ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮತದಾರನಾಗಿ ನನಗೆ ನೂರು ಪ್ರಶ್ನೆಗಳು ಹುಟ್ಟಿಕೊಂಡಿವೆ..?

ಮತದಾನದ ಹಕ್ಕು ಕೊಟ್ಟ ಅಂಬೇಡ್ಕರ್ ಅವರಿಗೆ ಮತ ಹಾಕಲೇ.

ಮತದಾನದ ಹಕ್ಕು ಕೊಟ್ಟ ಅಂಬೇಡ್ಕರ್ ಅವರ ಸಂವಿಧಾನಕ್ಕೆ ಮತ ಹಾಕಲೇ.

ನಿಮ್ಮ ಜೀವನವನ್ನು ನೀವು ಬದಲಾಯಿಸಿಕೊಳ್ಳಿ ನಿಮಗೆ ಅಧಿಕಾರ ಕೊಟ್ಟಿದೀನಿ ಎಂದು ಮತದಾನದ ಹಕ್ಕು ಕೊಟ್ಟ ಅಂಬೇಡ್ಕರ್ ರವರ ಮಾತಿಗೆ ಮತ ಹಾಕಲೇ.

ನನ್ನ ಜೀವನವನ್ನು ಬದಲಾಯಿಸಿಕೊಳ್ಳಲು ಮತ ಹಾಕಲೇ.

ನಾನು ಭಾರತ ದೇಶದ ಪ್ರಜೆಯೆಂದು ಗುರುತಿಸಿಕೊಳ್ಳುವುದಕ್ಕೆ ಮತ ಹಾಕಲೇ.

ಹಣ ನೀಡುವವರ ಮನಸ್ಥಿತಿಗೆ ಮತ ಹಾಕಲೇ.

ದೇಶದ ಅಭಿವೃದ್ಧಿಗಾಗಿ ಮತ ಹಾಕಲೇ.

ರಾಜ್ಯದ ಅಭಿವೃದ್ಧಿಗಾಗಿ ಮತ ಹಾಕಲೇ.

ಬಡ ಜನರಿಗೆ ಸಿಗದಿರುವ ಸೌಲಭ್ಯಕ್ಕಾಗಿ ಮತ ಹಾಕಲೇ.

ಜಾತಿ ಧರ್ಮಗಳನ್ನು ಹೊಡೆಯುತ್ತಿರುವ ರಾಜಕೀಯ ಪಕ್ಷಗಳಿಗಾಗಿ ಮತ ಹಾಕಲೇ.

ಅಭಿವೃದ್ಧಿಯನ್ನು ಕಾಣದೆ ಇರುವ ಹಳ್ಳಿಗಳಿಗಾಗಿ ಮತ ಹಾಕಲೇ.

ಮತಗಳನ್ನು ಮಾರಿಕೊಂಡು ದಾರಿ ತಪ್ಪಾಗಿ ತೋರಿಸಿ ಕೊಡುತ್ತಿರುವ ಸಂಘಟನೆಗಳಿಗಾಗಿ ಮತ ಹಾಕಲೇ.

ಅಂಬೇಡ್ಕರ್ ಅವರು ಕೊಟ್ಟಂತ ಮತದಾನದ ಹಕ್ಕನ್ನ ಪಡೆಯುವ ವ್ಯಕ್ತಿ ಅಂಬೇಡ್ಕರ್ ಅವರ ಚಿಂತನೆ ಇಲ್ಲದವರು ಎಂದು ಮತ ಹಾಕಲೇ.

ಇನ್ನೂ ಹಲವಾರು ಪ್ರಶ್ನೆಗಳು ಮನಸ್ಸಿನಲ್ಲಿ ಉಳಿದಿವೆ ಅದಕ್ಕಾಗಿ ಮತ ಹಾಕಲೇ.

ನಿಮ್ಮ ನಿಶ್ಕಲ್ಮಶವಾದ ಮನಸ್ಸಿನಲ್ಲಿ ನಿಮ್ಮದೇ ಆದ ಪ್ರಶ್ನೆಗಳಿಗೆ ಉತ್ತರ ಹುಡುಕಿಕೊಳ್ಳಿ ಆ ದಿನವಾದರೂ ನಿಮಗೆ ಮತದಾನದ ಹಕ್ಕು ತಿಳಿಯಲಿ ಮುಂದೆ ಒಂದು ದಿನ ಮತದಾನದ ಹಕ್ಕನ್ನು ಕಳೆದುಕೊಂಡರೆ ನಿಮ್ಮ ಜೀವನ ಮತ್ತೊಮ್ಮೆ ಗುಲಾಮಗಿರಿಯ ಕಡೆ ತಿರುಗಿ ನಿಲ್ಲುತ್ತದೆ.

ನಿಮ್ಮದೇ ಮತದಾನ ಉತ್ತಮ ಸಮಾಜಕ್ಕಾಗಿ ಮತದಾನ ಮಾಡಿ.

-ಸುಧೀಂದ್ರ ಡಿ ಅರಕಲಗೂಡು

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ