ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ತಾಳೆ ಬೆಳೆ ಮೇಘಾಡ್ರೈವ್ ಸಸಿ ನೆಡುವ ಕಾರ್ಯಕ್ರಮ

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಆಳೂರ ಗ್ರಾಮದಲ್ಲಿ ತೋಟಗಾರಿಕೆ ಇಲಾಖೆ ಹಾಗೂ 3f ಆಯಿಲ್ ಪಾಮ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಮೇಘಾ ಡ್ರೈವ್ ತಾಳೆ ಬೆಳೆ ಸಸಿ ನೆಡುವ ಕಾರ್ಯಕ್ರಮ ಜರುಗಿತು.ಆಳೂರ ಗ್ರಾಮದ ಶ್ರೀಸಿದ್ದರಾಮ ಕಾಂತಪ್ಪ
ಮಾವಿನಹಳ್ಳಿ ಇವರ ತೋಟದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಸುಮಿತ್ರಾ ನಾಯಕ ಹಾಗೂ ತೋಟಗಾರಿಕೆ ಇಲಾಖೆಯ AHO ಶ್ರೀ ರವೀಂದ್ರ ಬಾಲಗಾಂವ ಸಸಿ ನೆಟ್ಟು ಕಾರ್ಯಕ್ರಮ ಉದ್ದೇಶಿಸಿ ತಾಳೆ ಬೆಳೆ ಬೆಳೆದು ಆರ್ಥಿಕವಾಗಿ ರೈತರು ಮುಂದೆ ಬರಬೇಕೆಂದು ತಿಳಿಸಿದರು ಹಾಗೂ ಇಲಾಖೆಯಿಂದ ಬರುವ ಸಹಾಯಧನಗಳ ಬಗ್ಗೆ ವಿವರವಾಗಿ ತಿಳಿಸಿ ಕೊಟ್ಟರು ಹಾಗೂ 3f ಆಯಿಲ್ ಪಾಮ್ ಏರಿಯಾ ಮ್ಯಾನೇಜರ್ ಶಾಂತಪ್ಪ ರಡ್ಡಿ ತಾಳೆ ಬೆಳೆಯ ತಾಂತ್ರಿಕ ಮಾಹಿತಿ ಹೇಳಿದರು.ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಉಮೇಶ ಹೂಗಾರ,ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ಶ್ರೀಮತಿ ನರಸವ್ವ ಚಾಬುಕಸವಾರ ಹಾಗೂ ಸದಸ್ಯರುಗಳಾದ ಮೀನಾಕ್ಷಿ ಮಾವಿನಹಳ್ಳಿ, ಯಲ್ಲಾಲಿಂಗ ಸಲದಳ್ಳಿ,ಸುರೇಶ್ ಚಾಬುಕಸವಾರ, ಪ್ರಗತಿಪರ ರೈತರಾದಂತ ಮಹಾದೇವ ಮಾವಿನಹಳ್ಳಿ, ಪುಂಡಲಿಕ್ ಮೇಲಿನ ಕೇರಿ, ಹನುಮಂತ ನಾವಿ, ರೇವಣಸಿದ್ದ ಹೊನಕಟ್ಟಿ,ಪ್ರಕಾಶ ಮಾವಿನಹಳ್ಳಿ,ಅಪ್ಪು ಮಾವಿನಹಳ್ಳಿ,ಶಿವಾನಂದ ನಂದರಗಿ ಹಾಗೂ ಇನ್ನುಳಿದ ರೈತರು ಗ್ರಾಮಸ್ಥರು ಭಾಗಿಯಾಗಿದ್ದರು. ಕಾರ್ಯಕ್ರಮದ ಸ್ವಾಗತ ಭಾಷಣ ಆನಂದ ಅಗರಖೇಡ ನೆರವೇರಿಸಿ ಕೊಟ್ಟರು.

ವರದಿ:ಲೋಹಿತಕುಮಾರ ರೂಗಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ