ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಭೂ ಮಾಫಿಯಾ ಮತ್ತು ರಿಯಲ್ ಎಸ್ಟೇಟ್ ಏಜೆಂಟ್ ಕಡಿವಾಣ ಇಲ್ಲದೆ ಗ್ರಾಮೀಣ ಪ್ರದೇಶದ ರೈತರು ಜಮೀನು ಉಳಿಸಿಕೊಳ್ಳಲು ಹರ ಸಾಹಸ

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಚಿಕ್ಕಕುರುಬರಹಳ್ಳಿ ಗ್ರಾಮದ ಹಳೆ ಸರ್ವೆ ನಂ 50/1 ಹಾಗೂ ಹೊಸ ಸರ್ವೆ ನಂ.50/4 ರಲ್ಲಿ 06-10 ಗುಂಟೆ ಜಮೀನಿನಲ್ಲಿ ಗ್ರಾಮೀಣ ಭಾಗದ ರೈತರಿಗೆ ಯಾವುದೇ ನೋಟೀಸ್ ನೀಡದೆ ಹಾಗೂ ಸರ್ವೆ ಮಾಡಿಸದೆ ಅವರಿಗೆ ಇಷ್ಟ ಬಂದ ಹಾಗೆ ದೌರ್ಜನ್ಯದಿಂದ ಕಾಂಪೌಂಡ್ ಹಾಕಲು ಯತ್ನಿಸುತ್ತಿರುವುದನ್ನು ವಿರೋಧಿಸಿದ್ದಾರೆ.
ಗುಡಿಬಂಡೆ ತಾಲ್ಲೂಕು ಚೆಂಡೂರು ಗ್ರಾಮದ ಆದಿನಾರಾಯಣಪ್ಪ, ನಾರಾಯಣಪ್ಪ, ವೆಂಕಟರಮಣಪ್ಪ, ಮಾರಮ್ಮ ಹಾಗೂ ಪಾಪಣ್ಣ ರೈತರು ಮುಂಗಾರಿನಲ್ಲಿ ತಮ್ಮ ಸ್ವಾಧೀನ ಅನುಭವದಲ್ಲಿ ಇರುವ ಜಮೀನಿನಲ್ಲಿ ಬೆಳೆಗಳನ್ನು ಇಟ್ಟುಕೊಂಡಿರುತ್ತಾರೆ. ಬುಧವಾರ ಮಧ್ಯಾಹ್ನ ಸ್ಥಳೀಯ ಹಾಗೂ ಅಕ್ಕ ಪಕ್ಕದ ರೈತರ ಜಮೀನುಗಳಿಗೆ ಬೆಂಗಳೂರಿನ ಭೂಮಾಫಿಯಾ ಅವರು ಯಾವುದೇ ಮಾಹಿತಿ,ನೋಟೀಸ್ ಹಾಗೂ ಸರ್ವೆ ಮಾಡಿಸದೆ ಏಕಾ ಏಕಿ ಜೆಸಿಬಿಯನ್ನು ಬೆಳೆ ಇಟ್ಡಿರುವ ಜಮೀನಿನಲ್ಲಿ ಪ್ರವೇಶ ಮಾಡಿ ಬೆಳೆ ನಷ್ಟ, ಸ್ವಾಧೀನಕ್ಕೆ ಅಡ್ಡಿಪಡಿಸಿ, ಜೆ.ಸಿ.ಬಿ ಇಂದ ಬೆಳೆ ಹಾಳು ಮಾಡಿ, ಮುಳ್ಳುತಂತಿ ಬೇಲಿ ನಿರ್ಮಿಸಲು ಯತ್ನಿಸಿರುತ್ತಾರೆ. ಆದರೆ ದಿಕ್ಕುತೋಚದಂತಾದ ರೈತರು ತಮ್ಮ ಬೆಳೆ ನಾಶ ಮಾಡದಂತೆ ಜೆ.ಸಿ.ಬಿಯನ್ನು ಅಡ್ಡಗಟ್ಟಿ ತಮ್ಮ ಆಕ್ರಂದನ ವ್ಯಕ್ತಪಡಿಸಿರುತ್ತಾರೆ. ಈ ಬಗ್ಗೆ ರೈತರು ಗುಡಿಬಂಡೆ ಪೋಲೀಸ್ ಠಾಣೆಗೆ ದೂರು ನೀಡಿದ್ದಕ್ಕಾಗಿ ಪೊಲೀಸ್ ಮಧ್ಯ ಪ್ರವೇಶ ಮಾಡಿ ಇದು ಸಿವಿಲ್ ಪ್ರಕರಣ ನೀವು ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥ ಆಗುವವರೆಗೆ ಯಾವುದೇ ರೀತಿಯ ಕಾಂಪೌಂಡ್ ಹಾಕದೆ ರೈತರಿಗೆ ತೊಂದರೆ ನೀಡಬಾರದು ಎಂದು ತಿಳಿಸಿದ್ದಾರೆ. ಬಡ ಗ್ರಾಮೀಣ ರೈತರು ನ್ಯಾಯಕ್ಕಾಗಿ ತಮ್ಮ ಸಂಕಷ್ಟ ವ್ಯಕ್ತಪಡಿಸಿ ಸಂಬಂಧಿಸಿದ ಕಂದಾಯ ಅಧಿಕಾರಿಗಳು ಇವರಿಗೆ ನ್ಯಾಯ ಕೊಡಿಸಬೇಕೆಂದು ಮನವಿ ಮಾಡಿದ್ದಾರೆ.

ವರದಿ- ಮಂಜುನಾಥ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ