ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಖಾಯಂ ಇಂಜಿನಿಯರ್ ಇಲ್ಲದ ಮುಂಡಗೋಡ ಪಟ್ಟಣ ಪಂಚಾಯ್ತಿ

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಪಟ್ಟಣ ಪಂಚಾಯ್ತಿ ಒಟ್ಟಾರೆ 19 ವಾರ್ಡಗಳನ್ನು ಹೊಂದಿರುವ ಪಟ್ಟಣ ಪಂಚಾಯ್ತಿಯಾಗಿದೆ.ಮುಂಡಗೋಡ ನಗರದಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ ಇದೆ.ಪಟ್ಟಣ ಪಂಚಾಯ್ತಿ ಮುಂಡಗೋಡದಲ್ಲಿ ಅಭಿವೃದ್ದಿ ಕೆಲಸ ಮತ್ತು ವಿವಿಧ ರೀತಿಯ ಕಾಮಗಾರಿಗಳನ್ನು ಕಿರಿಯ ಎಂಜಿನಿಯರ್ ಅವರೇ ನೋಡಿಕೊಳ್ಳಬೇಕಾಗುತ್ತದೆ,ಆದರೆ ಮುಂಡಗೋಡ ಪಟ್ಟಣ ಪಂಚಾಯ್ತಿಯಲ್ಲಿದ್ದ ಕಿರಿಯ ಎಂಜಿನಿಯರ್ ಬೇರೆಡೆ ವರ್ಗಾವಣೆ ಆದ ಕಾರಣ ಯಲ್ಲಾಪುರ ಪಟ್ಟಣ ಪಂಚಾಯ್ತಿಯ ಕಿರಿಯ ಎಂಜಿನಿಯರ್ ಅವರು ಪ್ರಭಾರಿಯಾಗಿ ವಾರಕ್ಕೆ 2 ದಿನ ಮಾತ್ರ ಮುಂಡಗೋಡದಲ್ಲಿ ಲಭ್ಯರಿರುತ್ತಾರೆ, ಇದರಿಂದ ಮುಂಡಗೋಡದ ವಿವಿಧ ವಾರ್ಡ್ ಗಳಲ್ಲಿ ಅಭಿವೃದ್ದಿ ಕೆಲಸಗಳು ಸರಿಯಾಗಿ ಕಾಲ ಕಾಲಕ್ಕೆ ಆಗುತ್ತಿಲ್ಲ,ಕಾಮಗಾರಿಗಳೆಲ್ಲಾ ಕುಂಟುತ್ತಾ ಸಾಗುತ್ತಿದೆ, ಅದರಲ್ಲೂ ಮೀಸಲಾತಿ ಕಾರಣ ಅಧ್ಯಕ್ಷ,ಉಪಾಧ್ಯಕ್ಷರ ನೇಮಕ ಕೂಡಾ ಆಗಿಲ್ಲ,ಇದರಿಂದ ತುಂಬಾ ತೊಂದರೆ ಆಗುತ್ತಿದೆ,ಎಲ್ಲದಕ್ಕೂ ಮುಖ್ಯಾಧಿಕಾರಿಯ ಬಳಿಯೇ ಬರಬೇಕೆಂದು ಪಟ್ಟಣ ಪಂಚಾಯ್ತಿ ಮುಂಡಗೋಡದ ವಾರ್ಡ್ ಸದಸ್ಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ, ಅದರಲ್ಲಿ ನಾಗರಿಕರು ಕೂಡಾ ಎಂಜಿನಿಯರ್ ಬಳಿ ಯಾವುದಾದರೂ ಕೆಲಸ ಮಾಡಿಕೊಳ್ಳಬೇಕೆಂದು ಕಚೇರಿಗೆ ಆಗಮಿಸಿದರೆ ವಾರಗಟ್ಟಲೆ ಕಾಯಬೇಕು ಎಂದು ಸಾರ್ವಜನಿಕರು ಕೂಡಾ ವ್ಯವಸ್ಥೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಯಾವುದಾದರೂ ಕಾಮಗಾರಿ ಕುರಿತು ಕಿರಿಯ ಎಂಜಿನಿಯರ್ ಬಳಿ ಕೇಳಿದರೆ ನಮಗೂ ಸಾಕಾಗಿದೆ,ಕೆಲಸ ಮಾಡಿ ಮೊದಲು ಈ ಪ್ರಭಾರಿಯಿಂದ ನಮ್ಮನ್ನು ಮುಕ್ತಿ ಮಾಡಿ ಎಂದು ಬೇಜವಾಬ್ದಾರಿ ಉತ್ತರ ಕೊಡುತ್ತಾರೆ ಆದ ಕಾರಣ ಮುಂಡಗೋಡ ಪಟ್ಟಣ ಪಂಚಾಯ್ತಿಗೆ ಪೂರ್ಣ ಪ್ರಮಾಣ ಕಿರಿಯ ಎಂಜಿನಿಯರ್ ಅವರನ್ನು ನಿಯುಕ್ತಿ ಮಾಡಿ ಎಂದು ಸಾರ್ವಜನಿಕರು ಮೇಲಾಧಿಕಾರಿಗಳಿಗೆ,ಜನಪ್ರತಿನಿಧಿಗಳಿಗೆ ಒತ್ತಾಯ ಮಾಡುತ್ತಿದ್ದಾರೆ.

ವರದಿ:ಶಿವರಾಜ್ ಶಿರಾಲಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ