ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮೈಸೂರು ಮಹಾದೇವ ಮಹಾರಾಜರ ಜಾತ್ರಾ ಮಹೋತ್ಸವ

ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ತಾಂಬಾ ಗ್ರಾಮದಲ್ಲಿ ಸತತವಾಗಿ 34 ವರ್ಷಗಳಿಂದ,
ಗ್ರಾಮದ ಪ್ರತಿ ರಸ್ತೆಯ ಉದ್ದಕ್ಕೂ,
ಮೈಸೂರು ಮಹಾದೇವ ಮಹಾರಾಜರ ಭಾವಚಿತ್ರವನ್ನು ಮೆರವಣಿಗೆ ಮೂಲಕ ಪ್ರದರ್ಶನ ಮಾಡುತ್ತಾ ಜಾತ್ರೆಯನ್ನು ಯಶಸ್ವಿಯಾಗಿ ಆಚರಿಸಲಾಗುತ್ತದೆ.
ಸುಮಾರು ಹತ್ತು ವರ್ಷಗಳ ಹಿಂದೆ ಗ್ರಾಮಕ್ಕೆ ಅತೀವ ನೀರಿನ ತೊಂದರೆ ಹಾಗೂ ಬರಗಾಲ ಬಿದ್ದಿರುವಾಗ,ಎಲ್ಲಿಯೂ ಬೋರ್ ಗಳನ್ನು ಕೊರೆದರೂ ನೀರು ಆಗುತ್ತಿರಲಿಲ್ಲ,
ಆಗ ಮಠದಲ್ಲಿ ಏಕಕಾಲದಲ್ಲಿ ಮೂರು ಕೊಳವೆ ಬಾವಿಗಳನ್ನು ಕೊರೆದಾಗ,ಪ್ರತಿ ಕೊಳವೆ ಬಾವಿಗೂ ಸರಿಸುಮಾರು ನಾಲ್ಕರಿಂದ ಆರು ಇಂಚುಗಳಷ್ಟು ನೀರು ಚಿಮ್ಮಿದವು.
ಮತ್ತು ಆಗಿನ ದಶಕದಲ್ಲಿ ಅನಾರೋಗ್ಯಕ್ಕೆ ಒಳಗಾದ ಎಷ್ಟೊ ಭಕ್ತಾದಿಗಳಿಗೆ ಗುಣಪಡಿಸಿದ ಉದಾಹರಣೆಗಳಿವೆ.
ಆಗಿನಿಂದ ಭಕ್ತಾದಿಗಳು ಹೆಚ್ಚಾಗತೊಡಗಿದರು,
ಹೊರ ರಾಜ್ಯದಿಂದ ಸಹಿತ ಭಕ್ತಾದಿಗಳು ಬಂದು ಈ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ.
ಇನ್ನೂ ಅನೇಕ ಪವಾಡಗಳನ್ನು ಮಾಡಿದ್ದಾರೆ.
ಪ್ರತಿ ವರ್ಷವೂ ಇನ್ನೂರಕ್ಕೂ ಹೆಚ್ಚು ಸಾಧು,ಸಂತರು ಈ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ.
ಜಾತ್ರಾ ಮಹೋತ್ಸವದ ಮುಗಿದ ನಂತರ,
ಪ್ರತಿ ಸಾಧು ಸಂತರಿಗೂ ಐದು ನೂರರಿಂದ ಸಾವಿರ ವರೆಗೂ ಗುರು ದಕ್ಷಿಣೆಯಾಗಿ ಹಣವನ್ನು ನೀಡುವ ವಾಡಿಕೆ ಇದೆ.
ಈ ಕಾರ್ಯಕ್ರಮದಲ್ಲಿ
ಗ್ರಾಂ ಪಂ ಅಧ್ಯಕ್ಷರು ರಜಾಕ್ ಚಿಕ್ಕಗಸಿ,ಮಾಜಿ ತಾಲೂಕ ಪಂಚಾಯತ ಸದಸ್ಯರು ಪ್ರಕಾಶ್ ಮುಂಜಿ,ಜಕ್ಕಪ್ಪ ಹತ್ತಳ್ಳಿ,ಮಲ್ಲಿಕಾರ್ಜುನ ಹೊರ್ತಿ, ಹಣಮಂತ ಕಾಳೆ,ದತ್ತು ಬಂಕಲಗಿ,ಚಿದಾನಂದ ಗೌಡಗಾವಿ, ವಿಶ್ವನಾಥ್ ಮಸಳಿ,ಗಂಗಾರಾಮ ಹಜೇರಿ, ಹೊನ್ನಪ್ಪ ಕಳ್ಳಿ, ನಾಗು ದೊಡಮನಿ,ಮೋನಪ್ಪ ನಾವಿ, ಶ್ರೀಶೈಲ ಹೊರ್ತಿ,ಯಲ್ಲಾಲಿಂಗ ಬಿರಾದಾರ,ಮುರ್ತುಜ ಚಿಕ್ಕಗಸಿ,ರವಿ ಉಟಗಿ,ಗೋಪಾಲ ನಂದಿಕೋಲ,ಶಿವು ನಾವಿ,ಪಿಂಟು ರಜಪೂತ,ಲಕ್ಕಪ್ಪ ಕಳ್ಳಿ, ಕಾಸು ಹೊನ್ನಾಳ್ಳಿ, ಅನೇಕ ಪ್ರಮುಖರು ಹಾಗೂ ಭಕ್ತಾದಿಗಳು ಪಾಲ್ಗೊಂಡಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ