ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಇದ್ದೋರಿಗೆ ಮನೆ. ಇಲ್ದೊರಿಗೆ ಕಣ್ಣೀರು..ಸ್ವಂತ ಮನೆಗಾಗಿ ಬಡ ಮಹಿಳೆ ಕಷ್ಟ…

ಪಾವಗಡ:ಸರ್ಕಾರದ ಬಹಳಷ್ಟು ಯೋಜನೆಗಳ ಅಡಿಯಲ್ಲಿ ಕಡು ಬಡವರಿಗೆ ಮನೆ ನಿರ್ಮಾಣಕ್ಕೆ ಆದೇಶವಿದ್ದರೂ ಸಹ ಉಳ್ಳವರಿಗೆ ಮಾತ್ರ ಮನೆ ನೀಡಲಾಗುತ್ತಿದ್ದೂ, ಇಲ್ಲದವರಿಗೆ ಕಣ್ಣೀರಿನ ಗತಿಯೇ ಆಗಿದೆ.
ಪಾವಗಡ ತಾಲ್ಲೂಕು ವೈ.ಎನ್.ಹೊಸಕೋಟೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಎಸ್.ಸಿ.ಕಾಲೋನಿ ಯಲ್ಲಿ ವಾಸವಿರುವ ದೇವಿ ಎನ್ನುವ ಅವಿವಾಹಿತೆ ಮಹಿಳೆ ತಂದೆ ತಾಯಿಯನ್ನು ಕಳೆದುಕೊಂಡು 6 ವರ್ಷಗಳಿಂದ ಒಬ್ಬಂಟಿಯಾಗಿ ಜೀವನ ಸಾಗಿಸುತ್ತಿದ್ದೂ ಮನೆ ನಿರ್ಮಾಣಕ್ಕೆ ಆರ್ಥಿಕ ಶಕ್ತಿ ಇಲ್ಲದೆ ಮರದ ಕಟ್ಟಿಗೆ ಮೂಲಕ ಬ್ಯಾನರ್ ಗೋಡೆ, ಮೇಲ್ಚಾವಣಿಗೆ ತುಂಡು ತುಂಡು ಹೊಡೆದ ಸಿಮೆಂಟ್ ಶೀಟ್ ಬ್ಯಾನರ್ ಹೊದಿಕೆ ಹೊದಿಸಿಕೊಂಡು, ಮಳೆ ಗಾಳಿ ಬಂದಾಗ ಯಾವಾಗ ಮೇಲೆ ಬೀಳುತ್ತೋ ಅನ್ನುವ ಪ್ರಾಣ ಬಯದೊಂದಿಗೆ ಜೀವನ ಸಾಗಿಸುತ್ತಾ, ಸ್ಥಳೀಯ ಗ್ರಾಮ ಪಂಚಾಯತ್,ಪ್ರಜಾ ಪ್ರತಿನಿಧಿಗಳ ಬಳಿ ಸೂರು ವಿಚಾರ ಗಮನಕ್ಕೆ ತಂದರು ಸಹ ನನ್ನ ಕಷ್ಟಕ್ಕೆ ಸ್ಪಂದಿಸದೆ ಇದ್ದಾಗ ಪತ್ರಿಕಾ ಮಿತ್ರರಿಗೆ ಕಣ್ಣೀರ ಬಾದೆಯ ಮಾಹಿತಿ ನೀಡಿದಾಗ ಸದರಿ ಪತ್ರಿಕಾ ಮಿತ್ರರು ಹೆಲ್ಪ್ ಸೊಸೈಟಿ ಸಂಸ್ಥೆ ಗಮನಕ್ಕೆ ತರಲಾಗಿ ಕೂಡಲೇ ಸ್ಪಂದಿಸಿದ ಹೆಲ್ಪ್ ಸೊಸೈಟಿ ಸಂಸ್ಥೆ ಅಧ್ಯಕ್ಷರಾದ ಮಾನಂ ಶಶಿಕಿರಣ್ ಸ್ಥಳಕ್ಕಾಗಮಿಸಿ ಒಂಟಿ ಮಹಿಳೆಯ ನರಕಯಾ ತಾನೆ, ಶೌಚಾಲಯದ ದುಸ್ಥಿತಿ ಕಂಡು ಇಂತಹ ಸನ್ನಿವೇಶ ಯಾವ ಮಹಿಳೆಗೆ ಬರಬಾರದು ಎಂದು ಅವೇದನೆ ವ್ಯಕ್ತಪಡಿಸಿ, ಈ ಬಡ ಮಹಿಳೆಗೆ ಸೂರು ಕಲ್ಪಿಸುವ ಸಂಪೂರ್ಣ ಜವಾಬ್ದಾರಿ ಹಾಗೂ ಮನೆ ನಿರ್ಮಾಣದ ಸಂಪೂರ್ಣ ಖರ್ಚು ನಮ್ಮ ಸಂಸ್ಥೆ ವಹಿಸಳಿದೆ ಎಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ಬಡ ಮಹಿಳೆಗೆ ಒಂದು ತಿಂಗಳಿಗಾಗುವಷ್ಟು ದಿನಸಿ ಪದಾರ್ಥ ನೀಡಿ ಮಹಿಳೆಗೆ ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಬಡ ಮಹಿಳೆ ನನಗೆ ಸಹಾಯ ಹಸ್ತ ನೀಡಲು ಮುಂದೆ ಬಂದಂತಹ ಹೆಲ್ಪ್ ಸೊಸೈಟಿ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ