ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಲಂಚಕ್ಕೆ ಬೇಡಿಕೆ ಇಟ್ಟು ಲೋಕಾಯುಕ್ತರ ಬಲೆಗೆ ಬಿದ್ದ ಕೆ.ಕೆ.ಅರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ಮತ್ತು ಚಾಲಕ

ಕೊಟ್ಟೂರು:ಹರಪನಹಳ್ಳಿ ಘಟಕದ ಕಂಡಕ್ಟರ್ ಕಮ್ ಡ್ರೈವರ್ ಮೇಲಿದ್ದ ಚಾರ್ಜ್ ಶೀಟ್ ಪ್ರಕರಣ ಮುಕ್ತಾಯ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟು ಲಂಚದ ಹಣ 20,000/-ಸ್ವೀಕರಿಸುವಾಗ ಹೊಸಪೇಟೆ ಲೋಕಾಯುಕ್ತರ ಬಲೆಗೆ ಬಿದ್ದ ಕೆ,ಕೆ,ಅರ್,ಟಿ,ಸಿ ಹೊಸಪೇಟೆ ವಿಭಾಗೀಯ ನಿಯಂತ್ರಣಾಧಿಕಾರಿ ಮತ್ತು ಚಾಲಕ ಹೊಸಪೇಟೆ ಲೋಕಾಯುಕ್ತ ಪೋಲಿಸ್ ಠಾಣೆಯಲ್ಲಿ ದಿನಾಂಕ 26-06-2024 ರಂದು ಕೆ .ಕೆ .ಅರ್. ಟಿ .ಸಿ ಹರಪ್ಪನಹಳ್ಳಿ ಘಟಕದ ಕಂಡಕ್ಟರ್ ಕಮ್ ಡ್ರೈವರ್ ಆಗಿರುವ ಶ್ರೀ ಮಹಾಬಲೇಶ್ವರ ಭಾಗ್ವತ್ ರವರು ಠಾಣೆಗೆ ಬಂದು ದೂರು ನೀಡಿದ್ದು ತಮ್ಮ ಮೇಲೆ 2021 ರಲ್ಲಿ ದಾಖಲಾದ ಚಾರ್ಜ ಶೀಟ್ ಪ್ರಕರಣದ ಮಕ್ತಾಯಕ್ಕಾಗಿ ಕೆ.ಕೆ.ಅರ್ .ಟಿ.ಸಿ. ವಿಭಾಗೀಯ ನಿಯಂತ್ರಣಧಿಕಾರಿಯವರಾದ ಜಗದೀಶ್ ವಿ.ಎಸ್.ರವರು ಜೂನ್ ತಿಂಗಳಲ್ಲಿ ವಿಚಾರಣೆ ನಡೆಸಿ ಅವರ ಮೇಲಿನ ದೋಷಾರೋಪಣೆಯನ್ನು ಕಡಿಮೆ ಮಾಡಿ ಮುಕ್ತಾಯ ಮಾಡಲು 25000/-ರೂಗಳ ಲಂಚದ ಹಣಕ್ಕೆ ಬೇಡಿಕೆ ಇಟ್ಟು ಲಂಚದ ಹಣವನ್ನು ತಮ್ಮ ಜೀಪ್ ಚಾಲಕ ಮಲ್ಲಿ ಕಾರ್ಜನ ರವರ ಬಳಿ ಕೊಡುವಂತೆ ಸೂಚಿಸಿದ್ದು
ಈ ಸಂಬಂಧ ಮಹಾಬಲೇಶ್ವರ ರವರು ರೂ 5000/ ರೂ.ಗಳನ್ನು ನೀಡಿದ್ದು ಬಾಕಿ ಲಂಚದ ಹಣವನ್ನು ಕೊಡಲು ಇಷ್ಟವಿಲ್ಲದೆ ದಿನಾಂಕ 26-06-2024 ರಂದು ದೂರು ನೀಡಿದ್ದು ಸದರಿ ದೂರಿನ ಮೇರೆಗೆ ಹೊಸಪೇಟೆ ಲೋಕಾಯುಕ್ತಾ ಠಾಣಾ ಗುನ್ನೆ ನಂ : 04/2024 ರಿತ್ಯಾ ಪ್ರಕರಣ ದಾಖಲಿಸಿ ಸಂಜೆ 5- 30 ಗಂಟೆಗೆ ಪೋಲೀಸ್ ಉಪಾಧೀಕ್ಷಕರಾದ ಶ್ರೀ ಶೀಲವಂತ ಹೊಸಮನಿ ಪೋಲಿಸ್
ನೀರಿಕ್ಷಕರಾದ ಶ್ರೀ ರಾಜೇಶ್ ಎಸ್ ಲಮಾಣಿ. ಶ್ರೀ ಸುರೇಶ್ ಬಾಬು ಅರ್ ಬಿ. ಸಿಬ್ಬಂದಿಯವರಾದ ಸುಭಾಷ. ಸುರೇಶ್.ಶ್ರೀನಿವಾಸ.ರೇಣುಕಪ್ಪ. ಕುಮಾರ್ ನಾಯ್ಕ್ .ಚನ್ನಬಸಪ್ಪ.ಮಾರುತಿ. ಮತ್ತು ಕೃಷ್ಣರವರು ದಾಳಿ ಮಾಡಿ ಲಂಚದ ಹಣ ರೂ 20.000/ಗಳನ್ನು ವಿಭಾಗಿಯಾ ನಿಯಂತ್ರಣಾಧಿಕಾರಿಯವರ ಜೀಪ್ ಚಾಲಕ ಮಲ್ಲಿಕಾರ್ಜುನ ರವರು ಸ್ವೀಕರಿಸಿ ಸಿಕ್ಕಿಬಿದ್ದಿದ್ದು ಸದರಿ ಹಣಕ್ಕೆ ಬೇಡಿಕೆ ಇಟ್ಟಿದ್ದ ವಿಭಾಗಿಯ ನಿಯಂತ್ರಧಿಕಾರಿ ಜಗದೀಶ್ ವಿ.ಎಸ್.ರವರನ್ನು ದಸ್ತಗಿರಿ ಮಾಡಿ ಮಂದಿನ ಕ್ರಮ ಕೈಗೊಂಡಿದ್ದಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ