ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸಿರವಾರ ಪೊಲೀಸ್ ಠಾಣೆಯಲ್ಲಿ ಮೊಹರಮ್ ಶಾಂತಿ ಸಭೆ:ಅಲಾಯಿ ಕುಣಿತ ಹೊರತುಪಡಿಸಿ ಮೊಹರಮ್ ಆಚರಣೆಗೆ ಯಾವುದೇ ಅಡ್ಡಿ ಇಲ್ಲ-ಶಶಿಕಾಂತ ಎಂ

ರಾಯಚೂರು/ಸಿರವಾರ: ಈ ಹಿಂದೆ ಮೊಹರಮ್ ಹಬ್ಬದಲ್ಲಿ ಗಲಾಟೆ, ಮಾರಣಾಂತಿಕ ಹಲ್ಲೆಗಳು ಜರುಗಿದ ಕಾರಣಕ್ಕೆ ಅಲಾಯಿ ಕುಣಿತ ನಿಷೇಧಿಸಲಾಗಿದೆ ಉಳಿದಂತೆ ದೇವರುಗಳ ಪೂಜೆ, ಮೆರವಣೆಗೆ ಆಚರಣೆಗೆ ಯಾವುದೇ ಅಡ್ಡಿ ಇಲ್ಲ ಎಂದು ಸಿಪಿಐ ಶಶಿಕಾಂತ ಅವರು ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಜರುಗಿದ ಮೊಹರಮ್ ಶಾಂತಿ ಸಭೆಯನ್ನುದ್ಧೇಶಿಸಿ ಅವರು ಮಾತನಾಡಿದರು, ಸಭೆಯಲ್ಲಿ ಸಾರ್ವಜನಿಕರು ಹೇಗಾದರೂ ಮಾಡಿ ಅಲಾಯಿ ಕುಣಿತ ಪ್ರಾರಂಭಿಸಬೇಕು ಯಾವುದೇ ಗಲಾಟೆಗಳ ನಡೆಯದಂತೆ ಪಟ್ಟದ ಎಲ್ಲಾ ವರ್ಗಗಳ ಮುಖಂಡರು ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಕೆಲವರು ಒತ್ತಾಯಿಸಿದರು ಆಗ ಸಿಪಿಐ ಶಶಿಕಾಂತ ಅವರು ಪ್ರಕರಣಗಳು ಇನ್ನೂ ಕೋರ್ಟ್ ನಲ್ಲಿ ನಡೆಯುತ್ತಿರುವುದರಿಂದ ಅನುಮತಿ ಕೊಡಲು ಸಾಧ್ಯವಿಲ್ಲ ಮುಂದೆ ಪ್ರಕರಣಗಳು ಮುಕ್ತಾಯಗೊಂಡಾಗ ಕೆಲ ವರ್ಷಗಳವರೆಗೆ ಕಾದರೂ ಅದರ ಜವಾಬ್ದಾರಿ ತೆಗೆದುಕೊಳ್ಳುವವರು ಬೇಕು ಸಧ್ಯಕ್ಕೆ ನೀವು ಕೇಳಿದಂತೆ ಅಲಾಯಿ ಕುಣಿತ ನಡೆಯೊಲ್ಲ ಹಬ್ಬ ಆಚರಣೆಗೆ ಯಾವುದೇ ತೊಂದರೆಯೂ ಇಲ್ಲ ಆದಾಗ್ಯೂ ಯಾರಾದರೂ ಅಲಾಯಿ ಕುಣಿಯುವುದು ಕಂಡುಬಂದಲ್ಲಿ ನಿರ್ಧಾಕ್ಷಿಣ್ಯವಾಗಿ ಅವರ ಮೇಲೆ ಕ್ರಮಕೈಗೊಳ್ಳುವುದಾಗಿ ಎಚ್ಚರಿಸಿ ಮೊಹರಮ್ ಹಬ್ಬ ಶಾಂತಿಯುವಾಗಿ ಆಚರಣೆಗೆ ಎಲ್ಲಾರೂ ಸಹಕರಿಸಬೇಕೆಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಪಿ.ಎಸ್.ಐ ಗುರುಚಂದ್ರ ಯಾದವ್, ಮುಸ್ಲಿಮ್ ಧರ್ಮ ಗುರುಗಳಾದ ಮಂಜೂರ್ ಹಸೇನ್ ಖಾಜಿ ನವಾಜ್ ಖಾಜಿ ಸೇರಿದಂತೆ ಎಲ್ಲಾ ಸಮುದಾಯಗಳ ಮುಖಂಡರು ಇದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ