನೆ ಮಾಡಿದರೆ ಗುತ್ತಿಗೆದಾರರು ಹಾಗೂ ಅವರ ಬೆಂಬಲಿಗರು ನಮ್ಮ ಮೇಲೆ ದೌರ್ಜನ್ಯ ಮಾಡುತ್ತಾರೆ ಹಾಗೂ ಇಲ್ಲಿ ತುಂಬಾ ಕಳಪೆ ಕಾಮಗಾರಿಯಾಗಿದೆ ಬಣ್ಣದ ಕ್ವಾಲಿಟಿ ಕಮ್ಮಿ ಇದೆ ಇಲ್ಲಿರುವ ಎಂದು ಆರ್ ಟಿಐ ಕಾರ್ಯಕರ್ತರಾದ ಬಸವರಾಜ್ ಕೋಗಳಿ ಹೇಳಿದರು.
ಈ ಸಂದರ್ಭದಲ್ಲಿ ಎನ್ ವಿಶ್ವನಾಥ್ ಗೌಡ,ಎಂ ಮಹೇಶಪ್ಪ,ರವಿ ವಿ,ಎಮ್ ಚನ್ನಬಸಪ್ಪ,ಜಿ ಸಂಗನಗೌಡ,ಪಂಪಣ್ಣ,ಮರಳು ಸಿದ್ದಯ್ಯ, ಅಶೋಕಯ್ಯ ಮತ್ತಿತರರು ಊರಿನ ಮುಖಂಡರು ಸಾರ್ವಜನಿಕರು ಇದ್ದರು.

ವರದಿ:ಮಹೇಶ್ ಕುಮಾರ್ ಕೊಟ್ಟೂರೂ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ