ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಭಟಪನಹಳ್ಳಿ ಶ್ರೀ ಭೀಮಾಂಬಿಕಾದೇವಿ ಜಾತ್ರೆಯಲ್ಲಿ ನಾಟಕ ಪ್ರದರ್ಶನ

ಕೊಪ್ಪಳ:ಜಿಲ್ಲೆಯ ಕುಕನೂರ ತಾಲೂಕ ಭಟಪನಹಳ್ಳಿ ಗ್ರಾಮದಲ್ಲಿ ಶ್ರೀ ಭೀಮಾಂಬಿಕಾದೇವಿಯ ಮಠದಲ್ಲಿ 27ನೇ ವರ್ಷದ ಶ್ರೀ ಮಹಾಶಿವಶರಣೆ ಶ್ರೀ ಭೀಮಾಂಬಿಕಾದೇವಿಯ ಜಾತ್ರಾ ಮಹೋತ್ಸವ ಮತ್ತು ಪುರಾಣ ಮಹಾಮಂಗಲೋತ್ಸವ ಹಾಗೂ ೨೧ ಜೋಡಿ ಸಾಮೂಹಿಕ ವಿವಾಹಗಳ ಕಾರ್ಯಕ್ರಮದ ಅಂಗವಾಗಿ ಶ್ರೀ ಭೀಮಾಂಬಿಕಾ ನವ ತರುಣ ನಾಟ್ಯ ಸಂಘ ಭಟಪನಹಳ್ಳಿ ಇವರಿಂದ ರೈತರ ರಾಜ್ಯದಲ್ಲಿ ರಾಯಣ್ಣ ಸುಂದರ ಸಾಮಾಜಿಕ ನಾಟಕ ಜರುಗಿತು.ಸಮಾಜದ ಅಂಕು ಡೊಂಕುಗಳನ್ನು ತಿದ್ದುವಲ್ಲಿ ನಾಟಕಗಳು ಪ್ರಮುಖ ಪಾತ್ರವಹಿಸಿವೆ,ಕಲಾವಿದರು ತಮ್ಮ ಕಲೆಯನ್ನು ಪ್ರತಿ ವರ್ಷ ಅಭಿನಯ ಮಾಡಿ ಜನತೆಗೆ ಮನರಂಜನೆ ನೀಡುತ್ತಾರೆ ಇಂತಹ ಕಲೆ ಉಳಿವಿಗಾಗಿ ಕಲಾ ರಂಗಕ್ಕೆ ನಮ್ಮೇಲ್ಲರ ಪ್ರೋತ್ಸಾಹ,ಸಹಕಾರ ಅಗತ್ಯವಾದದು ಎಂದು ಹಾಲುಮತ ಸಮಾಜದ ಮುಖಂಡ ಕಳಕಪ್ಪ ಕಂಬಳಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಅಧ್ಯಕ್ಷತೆಯನ್ನು ಗಗನ ನೋಟಗಾರ ವಹಿಸಿದ್ದರು.ಶಿವಾನಂದಯ್ಯ ಹಿರೇಮಠ ಸಾನಿದ್ಯವಹಿಸಿದ್ದರು.ಈ ವೇಳೆ ಮುಖಂಡರಾದ ಮಹೇಶ ದೊಡ್ಡಮನಿ,ಮಲ್ಲಪ್ಪ ಗುಡಿಹಿಂದಲ್,ಶರಣಪ್ಪ ಹಾದಿಮನಿ,ಹಂಚಾಳಪ್ಪ ಕಲ್ಲಗೋಡಿ,ಪರಸಪ್ಪ ಹೊಸಮನಿ,ಗವಿಸಿದ್ದಪ್ಪ ಭಾವಿಕಟ್ಟಿ,ಯಲ್ಲಪ್ಪ ದೇವರಳ್ಳಿ,ಕೆಂಚಪ್ಪ ಹರಿಜನ,
ರಮೇಶ ಪೋತುಂಡಿ ಸೇರಿದಂತೆ ಗ್ರಾಮದ ಗುರುಹಿರಿಯರು ಭಾಗವಹಿಸಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ