ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಎರಡು ಗ್ರಾಮಗಳಿಗೆ ಇನ್ನೊಂದು ಬಸ್ ಬಿಡುವಂತೆ ಒತ್ತಾಯಿಸಿ ಸರ್ಕಾರಿ ಬಸ್ ನಿಲ್ಲಿಸಿ ಅಗ್ರಹಿಸಿದ ವಿದ್ಯಾರ್ಥಿಗಳು ಗ್ರಾಮಸ್ಥರು

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ರಾಂಪುರ ಗ್ರಾಮಕ್ಕೆ 2 ಬಸ್ಸುಗಳು ಕೂಡ್ಲಿಗಿಯಿಂದ ಸೂಲದಹಳ್ಳಿ, ಪೂಜಾರಳ್ಳಿ, ಗಂಗಮ್ಮನಹಳ್ಳಿ ಗ್ರಾಮಗಳ ಮಾರ್ಗದಿಂದ ನಮ್ಮ ರಾಂಪುರ ಗ್ರಾಮಕ್ಕೆ ಬೆಳಿಗ್ಗೆ 9.15 ಕ್ಕೇ ಸರ್ಕಾರಿ ಬಸ್ಸು ಬರುತ್ತವೆ ಆದರೆ ನಮ್ಮ ಊರಿಗೆ ಬಂದಾಗ 2 ಬಸ್ಸುಗಳು ಕೂಡಾ ತುಂಬಿ ತುಳುಕಾಡುತ್ತಿರುತ್ತವೆ.
ಮತ್ತೆ ರಾಂಪುರ ಗ್ರಾಮದದಿಂದ ಕೊಟ್ಟೂರಿಗೆ ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಶಾಲಾ ಕಾಲೇಜಿಗೆ ಹೋಗುವ ಕಾರಣದಿಂದ ವಿದ್ಯಾರ್ಥಿಗಳು ಹರ ಸಾಹಸ ಪಟ್ಟು ಹೇಗೋ ಬಸ್ಸು ಹತ್ತಿ ಊರಿನಿಂದ ಶಾಲೆ ಕಾಲೇಜಿಗೆ ಹೊರಟರೆ
ಮತ್ತೆ ಹೊಸಕೋಡಿಹಳ್ಳಿಗೆ ಹೋದಾಗ ಅಲ್ಲಿ ಸಹ ವಿದ್ಯಾರ್ಥಿಗಳು ಬಸ್ಸು ಹತ್ತಲಾಗದೆ ದಿನಾಲೂ ಎಷ್ಟೋ ವಿದ್ಯಾರ್ಥಿಗಳು ಬಸ್ ನಲ್ಲಿ ಜಾಗ ಇಲ್ಲದೆ ಪಾದಯಾತ್ರೆ ಮೂಲಕ ಕೊಟ್ಟೂರು ಶಾಲೆ ಕಾಲೇಜ್ ಗೆ ಹೋಗುತ್ತಾರೆ ಹಾಗಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಾಂಪುರ ಮತ್ತು ಹೊಸಕೊಡಿಹಳ್ಳಿಗೆ ಮಾತ್ರ ದಿನ ಬೆಳಿಗ್ಗೆ 9 ಗಂಟೆಗೆ ಒಂದು ಬಸ್ಸು ಬಿಡಬೇಕು ಎಂದು ರಾಂಪುರ ಗ್ರಾಮದ ಶಿಕ್ಷಕರಾದ ಏಕಾಂತ ಮತ್ತು ಶಾಲಾ ಕಾಲೇಜ್ ನ ವಿದ್ಯಾರ್ಥಿಗಳು ಮತ್ತು ಊರಿನ ಪ್ರಮುಖರು ರಾಂಪುರ ಗ್ರಾಮದಲ್ಲಿ ಸರ್ಕಾರಿ ಬಸ್ಸು ನಿಲ್ಲಿಸಿ ಸಂಭಂದಪಟ್ಟ ಅಧಿಕಾರಿಗಳು ಅತೀಶೀಘ್ರದಲ್ಲಿ ನಮ್ಮಗ್ರಾಮಗಳಿಗೆ ಇನ್ನೊಂದು ಬಸ್ಸು ಬಿಡಬೇಕೆಂದು ಆಗ್ರಹಿಸಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ