ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸುಗೂರ ಎನ್ ಗ್ರಾಮಕ್ಕೆ ಸಡಗರ ಸಂಭ್ರಮದಿಂದ ನೂತನ ಬಸ್ ಗೆ ಸ್ವಾಗತಿಸಿದ ಗ್ರಾಮಸ್ಥರು

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸುಗೂರ ಎನ್ ಗ್ರಾಮಕ್ಕೆ ಯಾದಗಿರಿ ಜಿಲ್ಲೆಯ ಕೆ.ಎಸ್.ಆರ್.ಟಿ.ಸಿ,ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಯಾದಗಿರ ಜಿಲ್ಲಾ ಘಟಕದಿಂದ ನಿತ್ಯ ಬಸ್ ಸಂಚಾರ ಆರಂಭಗೊಂಡಿದೆ.
ಬಹು ದಿನಗಳ ಬೇಡಿಕೆ ಈಗ ಈಡೇರಿದೆ ಈ ಗ್ರಾಮದಿಂದ ಅನೇಕ ವಿಧ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಅನುಕೂಲಕರವಾಗಿದೆ. ಪ್ರತಿನಿತ್ಯ ಯಾದಗಿರಿಯಿಂದ ಸಂಜೆ 7 ಗಂಟೆಗೆ ಹೊರಡುವ ಬಸ್ ಅಲ್ಲಿಪೂರ,ಯರಗೋಳ, ನಾಲವಾರ ಮಾರ್ಗವಾಗಿ ಸುಗೂರ ಎನ್ ಗ್ರಾಮಕ್ಕೆ ಸಂಜೆ 8:15 ನಿಮಿಷಕ್ಕೆ ಸುಗೂರ ಎನ್ ಗ್ರಾಮಕ್ಕೆ ತಲುಪುತ್ತದೆ.ಮರುದಿನ ಬೆಳಿಗ್ಗೆ 6 ಗಂಟೆಗೆ ಹೊರಡುವ ಬಸ್ ಶಾಂಪೂರಹಳ್ಳಿ,ತರಕಸಪೇಟ್,ಕೊಲ್ಲೂರು ಮಾರ್ಗವಾಗಿ ಸುಗೂರ ಎನ್ ಗ್ರಾಮಕ್ಕೆ ಬೆಳಿಗ್ಗೆ 6 ಗಂಟೆಗೆ ತಲುಪಿ ಸುಗೂರ ಎನ್ ಗ್ರಾಮದ ಮಾರ್ಗವಾಗಿ ನಾಲವಾರ ಮತ್ತು ಯರಗೋಳ ಅಲ್ಲಿಪೂರ ಮಾರ್ಗವಾಗಿ ಬೆಳಿಗ್ಗೆ 7 ಗಂಟೆಗೆ ಯಾದಗಿರಿ ತಲುಪುತ್ತದೆ ಈ ಬಸ್ ಸಂಚಾರದ ಸದುಪಯೋಗವನ್ನು ಊರಿನ ಗ್ರಾಮಸ್ಥರು , ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಘಟಕ ವ್ಯವಸ್ಥಾಪಕರು ತಿಳಿಸಿದ್ದಾರೆ.
ಅಭಿನಂದನೆಗಳು,ಯಾದಗಿರಿ ಬಸ್ ಘಟಕದಿಂದ ಸುಗೂರ ಎನ್ ಗ್ರಾಮಕ್ಕೆ ವಸತಿ ಬಸ್ ಕಲ್ಪಿಸಲು ಶ್ರಮಿಸಿದ ಯಾದಗಿರಿ ಶಾಸಕರಾದ ಶ್ರೀ ಸನ್ಮಾನ್ಯ ಚನ್ನಾರೆಡ್ಡಿಗೌಡ ಪಾಟೀಲ ತುನ್ನೂರ ಅವರು ಹಾಗೂ ಪರ್ತರೆಡ್ಡಿಗೌಡ,ಸಂಗಾರೆಡ್ಡಿ ಮಾಲಿ ಪಾಟೀಲ,ಬಸ್ಸುಗೌಡ ಮಾರಡಗಿ,ವಿಶ್ವನಾಥ ರೆಡ್ಡಿ ಪಾಟೀಲ ವಂಡ್ನಳ್ಳಿ,ಬಸವರಾಜ ಹಡಪದ ಸುಗೂರ ಎನ್,ಸುಖದೇವ್ ಚವ್ಹಾಣ,ಶ್ರೀಮಂತ ಭಾವಿ ಹಾಗೂ ಸಂಗಣ್ಣ ಸಾಹು ಮಡ್ನಾಳ,ಶರಣಪ್ಪ ಸಾಹು ಕುಂಬಾರ,ಶಿವುಗೌಡ ಕೊಳ್ಳಿ,ವಿಶ್ವಜೀತ್ ಪಾಟೀಲ್ , ಹಣಮಂತ ನಾಯ್ಕೊಡಿ,ಬಾಷುಮೀಯಾ ಬಂಟ್ನಳ್ಳಿ, ಅಯ್ಯಪ್ಪ ಪೂಜಾರಿ ವಿಜಾಪುರ,ಮರೆಪ್ಪ ಬಡಿಗೇರ, ಮರೆಪ್ಪಾ ನಾಯ್ಕೊಡಿ ಹಾಗೂ ನಬಿಲಾಲ್,ಮಲ್ಲಪ್ಪ ಪೂಜಾರಿ,ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್,ಸ್ವಾಮಿ ಭಾವಿ,ಸಿದ್ದಪ್ಪ ಭಾವಿ ಹಾಗೂ ರಾಜಕುಮಾರ ಚವ್ಹಾಣ ಸೇರಿದಂತೆ ಅನೇಕ ಸುಗೂರ ಎನ್ ಗ್ರಾಮಸ್ಥರು ಈ ಸಂಧರ್ಭದಲ್ಲಿ ಹರ್ಷದಿಂದ ಬಸ್ ಸುಗೂರ ಎನ್ ಗ್ರಾಮದಲ್ಲಿ ಯಾದಗಿರಿ ಡಿಪೋ ದ್ (ಕಲ್ಯಾಣ ಕರ್ನಾಟಕ ಸಾರಿಗೆ) ಅಡಿಯಲ್ಲಿ ಯಾದಗಿರಿ ವಾಯ-ಶಾಂಪೂರಹಳ್ಳಿ ಬಸ್ ನ್ನು ಸುಗೂರ ಎನ್ ಗ್ರಾಮದಲ್ಲಿ ಸ್ವಾಗತ ಮಾಡಿಕೊಂಡು ಡೈವರ್ ಮತ್ತು ಕಂಡಕ್ಟರ್ ಅವರಿಗೆ ಗ್ರಾಮದ ವತಿಯಿಂದ ಸನ್ಮಾನ ಸತ್ಕಾರ ಮಾಡಿ ಬಸ್ ಗೆ ಚಾಲನೆ ನೀಡಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ