ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಬೆಲೆ ಕಟ್ಟಲಾಗದ ಬಳಪ ಹಿಡಿದ ಭಗವಂತ(ಗುರುಪೂರ್ಣಿಮೆಯ ವಿಶೇಷ)

ಅಕ್ಷರ ಕಲಿಸಿ ಬದುಕು ತೋರಿಸಿದವರು
ಮಾರ್ಗದರ್ಶನ ಮಾಡಿ ಹರಸಿ ಹಾರೈಸಿದವರು
ಪರ ಊರಿನಿಂದ ಬಂದು ಬೋಧಿಸಿದವರು
ಸ್ವಾರ್ಥವಿಲ್ಲದ ನಿಸ್ವಾರ್ಥ ಮನದ ಗುರುದೇವರು

ಬೆಳೆಸಿದರು ಅಜ್ಞಾನದಿಂದ ಜ್ಞಾನದ ಕಡೆಗೆ
ಸ್ಫೂರ್ತಿ ತುಂಬಿದರು ಪ್ರತಿ ಮಗುವಿನ ಸಾಧನೆಗೆ
ಪೂಜಿಸಿ ಬಳಪ ಹಿಡಿದ ಭಗವಂತನಿಗೆ
ಪ್ರೀತಿ ಮಮತೆಯ ಎರಡನೇ ತಾಯಿಗೆ

ತಮ್ಮ ಮಕ್ಕಳಂತೆ ಪ್ರೀತಿಸಿ ಮುದ್ದಿಸಿದರು
ಏನು ಇಲ್ಲದ ಮೆದುಳಿಗೆ ಜ್ಞಾನ ತುಂಬಿದರು
ನನ್ನಂತೆ ನನ್ನ ಶಿಷ್ಯ ಬೆಳೆಯಬೇಕು ಎಂದರು
ಮಕ್ಕಳ ಪಾಲಿಗೆ ಬೆಲೆ ಕಟ್ಟಲಾಗದ ಭಗವಂತನಾದರು

ಸೋತಾಗ ಬೆನ್ನು ತಟ್ಟಿ ಪ್ರೋತ್ಸಾಹಿಸಿದವರು
ಗೆದ್ದಾಗ ಶಿಷ್ಯರಿಗಿಂತ ಮುಂಚೆ ಖುಷಿ ಪಟ್ಟವರು
ಆರಕ್ಕೇಳದೆ ಮೂರಕ್ಕಿಳಿಯದೆ ಬದುಕು ಸಾಗಿಸಿದವರು
ಜೀವನಪೂರ್ತಿ ಸರಳ ಜೀವನ ನಡೆಸಿದವರು

ಗುರುದೇವ ನಿನ್ನ ನಂಬಿದರೆ ಮೋಸವಿಲ್ಲವಯ್ಯ
ಕಣ್ಣಿಗೆ ಕಾಣುವ ದೇವರು ನೀನಯ್ಯ
ಅಕ್ಷರ ಕ್ರಾಂತಿಗೆ ರೂವಾರಿ ನೀವಯ್ಯ
ನೀವಿಲ್ಲದೆ ಜಗವು ಶೂನ್ಯ ನಂಬಯ್ಯ

-ಶ್ರೀ ಮುತ್ತು ಯ.ವಡ್ಡರ ,ಶಿಕ್ಷಕರು
ಹೆಚ್ ಪಿ ಎಸ್ ಹಿರೇಮಳಗಾವಿ
ಬಾಗಲಕೋಟ
9845568484

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ