ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಅಪರಿಚಿತತೆ

ರಾತ್ರಿ-
ಮಗ್ಗುಲಾದರೆ ಕಣ್ರೆಪ್ಪೆ ತಗಲುವಷ್ಟು ಹತ್ತಿರ
ಮೈ ಮೆತ್ತಿಕೊಳ್ಳುವ ಪರಿಚಿತರಾದರೂ
ಬೆಳ್ಳಂ ಬೆಳಗ ಹಗಲಲಿ
ಜನ್ಮಾಂತರದ ಅಪರಿಚಿತರು
ಮನಸ್ಸಿನ ಸಂದಿಗೊಂದಿಗಳಲಿ
ಎಂದೂ ಹೆಜ್ಜೆಯಿಕ್ಕದ
ರಮ್ಯಭಾವನೆಗಳ ನವಿರ
ಸ್ಪಂದನವೇನೆಂದೇ ತಿಳಿಯದ
ಕಡು ಅಪರಿಚಿತತೆಯ
ಅಯೋಮಯ ವ್ಯಸ್ತಪುರುಷ
ಬೆಳಕ ದೊಂದಿ
ಕೈಯಲಿದ್ದೂ ಎಣ್ಣೆಯನಿಕ್ಕಿ
ಬೆಳಕ ನೇಯಲಾರದ
ಅಕುಶಲಕರ್ಮಿ ನೀನೆಂದರೆ
ಕಟೋಕ್ತಿಯಲ್ಲ

ಕಣ್ಣು ಕಣ್ಣಲ್ಲಿ ಬೆರೆಸಿ
ತುಟಿಯ ನಗೆ ಹೆಕ್ಕಿ
ಕೆನ್ನೆ ಗುಣಿಯಲಿ ಹಾಸ್ಯದೊರತೆಯ
ರಸದುಂಬಿ ಹೃದಯಕ್ಕೆ ಕನ್ನ
ಹಾಕಲರಿಯದ
ಬರೀ ಆಕಾರದ ಡಿಂಬ
ಜೋಡಾಗಿ ಸಪಪದಿ ತುಳಿದ ಶಾಸ್ತ್ರ
ದಿಕ್ತಪ್ಪಿದವು ದಾರಿ ಕಳೆದು

ಬದುಕ ಯಾನದಲಿ
ಜೊತೆಯಾಗಿ ಹುಟ್ಟ ಹಿಡಿದವರು
ಭರತ ಇಳಿತದ ಹಾದಿಗುಂಟ
ಸಾಮರಸ್ಯವಿರದ
ವಿಮುಖ ಪಯಣದ ಹೆಜ್ಜೆ
ಸರಸ-ಸುಮ್ಮಾನ ಸತ್ತ
ನಿರ್ವ್ಯಾಜ-ನಿರ್ಮೋಹ ನಿಟ್ಟುಸಿರು
ಗುರುತು ಗುರಿಯಿರದ ಪಯಣ
ಅಸಾಂಗತ್ಯ ದಾಂಪತ್ಯ

ಲೇಖಕಿ: ವೈ.ಕೆ.ಸಂಧ್ಯಾ ಶರ್ಮ, ಬೆಂಗಳೂರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ