ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಗೋಮರ್ಸಿಯಲ್ಲಿ ಅದ್ದೂರಿ ಮೊಹರಂ ಹಬ್ಬದ ಆಚರಣೆ

ರಾಯಚೂರು:ಹಿಂದೂ ಮುಸ್ಲಿಮರ ಭಾವೈಕ್ಯತೆಯ ಪವಿತ್ರ ಮೊಹರಂ ಹಬ್ಬದ ಆಚರಣೆಯು ಸಿಂಧನೂರು ತಾಲೂಕಿನ ಗೋಮರ್ಸಿ ಗ್ರಾಮದಲ್ಲಿ ಬಹಳ ವಿಶಿಷ್ಟ ಹಾಗೂ ವಿಜೃಂಭಣೆಯಿಂದ ನಡೆಯಿತು. ಮೊಹರಂ ಕಡೆಯ ದಿನವಾದ ಬುಧವಾರ ಗೋಮರ್ಸಿ ಗ್ರಾಮದಿಂದ ಬೆಳಿಗ್ಗೆ ಐದು ಗಂಟೆಗೆ ಆರಂಭವಾದ ದೇವರುಗಳ ಸವಾರಿ ಪಕ್ಕದ ಮಾಡಶಿರಿವಾರ ಹಾಗೂ ಕನ್ನಾರಿ ಗ್ರಾಮಗಳಿಗೆ ತೆರಳಿ ತಲ ತಲಾಂತರದಿಂದ ಬಂದ ಆಲಾಯಿ ಬಿಲಾಯಿ ಮಾಡುವ ಸಂಪ್ರದಾಯದಂತೆ ಈ ವರ್ಷವೂ ಸಹ ನಡೆಯಿತು. ಈ ಸಂದರ್ಭದಲ್ಲಿ ಸಾವಿರಾರು ಜನ ಮಸೀದಿ ಬಳಿ ಸೇರಿ ರೋಮಾಂಚನದ ಸಂದರ್ಭವನ್ನು ಕಣ್ಣು ತುಂಬಿಕೊಂಡು ತಮ್ಮ ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಹರಕೆಯನ್ನು ತೀರಿಸಿ ಹಸೇನ್,ಹುಸೇನ್ ದೇವರಗಳ ಆಶೀರ್ವಾದವನ್ನು ಪಡೆದರು. ಗೋಮರ್ಸಿ ಗ್ರಾಮದಲ್ಲಿ ಇನ್ನೂ ಅದ್ದೂರಿಯಾಗಿ ಊರಿನ ಸರ್ವ ಜನಾಂಗದ ಸಹಭಾಗಿತ್ವದಲ್ಲಿ ಮೊಹರಂ ಹಬ್ಬದ ಕೊನೆಯ ದಿನದ ವಿಶಿಷ್ಟ ಆಚರಣೆಗಳನ್ನು ನೆರವೇರಿಸಿ. ನೂರಾರು ಯುವಕರು ಕುಣಿದು ಕುಪ್ಪಳಿಸಿ ಮೆರಗನ್ನು ತಂದರು.

ಗೋಮರ್ಸಿ ಗ್ರಾಮದ ಮೊಹರಂ ಹಬ್ಬವು ಸಿಂಧನೂರು ತಾಲೂಕಿನಲ್ಲಿ ನಡೆಯುವ ವಿಶಿಷ್ಟ ಆಚರಣೆಗಳಲ್ಲಿ ಒಂದಾಗಿದೆ. ಈ ಹಬ್ಬವು ಸುಗ್ಗಿಯ ಪೂರ್ವದಲ್ಲಿ ರೈತರ ಒಗ್ಗೂಡುವಿಕೆ,ಕುಶಿ, ಸಂತೋಷ,ನೆಮ್ಮದಿಯ ನೆರವೇರಿಕೆ ಮುಂಗಾರು ಹಾಗೂ ಹಿಂಗಾರು ಮಳೆ ಹಾಗೂ ಗ್ರಾಮದ ಜನ ಜೀವನದ ಬಗ್ಗೆ ವಿಶೇಷ ಹೇಳಿಕೆ ಕಾರ್ಯ ಜರುಗುವ ಕಾರ್ಯಕ್ರಮ ವಿಶೇಷತೆಯಿಂದ ಕೂಡಿರುತ್ತದೆ ಎಂದು ಮೊಹರಂ ಹಬ್ಬದ ಆಚರಣೆ ಸಮಿತಿಯ ಸದಸ್ಯ ಮುತ್ತವಲಿ ತಿಳಿಸಿದರು. ಇದೇ ಸಂದರ್ಭದಲ್ಲಿ ಗೋಮರ್ಸಿ ಗ್ರಾಮದ ಗುರು ಹಿರಿಯರು,ಗ್ರಾಮ ಪಂಚಾಯಿತಿ ಸರ್ವ ಸದಸ್ಯರು,ಸಮಿತಿ ಸದಸ್ಯರು,ಭಾಗವಹಿಸಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ