ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮತರಾರರಿಗೆ ಅಭಿನಂದನೆ ಕಾರ್ಯಕ್ರಮಕ್ಕೆ ಸಿಎಮ್ ಆಗಮಿಸುವ ಹಿನ್ನಲೆ ಕಾರ್ಯಕ್ರಮ ಯಶಸ್ವಿಯಾಗಿಸಿ:ಮಾಜಿ ಶಾಸಕ ಆರ್ ನರೇಂದ್ರ

ಹನೂರು:ನಮ್ಮ ಸರ್ಕಾರದ ಜನಪ್ರಿಯ ಯೋಜನೆಗಳಾದ
ಗ್ಯಾರಂಟಿ ಯೋಜನೆಯಗಳನ್ನು ಅನುಷ್ಠಾನಕ್ಕಾಗಿ ಹಾಗೂ ಲೋಕಸಭಾ ಕ್ಷೇತ್ರದ ಗೆಲುವು ಸಾದಿಸಿದ ಹಿನ್ನಲೆಯಲ್ಲಿ ಸಿಎಮ್ ಸಿದ್ದರಾಮಯ್ಯರವರು ಚಾಮರಾಜನಗರ ಜಿಲ್ಲೆಯಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಡಬೇಕು ಎಂದು ಮಾಜಿ ಶಾಸಕ ಆರ್ ನರೇಂದ್ರ ತಿಳಿಸಿದರು .
ಹನೂರು ಪಟ್ಟಣದ ಕಾಂಗ್ರೇಸ್ ಪಕ್ಷದ ಕಛೇರಿಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು ನೂತನ ಸಂಸದರು ಆಯ್ಕೆಯಾದ ನಂತರ ಇದೆ ಮೊದಲ ಬಾರಿಗೆ ಮತದಾರರಿಗೆ ಕೃತಜ್ಞತೆ ಸಭೆಯನ್ನು ಏರ್ಪಡಿಸಿರುವ ಹಿನ್ನಲೆಯಲ್ಲಿ
ಇದೇ ತಿಂಗಳು ಹತ್ತನೆ ತಾರೀಖಿನಂದು ನಡೆಯುವ ಅಭಿನಂದನ ಸಮಾರಂಭದಲ್ಲಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿಬೇಕಾಗಿದೆ ಕಳೆದ ನಡೆದ ಚುನಾವಣೆಯಲ್ಲಿ ನಮ್ಮ ಕ್ಷೇತ್ರದಲ್ಲೆ ಅತಿ ಹೆಚ್ವು ಮತ ನೀಡಿದ ನಿಮಗೆ ಧನ್ಯವಾದಗಳು,ರಾಜ್ಯ ನಾಯಕರು ಸೇರಿದಂತೆ ಎಲ್ಲರೂ ಭಾಗವಹಿಸುವ ಹಿನ್ನಲೆಯಲ್ಲಿ ಪ್ರತಿ ಗ್ರಾಮದ ಮುಖಂಡರುಗಳು ಎಲ್ಲಾ ಆಗಮಿಸಿ ಜೊತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಸೇರಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಬೇಕು ಹೆಚ್ಚಿನ ಸಂಖ್ಯೆಯಲ್ಲಿ ತಳಮಟ್ಟದ ಕಾರ್ಯಕರ್ತರು ಆಗಮಿಸಬೇಕು, ಮುಂದಿನ ದಿನಗಳಲ್ಲಿ ಹೋಬಳಿ ಮಟ್ಟದಲ್ಲಿ ಮುಖಂಡರ ಸಭೆಯನ್ನು ಮಾಡಲು ತಿರ್ಮಾನಿಸಲಾಗಿದೆ ಅಲ್ಲದೆ ಎಲ್ಲರೂ ತಾವು ನೀಡಿದ ಮತಕ್ಕೆ ಅನುಗುಣವಾಗಿ ನಮ್ಮ ಜಿಲ್ಲೆಯ ಎಲ್ಲಾ ಜನಾಂಗದವರ ನಂಬಿಕೆಯನ್ನು ಹಿಮ್ಮಡಿಗೊಳಿಸಬೇಕು ನನ್ನ ಅವಧಿಯಲ್ಲಿ ನಡೆದ ಕಾಮಗಾರಿಗಳು ಹಾಗೆ ಹುಳಿದಿದೆ ನಾನು ಈಗಾಗಲೇ ಗುಂಡಲ್ ,ಡ್ಯಾಂ,ರಸ್ತೆಗಳು ಸೇರಿದಂತೆ ಇನ್ನಿತರರ ಕೆಲಸಗಳನ್ನು ಸಚಿವರಲ್ಲಿ ಮನವಿ ಮಾಡಿದ್ದೇನೆ ನಮಗೆ ಆಗಬೇಕಿದ್ದ ಆಸ್ಪತ್ರೆಯನ್ನು ಯಳಂದೂರಿಗೆ ವರ್ಗಾವಣೆ ಮಾಡಲಾಗಿದೆ ,ಬೆಟ್ಟದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಮಾಡಲು ತಿರ್ಮಾನಿಸಲಾಗುವುದು ಕ್ಷೇತ್ರದಲ್ಲಿನ ಜಮಿನು ಸಮಸ್ಯೆಗಳಾದ ಹೂಗ್ಯ,ನಾಗಣ್ಣನಗರ ,ಜಾಗೆರಿ ಸೇರಿದಂತೆ ಇನ್ನಿತರರ ಕೆಲವು ಕಡೆ ಜಮಿನು ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಲಾಗುವುದು ಕ್ಷೇತ್ರದಲ್ಲಿ ನಮ್ಮ ಮನೆತನದ
ಕೆಲಸ ಮಾಡಿದ ಮೆಲೆ ನಮಗೆ ಮತ ನೀಡಲು ಮನವಿ ಮಾಡಿಕೊಂಡರು ನಮ್ಮ ಮನೆತನದಿಂದ ಹದಿನಾಲ್ಕು ಚುನಾವಣಾ ನಡೆದಿದೆ,ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ನಡೆದ ವ್ಯವಸ್ಥೆ ಬಹಳ ನೋವುಂಟು ಮಾಡಿದೆ ಅಭಿವೃದ್ಧಿಯಾಗಬೆಕದರೆ ಸೂಕ್ತ ಅಭ್ಯರ್ಥಿ ಆಯ್ಕೆ ನಿಮ್ಮ ಕೈಯಲ್ಲಿದೆ ಹಣವನ್ನು ನೀಡಿ ಮರೆಯಾಗುವ ವ್ಯಕ್ತಿಗಳು ನಿಮಗೆ ಬೇಕಿತ್ತ ಎಂದರು. ತಿರುಪತಿ ತಿಮ್ಮಪ್ಪ ದರ್ಶನ ಮಾಡಬಹುದು ಆದರೆ ಅವರ ದರ್ಶನವಿಲ್ಲ ಕ್ಷೇತ್ರವು ಅಭಿವೃದ್ಧಿ ಮಾಡುವುದು ಶಾಸಕರ ಅಭಿಪ್ರಾಯ ಮುಖ್ಯ ನಮ್ಮ ಕ್ಷೇತ್ರದಲ್ಲಿ ಹಲವಾರು ಸಮಸ್ಯೆಗಳನ್ನು ಬಗೆಹರಿಸಲು ನಾನು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಜನರಲ್ಲಿ ದೇವರನ್ನು ಕಾಣಬಹುದು ಹತ್ತನೆ ತಾರೀಖಿನಂದು ಎಲ್ಲಾರು ಹೆಚ್ವಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷರಾದ ಕೆ ಈಶ್ವರ್, ಉದ್ಯಮಿ ರಂಗಸ್ವಾಮಿ,ಬಸವರಾಜು,ವೆಂಕಟರಮಣ ನಾಯ್ಡು,ಗಿರೀಶ್ ಕುಮಾರ್ ,ಮಣಿ ,ನಟರಾಜು ,ಸಿದ್ದರಾಜು,ಮಂಜು ,ಗೋವಿಂದರಾಜು ಸೇರಿದಂತೆ ಇನ್ನಿತರರು ಹಾಜರಿದ್ದರು.

ವರದಿ :ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ