ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ನನ್ನ ಅಮ್ಮ ನನಗೆ ಸ್ವರ್ಗ

ನನ್ನ ಅಮ್ಮ ನನಗೆ ಸ್ವರ್ಗ
ಮೊದಲ ಚಂದ್ರ ತೋರಿದಾಕೆ
ಕಂಕುಳಲ್ಲಿ ಎತ್ತಿಕೊಂಡು
ಜಗವ ಸುತ್ತಿ ನಲಿಸಿದಾಕೆ//೧//

ಅಮ್ಮ ಎಂಬ ಮೊದಲ ಪದವು
ಕರವ ಹಿಡಿದು ಬರೆಸಿದಾಕೆ
ತಪ್ಪು ಮಾಡಿದಾಗ ತಿದ್ದಿ ತೀಡಿ
ಕಿವಿಯ ಹಿಂಡಿ ಹೇಳಿದಾಕೆ//೨//

ಬೀದಿ ಜಗಳ ಮನೆಗೆ ತರಲು
ಕೋಪದಿಂದ ಬರೆ ಹಾಕಿದಾಕೆ
ಮತ್ತೆ ಎನ್ನ ಅಪ್ಪಿಕೊಂಡು
ರಮಿಸಿ ಪ್ರೀತಿ ತೋರಿದಾಕೆ//೩//

ಅಳುವ ನುಂಗಿ ನಗುವ ಚಿಮ್ಮಿ
ಎನ್ನ ಹಸಿವು ಹಿಂಗಿಸಿದಾಕೆ
ಹಳೆಯ ಸೀರೆ ನೀನು ಉಟ್ಟು
ಹೊಸದು ಅಂಗಿ ತೊಡಿಸಿದಾಕೆ/

ಅವ್ವ ನಿನ್ನ ಮಡಿಲಿನಿಂದ
ಜಗವ ಸೃಷ್ಟಿ ಮಾಡಿದಾಕೆ
ತಾಯಿಗಿಂತ ದೇವರಿಲ್ಲ
ನೀನೇ ಜಗದಿ ಹರಸಿದಾಕೆ//೫

ಕವಿ: ಹನುಮಂತರಾವ್ ನಾಗಪ್ಪಗೋಳ ಎಂ.ಎ,ಬಿಎಡ್ ಸಾಹಿತಿಗಳು.”ಆಕಾಶ ಕಾವ್ಯ”ಆಶ್ರಯ ಬಡಾವಣೆ ಗೋಕಾಕ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ