ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮುಂದಿನ ನಿಲ್ದಾಣ

ಶುದ್ಧ ಕನ್ನಡತಿ ಅಪರ್ಣಾರಿಗೆ ಅರ್ಪಣೆ

ಸತ್ಯವೋ ಮಿಥ್ಯವೋ ಗೊಂದಲದ ಗಳಿಗೆ
ಪರದೆಯ ಮೇಲೆ ಇನ್ನಿಲ್ಲ ಪದ ಕಂಡು
ಕೊರಗಿತ್ತು ಮನ ನಡುಗಿತ್ತು ಶ್ವಾಸ
ಅಘಾತವೋ ಅಪಘಾತವೋ ಆತ್ಮಘಾತವೋ
ಒಂದು ಕ್ಷಣ ಮೌನ ತಟ್ಟನೆ ಜಾರಿದ ಕಂಬನಿ
ಕೊನೆಗೂ ಅರಿಯಿತು ಆತ್ಮ ಹಾರಿದ್ದು ದಿಟ

ಕಿರುನಗೆಯ ಬಿಳಿ ಚೆಲುವೆ ಮಾಯಾವದಳು
ನಗುತ್ತಾ ನಗಿಸುತ್ತಾ ಬದುಕಿದ ದುಂಬಿ
ಕಾಣದೆ ಹಾರುತಿದೆ ಜಡ್ಡಿನ ಬಾಧೆಗೆ
ಬೆಂಕಿಯಲ್ಲಿ ಅರಳಿ ಬಾಣಲೆಯಲ್ಲಿ ಬೆಂದು
ಬಂಗಾರವಾಯಿತು ಕನ್ನಡದ ಪುಟದಲ್ಲಿ
ಉಳಿಯುವುದು ಅಳಿಯಿತು ಒಣಗಿದ ಕೊಂಬೆಯಂತೆ

ತಾಯ್ನೆಲದ ಪದಗಳಿಗೆ ಹೃದಯ ಅಡವಿಟ್ಟು
ಕರಿ ಮಣ್ಣ ಜನರ ಭಾವದಲ್ಲಿ ಬೆಸೆದು
ವಾಗ್ಮಿಯಾದಳು ಪಂಚನಹಳ್ಳಿಯ ಪುಟ್ಟ
ಮಾತನ್ನು ಹೂಡಿ ಕಾಯಕವ ಕಟ್ಟಿ
ನಿತ್ಯ ರೂಪಿಸಿದಳು ನಿರೂಪಣೆಯ ಚಾವಣಿ
ಶೃಂಗಾರ ನುಡಿಗೆ ಸೋಲು ಅಳಿದಿತ್ತು

ಹತ್ತಾರು ಜಗಲಿಗಳು ನೂರಾರು ಮಂಟಪಗಳು
ಗೆಳೆಯರಾಗಲು ಕಾಯುತ್ತಿದ್ದವು
ಮಾತಿನ ಪರಿಮಳ ಕಂಠದ ಮಧುಫಲಕ್ಕೆ
ಸರತಿ ಸಾಲಿನಲ್ಲಿ ಇಣುಕುತ್ತಿದ್ದವು
ಹೊತ್ತುಗಳು ಮುಳುಗಿ ನೇಸರ ಕಳೆದರು
ಮಾತ ಗೌರಿಯ ಮಾತೇ ಮಾಣಿಕ್ಯ

ಕನ್ನಡದ ಅಸ್ಮಿತೆ ಹೃದಯ ಹೂವು
ಕಾಣದ ದಾರಿ ಹಿಡಿದಿದೆ
ನುಡಿಗಳ ಮಲ್ಲಿಗೆ ವರ್ಣ ನಿಲ್ಲಿಸಿದೆ
ಎದೆಯತ್ತರದ ಆಲಕ್ಕೆ ನಂಜು ಬಿದ್ದಿದೆ
ಬರಸಿಡಿಲು ಬಡಿದು ಕತ್ತಲಾಗಿದೆ ಕರುನಾಡು
ಯಾರಿಗೂ ಹೇಳದೇ ಹೊರಟು ನಿಂತರು
ಮುಂದಿನ ನಿಲ್ದಾಣದತ್ತ..

-ಚೌಡ್ಲಾಪುರ ಸೂರಿ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ