ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಪೆಟ್ರೋಲ್ ಸುರಿದು ಮುಸ್ಲಿಂ ಕುಟುಂಬದ ಮನೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಬೆಳಗಲಿಯ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ನೂರಾಣಿ ಮಸೀದಿ ಹಿಂಭಾಗದಲ್ಲಿರುವ ದಸ್ತಗಿರ್ ಪೆಂಡಾರಿ ಇವರ ಮನೆಯ ಮೇಲೆ ಸಿನಿಮೀಯ ರೀತಿಯಲ್ಲಿ ದುಷ್ಕರ್ಮಿಗಳು ಅಂದಾಜು 250 ಲೀ ಸಿಂಟೆಕ್ಸ್ ನಲ್ಲಿ ಪೆಟ್ರೋಲ್ ತುಂಬಿಕೊಂಡು 2 hp ನೀರು ಎತ್ತುವ ಮೋಟಾರ್ ಮೂಲಕ ಮನೆಯ ಮೇಲೆ ಸಿಂಪಡಿಸಿ ಬೆಂಕಿ ಹಚ್ಚಿ ದುಷ್ಕರ್ಮಿಗಳು ಅತಿ ಕ್ರೂರ ಕೃತ್ಯವನ್ನು ಎಸೆಗಿದ್ದಾರೆ.

ಈ ಮನೆಯಲ್ಲಿ ಐದು ಜನ ಇದ್ದರು ಮಧ್ಯರಾತ್ರಿ 2 ಅಥವಾ 3 ಗಂಟೆಯ ಮಧ್ಯದಲ್ಲಿ ಈ ಕೃತ್ಯವು ನಡೆದಿರಬಹುದು ಎಂದು ಜಿಲ್ಲಾ ವರಿಷ್ಠಾಧಿಕಾರಿ ಹೇಳಿದರು.

ಮುಸ್ಲಿಂ ಕುಟುಂಬದ ಜೈಬಾನ್ ದಸಗಿರ್ ಪೆಂಡಾರಿ ವಯಸು 55, ಶಬಾನಾ ದಸ್ತಗಿರ್ ಪೆಂಡಾರಿ ವಯಸ್ಸು 26, ಈ ಇಬ್ಬರು ಘಟನೆಯಲ್ಲೇ ಸುಟ್ಟು ಸಾವನ್ನಪ್ಪಿದ್ದಾರೆ .
ದಸ್ತಗಿರ ಪೆಂಡಾರಿ ಹಾಗೂ ಸುಭಾನ್ ದಸ್ತಗಿರ್ ಪೆಂಡಾರಿ ತಂದೆ ಮಗ ಇವರಿಬ್ಬರೂ ನಿದ್ದೆಯಲ್ಲಿದ್ದ ಎಚ್ಚರಗೊಂಡು, ನಡೆಯುತ್ತಿರುವಂತಹ ಘಟನೆಯನ್ನು ಕಂಡು ಕೂಡಲೇ ಘಟನೆಯ ಸ್ಥಳದಲ್ಲಿದ್ದ ಮನೆಯ ಹೊರಗಡೆ ಪಾರಾಗಿದ್ದು,ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಸಿದ್ದಿಕ್ ಶೌಕತ್ ಪೆಂಡಾರಿ ಈತ ಕ್ಷಣದಲ್ಲಿ ಪಾರಾಗಿದ್ದಾನೆ. ಈ ವಿಷಯ ತಿಳಿದ ತಕ್ಷಣ ಪೊಲೀಸ್ ಇಲಾಖೆಯವರು ಸ್ಥಳಕ್ಕೆ ಭೇಟಿಕೊಟ್ಟು ಕಾರ್ಯಾಚರಣೆ ನಡೆಸಿದ್ದಾರೆ. ಬಾಗಲಕೋಟೆ ಎಸ್‌ಪಿ ಅವರು ಈ ಘಟನೆಯ ವಿಚಾರಣೆಗೆ ಮೂರು ತಂಡಗಳನ್ನು ಏರ್ಪಡಿಸಿದ್ದಾರೆ. ಈ ಘಟನೆಗೆ ಕಾರಣಗಳಾದ ದುಷ್ಕರ್ಮಿಗಳನ್ನು ಎಡಮುರಿ ಕಟ್ಟಲು ತಯಾರಾಗಿದ್ದಾರೆ ಹಾಗೂ ಈ ಘಟನೆ ಕುರಿತುಲೆ ಮುಧೋಳ ನಗರದ ಪೊಲೀಸ್ ಠಾಣೆಯಲ್ಲಿ ಕೊಲೆ ಮತ್ತು ಕೊಲೆ ಯತ್ನಕ್ಕೆ ಪ್ರಕರಣ ದಾಖಲಾಗಿದ್ದು ದಾ ಎಂದು ಬಾಗಲಕೋಟೆ ಜಿಲ್ಲಾ ಎಸ್ ಪಿ ಅಮರ್ನಾಥ್ ರೆಡ್ಡಿ ತಿಳಿಸಿದರು.

ವರದಿ ಮಹಿಬೂಬ್ ಎಂ ಬಾರಿಗಡ್ಡಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ